ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಪಕ್ಕದಲ್ಲಿ (ಪೂರ್ವ ದಿಕ್ಕಿಗೆ) ಭಗತ್ ಸಿಂಗ್ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಶೀಘ್ರವಾಗಿ ಅಭಿವೃದ್ಧಿ ಪಡಿಸಿ ಉದ್ಯಾನವನ ನಿರ್ಮಿಸುವಂತೆ ಡಿವೈಎಫ್ಐ ವಲಯ ಸಮಿತಿ ಮುಖಂಡರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಯ್ಯಪ್ಪ ಸ್ವಾಮಿ ಗಣಜಿಲಿಮಠ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು,ಗ್ರಾಮದ ಮಕ್ಕಳು,ವೃದ್ಧರು, ಮಹಿಳೆಯರು ರಸ್ತೆ ಬದಿಯಲ್ಲೇ ಪರಿಸರ ವಾತಾವರಣ ಸವಿಯಲು ನಿತ್ಯ ಬೆಳಗಿನ ಜಾವ ಮತ್ತು ಸಂಜೆ ಹೊತ್ತಲ್ಲಿ ವಾಕ್ ಮಾಡುತ್ತಾರೆ. ಉದ್ಯಾನವನ ನಿರ್ಮಿಸಿದರೆ ಗ್ರಾಮ ಉತ್ತಮ ಪರಿಸರದ ಜೋತೆಗೆ ಒಳ್ಳೆಯ ಆರೋಗ್ಯಕರ ವಾತಾವರಣ ನಿರ್ಮಿಸಿದಂತಾಗುತ್ತದೆ. ಈ ಬಗ್ಗೆ ಪಂಚಾಯತಿ ಆಡಳಿತ ಮಂಡಳಿ ಮುತುವರ್ಜಿ ವಹಿಸಿ ಉದ್ಯಾನವನ ನಿರ್ಮಾಣಕ್ಕೆ ಮುಂದಾಗಬೇಕು ಅನೇಕ ಬಾರಿ ಅಧ್ಯಕ್ಷರಿಗೆ ಹಾಗೂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಆದರೆ ಇದುವರೆವಿಗೂ ಅಭಿವೃದ್ಧಿ ಪಡಿಸಲು ಮುಂದಾಗುತ್ತಿಲ್ಲ ಎಂದು ಹೇಳಿದರುಇದೆ ಸಂದರ್ಭದಲ್ಲಿ ಡಿವೈಎಫ್ಐ ವಲಯ ಸಮಿತಿ ಅಧ್ಯಕ್ಷರಾದ ರಿಯಾಜ್ ಆರ್ತಿ, ಕಾರ್ಯದರ್ಶಿ ರಾಜು ನಾಯಕ, ಮಾಜಿ ಅಧ್ಯಕ್ಷ ಮುಕ್ತ ಪಾಷಾ, ಮುಖಂಡರಾದ ಮೌನೇಶ್ ಯಲಗಟ್ಟಿ, ರಿಯಾಜ್ ಕೂರಷಿ, ಜಯರುದಿನ್, ಅಮೀರ್ ಪಾಟೀಲ್, ಸಿರಾಜ್, ಅಕ್ಷಯ್ ಕುಮಾರ್, ರೈತ ಸಂಘಟನೆ ಮುಖಂಡರಾದ ನರಸಣ್ಣ ನಾಯಕ, ಶಬ್ಬೀರ್ ಜಾಲಹಳ್ಳಿ, ದುರಗಪ್ಪ ವರಟಿ, ಭೂಜಪ್ಪ, ನಿಂಗಣ್ಣ ಮಕಾಶಿ, ಹನುಮಂತ, ಮೌನೇಶ್ ಮತ್ತು ಇತರರು ಇದ್ದರು,
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada