ಬಿದರ್ ಜಿಲ್ಲೆ ಬಸವಕಲ್ಯಾಣ ಬಿಜೆಪಿಗೆ ದೊಡ್ಡ ಹೊಡೆತ..!

ಬಸವಕಲ್ಯಾಣ ಬಿಜೆಪಿ ಪಕ್ಷದ ಘಟಾನುಘಟಿಗಳಿಂದ ರಾಜಿನಾಮೆ ಪರ್ವ. ಇಲ್ಲಿನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗು ಬಿಜೆಪಿಯ ಪ್ರಭಾವಿ ನಾಯಕ ಗುಂಡು ರೆಡ್ಡಿ ರಾಜಿನಾಮೆ ನಿಡಿ ಕಾಂಗ್ರೆಸ್ ಸೆರಿದ ಬೆನ್ನಲ್ಲೇ ಹಲವು ಬಿಜೆಪಿ ನಾಯಕರು ಮತ್ತು ಪದಾಧಿಕಾರಿಗಳು ರಾಜಿನಾಮೆ ನಿಡುತ್ತಿದ್ಧಾರೆ.

ಇದಿಗ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಹಾಗು ಬಿಜೆಪಿ ಕಾರ್ಯಕಾರಿಣಿ ಸದಸ್ಯ ಲತಾ ಹಾರಕೂಡೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಕ್ಕೆ ರಾಜೀನಾಮೆ ನಿಡಿದ್ಧಾರೆ. ರಾಜಿನಾಮೆ ನಿಡಿ ಪತ್ರಿಕಾಗೋಷ್ಠಿ ನಡೆಸಿದ ಬಸವಕಲ್ಯಾಣ ಬಿಜೆಪಿ ಹಾಲಿ ಶಾಸಕ ಈಗಿನ ಬಿಜೆಪಿ ಶರಣು ಸಲಗರ್ ವಿರುದ್ಧ ಹರಿಹಾಯ್ದಿದ್ದಾರೆ. ಬಸವಕಲ್ಯಾಣ ಬಿಜೆಪಿಯ ಮೂಲ ಕಾರ್ಯಕರ್ತರರಿಗೆ ಮೂಲ ಗುಂಪು ಮಾಡಲಾಗುತ್ತಿದೆ.

ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯ ಕಾರ್ಯಕರ್ತರಿಗೇ ಕವಡೆ ಕಿಮ್ಮತ್ತು ಕೊಡುತ್ತಿಲ್ಲ ಎಂದು ಶರಣು ಸಲಗರ್ ವಿರುದ್ಧ ಹರಿಹಾಯ್ದಿದ್ದಾರೆ. ಶರಣು ಸಲಗರ್ ಅವರ ವರ್ತನೆಗೆ ಬೆಸತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನಿಡುತ್ತಿದ್ಧೆನೆ.  ಇಲ್ಲಿನ ಬೀದರ್ ಸಂಸದ ಹಾಗು ಕೇಂದ್ರ ಸಚಿವ ಭಗವಂತ ಖುಬಾ ಅವರು ಸಹ ನಮಗೆ ಯಾವುದೆ ಸಹಕಾರ ನಿಡುತ್ತಿಲ್ಲ. ಕಾರ್ಯಕರ್ತರಲ್ಲಿ ಒಬ್ಬರ ಮೆಲೆ ಒಬ್ಬರಿಗೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಹಿಗಾಗಿ ನನಗೆ ಬಿಜೆಪಿಯಲ್ಲಿ ನ್ಯಾಯ ಸಿಗುವ ಹಾಗೆ ಕಾಣಿಸುತ್ತಿಲ್ಲ ಆದ್ದರಿಂದ ರಾಜಿನಾಮೆ ನಿಡುತ್ತಿದ್ಧೆನೆ ಎಂದು ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೊಂದಲದ ಗೂಡಾದ ಬಸವಕಲ್ಯಾಣ ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ ಅವರ ನಡೆ!

Fri Apr 21 , 2023
ಕೆಲ ದಿನಗಳ ಹಿಂದಷ್ಟೇ ಜೆಡಿಎಸ್ ಸೆರ್ಪಡೆಯಾಗಿದ್ಧ ಮಲ್ಲಿಕಾರ್ಜುನ ಖುಬಾ ಅವರು ಪಕ್ಷೆತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿನ ಅಧಿಕೃತ ಜೆಡಿಎಸ್ ಅಭ್ಯರ್ಥಿ ಸಂಜಯ್ ವಾಡೆಕರ್ ಅವರು ಸಹ ನಿನ್ನೆಯ ನಾಮಪತ್ರ ಸಲ್ಲಿಸಿದರು. ತದ ನಂತರ ಕೊನೆಯ ಗಳಿಗೆಯಲ್ಲಿ ಮಲ್ಲಿಕಾರ್ಜುನ ಖುಬಾ ಅವರು ಪಕ್ಷೆತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಕಾರಣವೆನೆಂದು ಪತ್ರಕರ್ತರು ಪ್ರಶ್ನೆ ಕೆಳಿದರೆ ಎರೆಡು ದಿವಸ ಕಾದು ನೊಡಿ ಎಲ್ಲವು ಗೊತ್ತಾಗುತ್ತದೆ ಎಂದು ಮಾಧ್ಯಮ […]

Advertisement

Wordpress Social Share Plugin powered by Ultimatelysocial