ಬಿಗ್ ಬಾಸ್‌ ಪ್ರಥಮ್‌ ಈಗ ಬೀದಿಗೆ..?

ಬಿಗ್ ಬಾಸ್‌ ಪ್ರಥಮ್‌ ಈಗ ಬೀದಿಗೆ..?

ನಟ ಪ್ರಥಮ್ ನಟ ಅನ್ನೋದಕ್ಕಿಂತ ಬಿಗ್ ಬಾಸ್ ಪ್ರಥಮ್ ಅಥವಾ ಒಳ್ಳೆ ಹುಡುಗ ಪ್ರಥಮ್ ಎಂದೇ ಬಹಳ ಖ್ಯಾತಿ ಗಳಿಸಿದ್ದ ಬಿಗ್ ಬಾಸ್ ವಿಜೇತ ಪ್ರಥಮ್ ಅವರು ಸಧ್ಯ ತಾವು ಕಷ್ಟ ಪಟ್ಟು ದುಡಿದದ್ದನ್ನೆಲ್ಲಾ ಕಳೆದುಕೊಂಡು ಬೇಸರ ವ್ಯಕ್ತ ಪಡಿಸಿದ್ದಾರೆ.. ಹೌದು ಅದರಲ್ಲೂ ತಾವು ಮಾಡಿದ ಆ ಒಂದು ಸಣ್ಣ ತಪ್ಪಿನಿಂದಾಗಿಯೇ ಇಂದು ಇಂತಹ ಸ್ಥಿತಿ ಬಂದಿದೆ ಎಂದು ಖುದ್ದು ಪ್ರಥಮ್ ಅವರೇ ತಿಳಿಸಿದ್ದಾರೆ.. ಹೌದು ಎಲ್ಲರಿಗೂ ತಿಳಿದಿರುವಂತೆ ಪ್ರಥಮ್ ಬಿಗ್ ಬಾಸ್ ಮೂಲಕ ಬಹಳ ದೊಡ್ಡ ಮಟ್ಟದ ಯಶಸ್ಸು ಪಡೆದವರು..

ಹೌಹೌದು ಪ್ರಥಮ್ ತಾನು ಬೆಂಗಳೂರಿನಲ್ಲಿ ವಾಸ ಇರುವ ರೂಮಿನ ತುಂಬೆಲ್ಲಾ ನೀರು ತುಂಬಿಕೊಂಡಿದ್ದು ಮಲಗುವ ಜಾಗದಿಂದ ಹಿಡಿದು ಲ್ಯಾಪ್ ಟಾಪ್ ಮೊಬೈಲ್ ಸಿನಿಮಾ ಪ್ರಾಪರ್ಟಿ ಹೀಗೆ ತನ್ನೆಲ್ಲಾ ವಸ್ತುಗಳು ನೀರಿನಲ್ಲಿ ಮುಳುಗಿ ಹೋಗಿದೆ.. ಹೌದು ಇದಕ್ಕೆಲ್ಲಾ ಸ್ವತಃ ಪ್ರಥಮ್ ಅವರೇ ಕಾರಣರಾಗಿದ್ದು ರೂಮಿನ ಕಿಟಕಿ ಹಾಕದೇ ಪ್ರಥಮ್ ಸೈಕಲಿಂಗ್ ಮಾಡಲು ಹೋಗಿದ್ದು ಅದೇ ಸಮಯದಲ್ಲಿ ವಿಪರೀತ ಮಳೆ ಬಂದ ಕಾರಣ ಕಿಟಕಿಯ ಮೂಲಕ ನೀರು ಸಂಪೂರ್ಣವಾಗಿ ರೂಮಿಗೆ ತುಂಬಿಕೊಂಡಿದೆ. ಇದೆಲ್ಲದರಿಂದ ಎರಡೂವರೆ ಲಕ್ಷ ರೂಪಾಯಿಯಷ್ಟು ಹಣ ನಷ್ಟವಾಗಿದೆ ಎನ್ನಲಾಗಿದೆ..

ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಾಕಿ ಬೇಸರ ವ್ಯಕ್ತ ಪಡಿಸಿರುವ ಪ್ರಥಮ್ ಅವರು “ಕನಿಷ್ಠ ಎರಡೂವರೆ ಲಕ್ಷ ರೂಪಾಯಿ ಹೊಗೆ.. ಬಹಳ ಕಷ್ಟಪಟ್ಟು ಚಿತ್ರೀಕರಣದ ವಸ್ತುಗಳನ್ನು ಎಲ್ಲಾ ರೆಡಿ ಮಾಡಿಸಿದ್ದೆ.. ಆಫೀಸಿನಲ್ಲಿ ಕಿಟಕಿ ತೆರೆದು ಸೈಕಲಿಂಗ್ ಮಾಡೋಕೆ ಹೋಗಿದ್ದೆ.. ಎಲ್ಲಾ ಮಳೆಯಿಂದಾಗಿ ಆಗಿದ್ದು.. ನಾಳಿದ್ದು ಕರ್ನಾಟಕದ ಅಳಿಯ ಚಿತ್ರೀಕರಣಕ್ಕೆ ಮಾಡಿಸಿದ್ದ ಎಲ್ಲಾ ವಸ್ತುಗಳು.. ಲ್ಯಾಪ್‌ಟಾಪ್.. ಹಾರ್ಡ್ ಡಿಸ್ಕ್.. ಟೇಬಲ್ ಫ್ಯಾನ್.. ಸ್ವಿಗ್ಗಿಯಲ್ಲಿ ಏನಾದ್ರು ತಿನ್ನೋಕೆ ಅಂತಾನೆ ಒಂದು ಫೋನ್ ನಂಬರ್ ಇಟ್ಟಿದ್ದೆ.. ಆ ಫೋನ್ ಕೂಡ ಹೋಯ್ತು.. ಮೂವತ್ತು ರೂಪಾಯಿಯ ಬಿಸ್ಕೆಟ್ ಒಂದು ಉಳಿದುಕೊಂಡಿದೆ.. ಕೇವಲ ಒಂದು ರೂಮಿನ ಕತೆ ಇದು.. ಬಹಳ ಕಷ್ಟಪಟ್ಟು ಇದೆಲ್ಲವನ್ನು ಸಂಪಾದಿಸಿದ್ದೆ ಬಹಳ ಬೇಜಾರಾಯ್ತು.. ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ. ಆದರೆ ಸೈಕಲಿಂಗ್ ಹೋಗುವ ಮುನ್ನ ಕಿಟಕಿಯಾಕುವ ಆ ಒಂದು ಸಣ್ಣ ಕೆಲಸ ಮಾಡಿದ್ದರೆ ಬಹುಶಃ ಪ್ರಥಮ್ ಅವರ ಸಿನಿಮಾಗಳ ಅಷ್ಟೂ ವಸ್ತುಗಳು ಕತೆ ಹಾಗೂ ಲ್ಯಾಪ್ಟಾಪ್ ಎಲ್ಲವೂ ಉಳಿದುಕೊಳ್ಳುತ್ತಿದ್ದವು..

 

Please follow and like us:

Leave a Reply

Your email address will not be published. Required fields are marked *

Next Post

ಪ್ರೀತಿಸಿ ಮದುವೆಯಾದ ಯುವಕನ ಮೇಲೆ ಹಲ್ಲೆ

Tue Oct 5 , 2021
ಪ್ರೀತಿಸಿ ಮದುವೆಯಾಗಿದ್ದ ಯುವಕನ ಮೇಲೆ ಹೆಂಡತಿಯ ಅಪ್ಪ, ಅಮ್ಮ, ತಮ್ಮ, ಅಣ್ಣ, ದೊಡ್ಡಪ್ಪರಿಂದ ಹಲ್ಲೆ ನಡೆದ ಘಟನೆ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಡಿಎ ತಾಂಡಾದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕ ಸರ್ಜುನ್ ನಾಯ್ಕ್ ಎಂದು ತಿಳಿದು ಬಂದಿದೆ. ಕಳೆದ 8 ತಿಂಗಳ ಹಿಂದೆ ಇದೇ ತಾಂಡಾದ ಪವಿತ್ರ ಬಾಯಿ ಎಂಬುವರನ್ನ ಪ್ರೀತಿಸಿ ಮದುವೆಯಾಗಿದ್ದ ಸರ್ಜುನ್ ನಾಯ್ಕ್, ಇವರ ಪ್ರೀತಿಗೆ ಪವಿತ್ರಾ ಬಾಯಿ ಮನೆಯವರ ವಿರೋಧವಿದ್ದು, ವಿರೋಧದ ನಡುವೆಯೆ ಓಡಿಹೋಗಿ ಬೇರೆಡೆ […]

Advertisement

Wordpress Social Share Plugin powered by Ultimatelysocial