ಬೆಂಗಳೂರಲ್ಲಿ ನೇಣಿಗೆ ಶರಣಾದ ಮಹಿಳಾ ಟೆಕ್ಕಿ

ಬೆಂಗಳೂರು, ಮಾ. 24- ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕೆಂಪಾಪುರದ ನಿವಾಸಿ ನಿಖಿಲಾ (37) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ನಿಖಿಲಾ ಅವರು ಅರ್ಜುನ್ ಎಂಬುವವರನ್ನು ವಿವಾಹವಾಗಿದ್ದು, ಕೆಂಪಾಪುರದಲ್ಲಿ ವಾಸವಾಗಿದ್ದರು. ದಂಪತಿ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ. ಈ ನಡುವೆ ನಿನ್ನೆ ನಿಖಿಲಾ ಮನೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸುದ್ದಿ ತಿಳಿದು ಅಮೃತಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತವು ಇನ್ನೂ ಕ್ಷಯರೋಗದ ವಿರುದ್ಧ ಕಠಿಣ ಹೋರಾಟವನ್ನು ಏಕೆ ಎದುರಿಸುತ್ತಿದೆ!!

Thu Mar 24 , 2022
ವಿಶ್ವ ಕ್ಷಯರೋಗ (ಟಿಬಿ) ದಿನ, ಮಾರ್ಚ್ 24 ರಂದು, ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಲ್ಬಣಗೊಂಡ ಗುರುತಿಸಲಾದ ಅತ್ಯಂತ ಹಳೆಯ ರೋಗಗಳ ವಿರುದ್ಧ ಭಾರತದ ಕಠಿಣ ಹೋರಾಟದ ಕಠೋರ ಜ್ಞಾಪನೆಯಾಗಿದೆ. ಮಾರ್ಚ್ 2021 ರಲ್ಲಿ ಪ್ರಕಟವಾದ ವಿಶ್ವ ಆರೋಗ್ಯ ಸಂಸ್ಥೆ (WHO) ನಿಂದ ಇತ್ತೀಚಿನ ಡೇಟಾ ಮತ್ತು ಮಾಡೆಲಿಂಗ್, 2019 ಕ್ಕಿಂತ 2020 ರಲ್ಲಿ ಅಂದಾಜು 1.4 ಮಿಲಿಯನ್ ಕಡಿಮೆ ಜನರು ಕ್ಷಯರೋಗದ ಆರೈಕೆಯನ್ನು ಪಡೆದಿದ್ದಾರೆ ಎಂದು ತೋರಿಸುತ್ತದೆ. TB […]

Advertisement

Wordpress Social Share Plugin powered by Ultimatelysocial