ಬಿಗ್​ ಬ್ಯಾಷ್​ನಲ್ಲೊಂದು ಊಹಿಸಲಾಗದ ಕ್ಯಾಚ್: ಮ್ಯಾಥ್ಯೂ ಶಾರ್ಟ್ ಹಿಡಿದ ರೋಚಕ ಕ್ಯಾಚ್ ನೋಡಿ

Matthew Short Catch Video: ಬಿಗ್​ಬ್ಯಾಷ್ ಲೀಗ್​ನಲ್ಲಿ ಬ್ರಿಸ್ಬೇನ್ ಹೀಟ್ ತಂಡಕ್ಕೆ ಆಸರೆಯಾಗಿ ನಿಂತಿದ್ದ ಸ್ಯಾಮ್ ಹೆಜ್ಲೆಟ್ ಔಟ್ ಆದ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ರಶೀದ್ ಖಾನ್ ಗೂಗ್ಲಿ ಟ್ರಿಕ್ ಅನ್ನು ಅರಿಯಲು ವಿಫಲವಾದ ಸ್ಯಾಮ್ ಫೀಲ್ಡಿಂಗ್ ಮಾಡುತ್ತಿದ್ದ ಮ್ಯಾಥ್ಯೂ ಶಾರ್ಟ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾಗಬೇಕಾಯಿತು.

ಕಾಂಗರೂಗಳ ನಾಡಿನಲ್ಲಿ ಸಾಗುತ್ತಿರುವ 2021-22ನೇ ಸಾಲಿನ ಬಿಗ್ ಬ್ಯಾಷ್ ಲೀಗ್ (Big Bash League BBL) ಟೂರ್ನಿ ರೋಚಕ ಘಟ್ಟಕ್ಕೆ ಕಾಲಿಟ್ಟಿದೆ. ಗುರುವಾರ ನಡೆದ ಅಡಿಲೈಡ್ ಸ್ಟ್ರೈಕರ್ಸ್ (Adelaide Strikers) ಮತ್ತು ಬ್ರಿಸ್ಬೇನ್ ಹೀಟ್ (Brisbane Heat) ನಡುವಣ ಪಂದ್ಯ ಕೂಡ ಸಾಕಷ್ಟು ವಿಶೇಷತೆಗಳಿಂದ ಕೂಡಿತ್ತು. ಈ ಪಂದ್ಯದಲ್ಲಿ ಅಡಿಲೇಡ್ ತಂಡ ಗೆಲುವು ಕಾಣಲು ವಿಫಲವಾದರೂ ಫೀಲ್ಡಿಂಗ್ ಮೂಲಕ ಎಲ್ಲರ ಗಮನ ಸೆಳೆಯಿತು. ಅದರಲ್ಲೂ ಅಡಿಲೇಡ್ ತಂಡದ ಮ್ಯಾಥ್ಯೂ ಶಾರ್ಟ್ (Matthew Short) ಹಿಡಿದ ಕ್ಯಾಚ್ ಒಂದು ಅದ್ಭುತವಾಗಿತ್ತು. ರಶೀದ್ ಖಾನ್ (Rashid Khan) ಅವರ ಬೌಲಿಂಗ್​ನಲ್ಲಿ ಬ್ರಿಸ್ಬೇನ್ ತಂಡದ ಸ್ಯಾಮ್ ಹೆಜ್ಲೆಟ್ (Sam Heazlett) ಸಿಕ್ಸ್ ಸಿಡಿಸಲು ವಿಫಲವಾಗಿ ಮ್ಯಾಥ್ಯೂ ಶಾರ್ಟ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಇವರು ಹಿಡಿದ ಈ ಕ್ಯಾಚ್ ಊಹಿಸಲಾಗದಂತಿತ್ತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದ್ದು, ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬ್ರಿಸ್ಬೇನ್ ಹೀಟ್ ತಂಡ ಬೊಂಬಾಟ್ ಬ್ಯಾಟಿಂಗ್ ನಡೆಸಿತು. ಬೆನ್ ಡಕೆಟ್ ಕೇವಲ 47 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್​ನೊಂದಿಗೆ 78 ರನ್ ಚಚ್ಚಿದರೆ, ಹೆಜ್ಲೆಟ್ 30 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್​ನೊಂದಿಗೆ 49 ರನ್ ಸಿಡಿಸಿದರು. ಪರಿಣಾಮ 20 ಓವರ್​ಗಳಲ್ಲಿ ಬ್ರಿಸ್ಬೇನ್ ತಂಡ 7 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತು. ಅಡಿಲೇಡ್ ಪರ ರಶೀದ್ ಖಾನ್ 3 ವಿಕೆಟ್ ಕಿತ್ತರು.

209 ರನ್​ಗಳ ದೊಡ್ಡ ಟಾರ್ಗೆಟ್ ಬೆನ್ನಟ್ಟಿದ ಅಡಿಲೇಡ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಜೊನಥನ್ ವೆಲ್ಸ್ 41 ಎಸೆತಗಳಲ್ಲಿ 55 ಮತ್ತು ಮ್ಯಾಥ್ಯೂ 22 ರನ್ ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ಚೇತರಿಕೆ ನೀಡಿದರೂ ಕಮ್​ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ. ಥೋಮಸ್ ಕೆಲ್ಲಿ 27 ರನ್ ಬಾರಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಅಡಿಲೇಡ್ ತಂಡ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರದ ಅಸ್ತ್ರಕ್ಕೆ ಸಿದ್ದರಾಮಯ್ಯ ಪ್ರತ್ಯಸ್ತ್ರ: ಕಲಾಪದ ದಿಕ್ಕು ಬದಲಿಸಿದ ಕಡತ

Fri Dec 24 , 2021
ಬೆಳಗಾವಿ (ಸುವರ್ಣ ವಿಧಾನಸೌಧ): ಮತಾಂತರ ನಿಷೇಧ ಕಾಯ್ದೆ ವಿರುದ್ಧ ಸಮರ ಸಾರಲು ಹುರುಪಿನೊಂದಿಗೆ ವಿಧಾನಸಭೆ ಕಲಾಪಕ್ಕೆ ದಾಂಗುಡಿಯಿಟ್ಟ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಸರ್ಕಾರ ಮುಂದಿಟ್ಟ ಕಡತ, ಗುರುವಾರದ ಚರ್ಚೆಯ ದಿಕ್ಕನ್ನೇ ಬದಲಿಸಿಬಿಟ್ಟಿತು. ‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಮಸೂದೆಯ ಕರಡನ್ನು ಸಿದ್ಧಪಡಿಸಲಾಗಿತ್ತು’ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ದಾಖಲೆಗಳನ್ನು ಪ್ರದರ್ಶಿಸಿದ್ದರಿಂದ ಸಿದ್ದರಾಮಯ್ಯ ಗಲಿಬಿಲಿಗೆ ಒಳಗಾದರು. ಅದಕ್ಕೆ ಪೂರಕವೆಂಬಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, […]

Advertisement

Wordpress Social Share Plugin powered by Ultimatelysocial