ಆರ್ ಪುರ ಕ್ಷೇತ್ರದ ಪ್ರತಿ ವಾರ್ಡ್ ಗಳಲ್ಲಿ ಗೋ ಪೂಜೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮತ್ತು ಕ್ಷೇತ್ರದ ಯರ್ರಯ್ಯನಪಾಳ್ಯ ದ ಶ್ರೀ ಕೋಡಂದ ರಾಮ ಸ್ವಾಮಿ ದೇವಾಲದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಗೋ ಪೂಜೆ ಮಾಡುವ ಮೂಲಕ ವಿಧಾನ ಸಭಾ ಮಂಡನೆಗೆ ಬೆಂಬಲವನ್ನು ವ್ಯಕ್ತಪಡಿಸಿ ಮಾತನಾಡಿದ ಅವರು ವಿಧಾನ ಮಂಡಲ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅಂಗೀಕಾರ ವಾಗಿದೆ.. ಇದು ಭಾರತೀಯರಿಗೆ ಹೆಮ್ಮೆತರುವ ಕಾರ್ಯ ಸದನದಲ್ಲಿ ಒಮ್ಮತ ಒಪ್ಪಿಗೆ ನೀಡಿದ್ದೆವೆ. ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಸರ್ಕಾರದ ಅಧಿನದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಎಂದು ಮುಖ್ಯ ಮಂತ್ರಿಗಳು ಆದೇಶ ಮಾಡಿದ್ದಾರೆ ಎಂದು ತಿಳಿಸಿದರು. ಬಹುದಿನಗಳ ಬೇಡಿಕೆ ಯಾಗಿದ್ದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ನಿನ್ನೆ ವಿಧಾನ ಮಂಡಲದಲ್ಲಿ ಅಂಗೀಕರಿಸಿದ ಹಿನ್ನೆಲೆಯಲ್ಲಿ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಕ್ಷೇತ್ರದ ಯರ್ರಯ್ಯನಪಾಳ್ಯ ದ ಶ್ರೀ ಕೋಡಂದ ರಾಮ ಸ್ವಾಮಿ ದೇವಾಲದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ವಿಧಾನ ಮಂಡಲ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅಂಗೀಕಾರ ವಾಗಿದ್ದು ಸಂತಸ ತಂದಿದೆ.ಸಂತಸದ ಸಂದರ್ಭದಲ್ಲಿ ಕೆಆರ್ ಪುರ ಕ್ಷೇತ್ರದ ಪ್ರತಿ ವಾರ್ಡ್ ಗಳಲ್ಲಿ ಗೋ ಪೂಜೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಗೋ ಪೂಜೆ ಮಾಡುವ ಮೂಲಕ ವಿಧಾನ ಸಭಾ ಮಂಡನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದೆವೆ ಎಂದು ಹೇಳಿದರು. ಇದು ಭಾರತೀಯರಿಗೆ ಹೆಮ್ಮೆತರುವ ಕಾರ್ಯ ಸದನದಲ್ಲಿ ಒಮ್ಮತ ಒಪ್ಪಿಗೆ ನೀಡಿದ್ದೆವೆ. ಪ್ರತಿ ಜಿಲ್ಲೆಯಲ್ಲಿ ಗೋಅಂಶಾಲೆ ನಿರ್ಮಾಣಮಾಡಿ ಸರ್ಕಾರದ ಅಧಿನದಲ್ಲಿ ನಿರ್ವಹಣೆ ಮಾಡಲಾಗುತ್ತದೆ ಎಂದು ಮುಖ್ಯ ಮಂತ್ರಿಗಳು ಆದೇಶ ಮಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ರೌಡಿಗಳ ಪೆರೇಡ್