ಬಸವಕಲ್ಯಾಣ ಬಿಜೆಪಿ ಪಕ್ಷದ ಘಟಾನುಘಟಿಗಳಿಂದ ರಾಜಿನಾಮೆ ಪರ್ವ. ಇಲ್ಲಿನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗು ಬಿಜೆಪಿಯ ಪ್ರಭಾವಿ ನಾಯಕ ಗುಂಡು ರೆಡ್ಡಿ ರಾಜಿನಾಮೆ ನಿಡಿ ಕಾಂಗ್ರೆಸ್ ಸೆರಿದ ಬೆನ್ನಲ್ಲೇ ಹಲವು ಬಿಜೆಪಿ ನಾಯಕರು ಮತ್ತು ಪದಾಧಿಕಾರಿಗಳು ರಾಜಿನಾಮೆ ನಿಡುತ್ತಿದ್ಧಾರೆ.
ಇದಿಗ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಹಾಗು ಬಿಜೆಪಿ ಕಾರ್ಯಕಾರಿಣಿ ಸದಸ್ಯ ಲತಾ ಹಾರಕೂಡೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಕ್ಕೆ ರಾಜೀನಾಮೆ ನಿಡಿದ್ಧಾರೆ. ರಾಜಿನಾಮೆ ನಿಡಿ ಪತ್ರಿಕಾಗೋಷ್ಠಿ ನಡೆಸಿದ ಬಸವಕಲ್ಯಾಣ ಬಿಜೆಪಿ ಹಾಲಿ ಶಾಸಕ ಈಗಿನ ಬಿಜೆಪಿ ಶರಣು ಸಲಗರ್ ವಿರುದ್ಧ ಹರಿಹಾಯ್ದಿದ್ದಾರೆ. ಬಸವಕಲ್ಯಾಣ ಬಿಜೆಪಿಯ ಮೂಲ ಕಾರ್ಯಕರ್ತರರಿಗೆ ಮೂಲ ಗುಂಪು ಮಾಡಲಾಗುತ್ತಿದೆ.
ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯ ಕಾರ್ಯಕರ್ತರಿಗೇ ಕವಡೆ ಕಿಮ್ಮತ್ತು ಕೊಡುತ್ತಿಲ್ಲ ಎಂದು ಶರಣು ಸಲಗರ್ ವಿರುದ್ಧ ಹರಿಹಾಯ್ದಿದ್ದಾರೆ. ಶರಣು ಸಲಗರ್ ಅವರ ವರ್ತನೆಗೆ ಬೆಸತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನಿಡುತ್ತಿದ್ಧೆನೆ. ಇಲ್ಲಿನ ಬೀದರ್ ಸಂಸದ ಹಾಗು ಕೇಂದ್ರ ಸಚಿವ ಭಗವಂತ ಖುಬಾ ಅವರು ಸಹ ನಮಗೆ ಯಾವುದೆ ಸಹಕಾರ ನಿಡುತ್ತಿಲ್ಲ. ಕಾರ್ಯಕರ್ತರಲ್ಲಿ ಒಬ್ಬರ ಮೆಲೆ ಒಬ್ಬರಿಗೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಹಿಗಾಗಿ ನನಗೆ ಬಿಜೆಪಿಯಲ್ಲಿ ನ್ಯಾಯ ಸಿಗುವ ಹಾಗೆ ಕಾಣಿಸುತ್ತಿಲ್ಲ ಆದ್ದರಿಂದ ರಾಜಿನಾಮೆ ನಿಡುತ್ತಿದ್ಧೆನೆ ಎಂದು ತಿಳಿಸಿದರು.
https://play.google.com/store/apps/details?id=com.speed.newskannada