ಬಿದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ ಅವರು ಸುದ್ಧಿಗೊಷ್ಠಿ ನಡೆಸಿ ಶಾಸಕ ಶರಣು ಸಲಗರ್ ಅವರ ವಿರುದ್ಧ ಹರಿಹಾಯ್ದಿದ್ದಾರೆ. ನಗರದ ತ್ರಿಪುರಾಂತ ಕೆರೆಯ ಅಭಿವೃದ್ಧಿಗೆ 25 ಕೋಟಿ ರೂಪಾಯಿ ಬಂದಿದೆ ಎಂದು ಶಾಸಕರು ಹೆಳಿದ್ಧಾರೆ . ಅದರೆ ಈ ಯೊಜನೆಗೆ ಮಾಜಿ ಶಾಸಕ ದಿವಂಗತ ಬಿ.ನಾರಾಯಣರಾವ ಅವರು 2020 ರಲ್ಲಿ 9 ಕೊಟಿ ರೂಪಾಯಿ ಮಂಜೂರು ಮಾಡಿಸಿ ತಂದಿದ್ದಾರೆ. ಏತ ನಿರಾವರಿ ಯೊಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಯೊಜನೆ ನಮ್ಮ ಅವಧಿಯಲ್ಲಿ ನಡೆದಿದೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ಧರು ಅವರ ಸರಕಾರದಲ್ಲಿ ಈಶ್ವರ ಖಂಡ್ರೆ ಅವರು 188 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದರು ಆದರೆ ಈಗಿನ ಬಸವಕಲ್ಯಾಣ ಶಾಸಕ ಇವೆಲ್ಲಾ ಮುಚ್ಚಿಟ್ಟು ಎಲ್ಲವು ನಾನೆ ಮಾಡಿದ್ಧೆನೆ ಎಂದು ಸುಳ್ಳು ಹೆಳಿ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದು ಶಾಸಕ ಶರಣು ಸಲಗರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada