ಲಕ್ಷ್ಮೇಶ್ವರ ಪುರಸಭೆ ವತಿಯಿಂದ ರಾತ್ರೋರಾತ್ರಿ ಕಿಸಾನ ಜಾಗೃತಿ ಸಂಘದ ಬ್ಯಾನರ್ ತೆರವುಗೊಳಿಸಿದಕ್ಕೆ ಪುರಸಭೆಯ ಅಧಿಕಾರಿಗಳ ವಿರುದ್ಧ ಬ್ಯಾನರ್ ಕೊಡುವ ಮೂಲಕ ಕಿಸಾನ ಜಾಗೃತಿ ವಿಕಾಸ ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಂಡರಗಿ ಪಟ್ಟಣದಲ್ಲಿ ಡಿಸೆಂಬರ್ 19 ರಂದು ಸಂಘದ ವತಿಯಿಂದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಡಾ|| ಪುನೀತರಾಜಕುಮಾರ ಸ್ಮರಣಾರ್ಥವಾಗಿ 75 ಜೋಡಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಿನ್ನೆಲೆ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸಲಾಗಿತ್ತು.ಪಟ್ಟಣದ ಪಂಪ ಸರ್ಕಲನಲ್ಲಿರುವ ಬ್ಯಾನರ್ ನ್ನು ಪುರಸಭೆಯವರು ತೆರವು ಗೊಳಿಸಿ ರೈತ ಸಮೂಹಕ್ಕೆ ನೋವುಂಟು ಮಾಡಿದ್ದಾರೆ. ಹಾಗಾಗಿ ಪಟ್ಟಣದಲ್ಲಿ ಹಾಕಿರುವ ಸಂಘದ ಬ್ಯಾನರ್ ಗಳನ್ನು ಕಿತ್ತು ಪುರಸಭೆಗೆ ಕೊಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಾವು ಪುರಸಭೆಯಿಂದ ಪರವಾನಿಗೆ ತಗೆದುಕೊಂಡು ಬ್ಯಾನರ್ ಹಾಕಿದರು ತೆರವುಗೊಳಿಸಿದ್ದಾರೆ. ಆದರೆ ತಿಂಗಳ ಗಟ್ಟಲೆ ರಾಜಕೀಯ ವ್ಯಕ್ತಿಗಳ ಇದ್ದರು ಬ್ಯಾನರ್ ತೆರವು ಏಕಿಲ್ಲ? ಇಂತಹ ರಾಜಕೀಯ ಸರಿಯಿಲ್ಲ. ರಾಜಕೀಯ ವ್ಯಕ್ತಿಗಳು ಪರವಾನಗಿ ಪಡೆದಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada