ನಾನು ಮಧ್ಯಮ ವರ್ಗಕ್ಕೆ ಸೇರಿದವಳು. ಈ ದೇಶದ ಮಧ್ಯಮ ವರ್ಗದ ಜನತೆಯ ಕಷ್ಟ ಸುಖ ನನಗೆ ಗೊತ್ತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇಂದ್ರ ಬಜೆಟ್ ಸಿದ್ದತೆಯಲ್ಲಿ ತೊಡಗಿರುವ ಅವರು, ಮಧ್ಯಮ ವರ್ಗದ ಜನರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್ ರೂಪಿಸುವುದಾಗಿ ತಿಳಿಸಿದ್ದಾರೆ.ನಾನೇ ಖುದ್ದು ಮಧ್ಯಮ ವರ್ಗದ ಮಹಿಳೆ ಆಗಿರುವ ಹಿನ್ನೆಲೆಯಲ್ಲಿ ನನಗೆ ಮಧ್ಯಮ ವರ್ಗದ ಜನರ ಕಷ್ಟ ಗೊತ್ತಾಗುತ್ತೆ. ಹೀಗಾಗಿ, ಮೋದಿ ಸರ್ಕಾರವು ತನ್ನ ಯಾವುದೇ ಬಜೆಟ್ನಲ್ಲಿ ಮಧ್ಯಮ ವರ್ಗದ ಜನತೆಯ ಮೇಲೆ ಯಾವುದೇ ಹೊಸ ತೆರಿಗೆಯನ್ನು ಈವರೆಗೆ ಹೇರಿಲ್ಲ. ಅದಲ್ಲದೆ ವರ್ಷಕ್ಕೆ 5 ಲಕ್ಷ ರೂ.ವರೆಗೆ ಹಣ ಸಂಪಾದನೆ ಮಾಡುವವರಿಗೂ ಯಾವುದೇ ಆದಾಯ ತೆರಿಗೆ ವಿಧಿಸಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.ಆರ್ಎಸ್ಎಸ್ ಪ್ರಕಾಶನ ಪಾಂಚಜನ್ಯ ಆಯೋಜಿಸಿದ್ದ ‘ಬಾತ್ ಭಾರತ್ ಕಿ’ ಸಮಾಲೋಚನಾ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಈ ವಿಚಾರ ತಿಳಿಸಿದರು.ಫೆಬ್ರುವರಿ 1 ರಂದು ಕೇಂದ್ರ ಬಜೆಟ್ ಮಂಡನೆ ಆಗಲಿದೆ. 2023-24ನೇ ಸಾಲಿನ ಬಜೆಟ್ ಮಂಡನೆಗೆ ಕೇಂದ್ರ ವಿತ್ತ ಸಚಿವಾಲಯ ಎಲ್ಲ ರೀತಿಯ ಸಿದ್ದತೆಗಳನ್ನೂ ನಡೆಸ್ತಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.ಮಧ್ಯಮ ವರ್ಗದ ಜನತೆ ಯಾವ ಒತ್ತಡದಲ್ಲಿ ಬದುಕುತ್ತಿದ್ದಾರೆ ಎಂಬ ಅರಿವು ನನಗೆ ಇದೆ. ನನ್ನನ್ನು ನಾನು ಯಾವಾಗಲೂ ಮಧ್ಯಮ ವರ್ಗದ ಪ್ರತಿನಿಧಿ ಎಂದೇ ಭಾವಿಸುವೆ. ಹೀಗಾಗಿ, ಮಧ್ಯಮ ವರ್ಗಕ್ಕೆ ಯಾವುದೇ ಹೊಸ ತೆರಿಗೆಯನ್ನೂ ವಿಧಿಸೋದಿಲ್ಲ ಎಂದು ನಮ್ಮ ಸರ್ಕಾರ ಭರವಸೆ ನೀಡುತ್ತಿದೆ. ಜೊತೆಯಲ್ಲೇ ಜನರಿಗೆ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೇಶದ 27 ನಗರಗಳಲ್ಲಿ ಮೆಟ್ರೋ ಸೇವೆಯನ್ನೂ ಆರಂಭಿಸಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
https://play.google.com/store/apps/details?id=com.speed.newskannada