ಅಕ್ರಮ ಗಣಿಗಾರಿಕೆ ತನಿಖೆ, ಎಸ್‌ಐಟಿ‌ ಅವಧಿ ಐದು ತಿಂಗಳು ವಿಸ್ತರಣೆ..!

ಬೆಂಗಳೂರು: ಅಕ್ರಮ ಗಣಿಗಾರಿಕೆಗಳ ಕುರಿತು ರಚನೆಯಾಗಿರುವ ಎಸ್‌ಐಟಿ ಕಾರ್ಯಾವಧಿ 5 ತಿಂಗಳ ಕಾಲ ಮುಂದುವರಿಸಲಾಗಿದೆ.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೂ‌ ಆದ ಸಂಪುಟ ಉಪಸಮಿತಿ ಅಧ್ಯಕ್ಷ ಜೆ.ಸಿ.ಮಾಧುಸ್ವಾಮಿ‌ ನಿಗದಿತ ಗಡುವಿನೊಳಗೆ ತನಿಖೆ ಪೂರ್ಣಗೊಳಿಸಲೇಬೇಕು ಎಂದು ಸೂಚಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಎಸ್ ಐಟಿ ಮುಂದಿನ 5 ತಿಂಗಳೊಳಗೆ ಸಂಪೂರ್ಣ ವರದಿ ಸಲ್ಲಿಸಲೇಬೇಕು.

ತನಿಖೆ ಹಂತದಲ್ಲಿ ಪರಸ್ಪರ ಇಲಾಖಾ ನಿಂದನೆ ಬೇಡ. ಐದು ತಿಂಗಳಲ್ಲಿ ಎಲ್ಲಾ ಮುಗಿಸಿ ಎಸ್‌ಐಟಿ ಕ್ಲೋಸ್ ಮಾಡಲೇಬೇಕು ಎಂದು ಸಂಪುಟ ಉಪಸಮಿತಿ ಸಭೆಯಲ್ಲಿ ಎಸ್ ಐಟಿಗೆ ಸ್ಪಷ್ಟ ಸೂಚನೆ ನೀಡಿದ ಜೆ.ಸಿ. ಮಾಧುಸ್ವಾಮಿ. ಏಳು ವರ್ಷಗಳಿಂದ ಅಸ್ತಿತ್ವದಲ್ಲಿರುವ ಎಸ್ ಐಟಿ ಅಕ್ರಮ ಗಣಿಗಾರಿಕೆಗಳ‌ ಕುರಿತು ತನಿಖೆ ನಡೆಸುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ದಾವೋಸ್ ಪ್ರವಾಸ ಡೌಟು?; ಇಂದು ದಿಲ್ಲಿಗೆ ಹಠಾತ್ ಭೇಟಿ!

Fri May 20 , 2022
ಬೆಂಗಳೂರು : ಸಿಎಂ ಬಸವರಾಜ್ ಬೊಮ್ಮಾಯಿ ಅವರ ದಾವೋಸ್ ಪ್ರವಾಸ ಇನ್ನೂ ಅನುಮಾನಾಸ್ಪದವಾಗಿದ್ದು, ಇಂದು ದಿಲ್ಲಿಗೆ ಹಠಾತ್ ಭೇಟಿ ನೀಡಲಿದ್ದಾರೆಂಬ ಸುದ್ದಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಇಂದಿನ‌ ಎಲ್ಲ ಕಾರ್ಯಕ್ರಮ ರದ್ಧುಗೊಳಿಸಲಾಗಿದೆ.ಸಿಎಂ ದಾವೋಸ್ ಪ್ರವಾಸ ಹಿನ್ನೆಲೆಯಲ್ಲಿ ದಿಲ್ಲಿಗೆ‌ ತೆರಳುತ್ತಿದ್ದಾರೆ ಎಂಬ ಮಾತಿನ ಮಧ್ಯೆಯೇ ಸಂಪುಟ ವಿಸ್ತರಣೆ ಮತ್ತು ನಾಯಕತ್ವ ಬದಲಾವಣೆ ಚರ್ಚೆಗೆ ಬಲ‌ ಬಂದಿದೆ. ಮಧ್ಯಾಹ್ನ 2.30 ಕ್ಕೆ ಸಿಎಂ ದಿಲ್ಲಿಗೆ ತೆರಳಲ್ಲಿದ್ದು, ಸಂಜೆಯೇ […]

Advertisement

Wordpress Social Share Plugin powered by Ultimatelysocial