ಭವಾನಿ ಲೋಕೇಶ್ ಉತ್ಸಾಹಿ ಕನ್ನಡ ಕಾರ್ಯಕರ್ತೆ.

 

ಭವಾನಿ ಲೋಕೇಶ್ ಉತ್ಸಾಹಿ ಕನ್ನಡ ಕಾರ್ಯಕರ್ತೆ. ಮಾಧುರ್ಯಯುತ ಕನ್ನಡದ ಧ್ವನಿಯ ನಿರೂಪಕಿಯಾಗಿ, ಬರಹಗಾರ್ತಿಯಾಗಿ, ಕವಯತ್ರಿಯಾಗಿ, ಸ್ರೀ ಶಕ್ತಿ ಒಕ್ಕೂಟದ ಸಂಘಟಕರಾಗಿ, ಫೇಸ್ಬುಕ್ ಕಗ್ಗ ಬಳಗದ ಸ್ಥಾಪಕರಾಗಿ ಹೀಗೆ ಹಲವು ರೀತಿಯಲ್ಲಿ ಅವರು ಸಕ್ರಿಯರು.ಭವಾನಿ ಲೋಕೇಶ್ ಅವರ ಜನ್ಮದಿನ ಮಾರ್ಚ್ 3. ಅವರು ಮಂಡ್ಯ ಜಿಲ್ಲೆಯ ಕೆರೆಗೂಡಿನಲ್ಲಿ ಜನಿಸಿದರು. ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ಭವಾನಿ ಮುಂದೆ, ಕನ್ನಡ ಎಂ.ಎ., ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಯುಜಿಸಿ ಶಿಕ್ಷಣ ತರಬೇತಿ, ಟಿಸಿಎಚ್ ಶಿಕ್ಷಕ ತರಬೇತಿ, ಕಂಪ್ಯೂಟರ್ ಡಿಪ್ಲೊಮೊ ಮುಂತಾದ ಹಲವು ವಿದ್ಯಾರ್ಹತೆಗಳನ್ನು ಕಾಲದಿಂದ ಕಾಲಕ್ಕೆ ಪೋಣಿಸಿಕೊಂಡಿದ್ದಾರೆ.
ಹಲವು ವರ್ಷ ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಿರಿಯ ಅಧಿಕಾರಿಗಳ ಸಹಾಯಕ ಮೇಲ್ವಿಚಾರಕ ಹುದ್ದೆಯನ್ನು ನಿರ್ವಹಿಸಿದ ಭವಾನಿ ಪ್ರಸಕ್ತದಲ್ಲಿ ಮೊರಾರ್ಜಿ ವಸತಿ ಶಾಲೆಯಲ್ಲಿ ಮೇಲ್ವಿಚಾರಣಾ ಕಾರ್ಯನಿರ್ವಹಿಸುತ್ತಿದ್ದಾರೆ.ಹದಿಮೂರನೆಯ ವಯಸ್ಸಿನಿಂದಲೆ ಕವಿತೆ ಬರೆದು ಅಧ್ಯಾಪಕರಿಂದ ಮೆಚ್ಚುಗೆ ಗಳಿಸಿಕೊಂಡ ಭವಾನಿ ತಮ್ಮ ಮನೆಯ ಪಕ್ಕ ಇದ್ದ ಗ್ರಂಥಾಲಯದ ಪುಸ್ತಕಗಳನ್ನೆಲ್ಲ ಓದಿ ಅಲ್ಲಿನ ಧೂಳನ್ನು ಕಡಿಮೆ ಮಾಡಿದವರು.ಭವಾನಿ ಲೋಕೇಶ್ ಅವರ ಕೃತಿಗಳಲ್ಲಿ ಭಾವಯಾನ, ಸಾಕ್ಷರರಿಗಾಗಿ, ಕರ್ನಾಟಕ ಗೆಜೆಟ್, ಸರಳ ವಿವಾಹ, ಬದುಕು ಭಾವದ ಕಡಲು ಮುಂತಾದವು ಸೇರಿವೆ. ದಿವ್ಯಾನುಭೂತಿಯ ಯುಗಾವತಾರಿ ಎಂಬ ಬಸವಣ್ಣನವರ ಕುರಿತಾದ ಕೃತಿಯನ್ನು ಸಂಪಾದಿಸಿದ್ದಾರೆ.ಭವಾನಿ ಲೋಕೇಶ್ ಅವರು ತಮ್ಮ ಸುತ್ತಮುತ್ತಲಿನ ನಗರ ಮತ್ತು ಗ್ರಾಮಗಳ ಮಹಿಳಾ ಸಂಘಗಳ ಸ್ತ್ರೀ ಸಂಘಗಳನ್ನು ಒಂದುಗೂಡಿಸಿ ‘ಸ್ತ್ರೀ ಶಕ್ತಿ ಒಕ್ಕೂಟ’ದ ನಿರ್ವಹಣೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.ಭವಾನಿ ಲೋಕೇಶ್ ಅನೇಕ ರಾಜ್ಯಮಟ್ಟದ, ಜಿಲ್ಲಾಮಟ್ಟದ ಸಭೆ ಸಮಾರಂಭಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಮಂಡ್ಯ ಜಿಲ್ಲೆಯ ಅನೇಕ ಕಾರ್ಯಕ್ರಮಗಳು, ಶ್ರೀರಂಗಪಟ್ಟಣದ ದಸರಾ ಉತ್ಸವ ಮುಂತಾದೆಡೆ ಭವಾನಿ ನಿರಂತರ ಜೊತೆ ಇದ್ದಾರೆ.ಭವಾನಿ ಲೋಕೇಶ್ ಅವರು ಫೇಸ್ಬುಕ್ಕಿನ ‘ಡಿವಿಜ-ಕಗ್ಗ ಬಳಗ’ಕ್ಕೆ ಚಾಲನೆ ನೀಡಿ, ಆ ಮುಖೇನ ಮನೆಯಂಗಳದಲ್ಲಿ ಕಾರ್ಯಕ್ರಮ, ಮಕ್ಕಳಿಗಾಗಿ ವಿವಿಧ ಪ್ರತಿಭಾ ಕಾರ್ಯಕ್ರಮ ಮುಂತಾದ ರೀತಿಯ ಚಟುವಟಿಕೆಗಳನ್ನೂ ಹಮ್ಮಿಕೊಂಡಿದ್ದಾರೆ.ಭವಾನಿ ಲೋಕೇಶ್ ಅವರ ಕಾರ್ಯಕ್ರಮಗಳು ಅನೇಕ ಸ್ಥಳೀಯ ಕಿರುತೆರೆಯ ವಾಹಿನಿಗಳಲ್ಲಿ ಪ್ರಸಾರವಾಗಿವೆ. ದೂರದರ್ಶನದ ಚಂದನದಲ್ಲಿ ಅವರು ಪ್ರಸ್ತುತಪಡಿಸಿದ ‘ನಮ್ಮ ಹೋಮಿಯೋಪಥಿ’ ಪ್ರಸಾರಗೊಂಡಿದೆ.ಭವಾನಿ ಲೋಕೇಶ್ ವಿವಿಧ ರೀತಿಯ ಕವಿತಾ ವಾಚನ, ಕಥಾವಾಚನ, ವ್ಯಕ್ತಿಪರಿಚಯ ಮುಂತಾದವುಗಳುಳ್ಳ ಕಿರು ವಿಡಿಯೋಗಳನ್ನು ಸಂಯೋಜಿಸಿ ಯೂಟ್ಯೂಬ್ ಮತ್ತು ಇತರ ಸಾಮೂಹಿಕ ಜಾಲತಾಣಗಳಲ್ಲಿ ಪ್ರಸ್ತುತಪಡಿಸುತ್ತಲೂ ಬಂದಿದ್ದಾರೆ.ಭವಾನಿ ಲೋಕೇಶ್ ಅವರಿಗೆ ಕರಾವಳಿ ಒಕ್ಕೂಟ ಪ್ರತಿಭಾ ಪುರಸ್ಕಾರ, ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ ಮುಂತಾದ ಅನೇಕ ಗೌರವಗಳು ಸಂದಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿವಿಯೊಳಗೆ ಸಿಕ್ಕಿದ್ದೆಲ್ಲ ತುರುಕುವ ಮುನ್ನ ಇರಲಿ ಎಚ್ಚರ

Fri Mar 3 , 2023
ಹೆಚ್ಚು ಧೂಳಿಗೆ ಓಡಾಡಿದಾಗ, ಹೆಚ್ಚು ಹೊತ್ತು ತಲೆ ಒದ್ದೆಯಾಗಿದ್ದಾಗ ಅಥವಾ ಸ್ನಾನ ಮಾಡುವಾಗ ಕಿವಿಯೊಳಗೆ ನೀರು ಹೋದರೆ ವ್ಯಾಕ್ಸ್ ತುಂಬಿಕೊಂಡು ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅಲ್ಲಿ ತುರಿಕೆ ಉಂಟಾಗಿ ನಾವು ಏನೇನನ್ನೋ ಕಿವಿಯೊಳಗೆ ತುರುಕಿಸಿಕೊಂಡು ನೋವು ಹೆಚ್ಚಿಸಿಕೊಂಡು ಬವಣೆ ಪಡುತ್ತೇವೆ. ಇದರಿಂದ ಕಿವಿ ನೋವು ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಅದರ ಬದಲು ಹೀಗೆ ಕಿವಿ ಸಂಬಂಧಿ ಸಮಸ್ಯೆ ಇರುವವರು ಕಡ್ಡಾಯವಾಗಿ ಕಿವಿಗೆ ಹತ್ತಿಯನ್ನು ಇಟ್ಟೇ ತಲೆ ಸ್ನಾನ ಮಾಡಿ. […]

Advertisement

Wordpress Social Share Plugin powered by Ultimatelysocial