“ಬಿರಿಯಾನಿ ನಮ್ದು.. ಕ್ರಾಂತಿ ನಿಮ್ದು”

2022 ಕನ್ನಡ ಸಿನಿಮಾಗಳು ಅಬ್ಬರಿ ಬೊಬ್ಬಿರಿದಿವೆ. ಇನ್ನು 2023ರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಹೊಸ ವರ್ಷದ ಮೊದಲ ತಿಂಗಳಲ್ಲಿಯೇ ಸೂಪರ್‌ಸ್ಟಾರ್ ಸಿನಿಮಾ ರಿಲೀಸ್ ಆಗುತ್ತಿದ್ದು ಬಾಕ್ಸಾಫೀಸ್‌ ಕಲೆಕ್ಷನ್ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.ಬಹಳ ದಿನಗಳ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಅಭಿಮಾನಿಗಳೂ ಕೂಡ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.ಬಿಡುಗಡೆಗೆ ಇನ್ನೂ ಮೂರು-ನಾಲ್ಕು ವಾರ ಇರುವಾಗಲೇ ಡಿ ಬಾಸ್ ಫ್ಯಾನ್ಸ್ ಸೆಲೆಬ್ರೆಷನ್ ಶುರುವಾಗಿದೆ.’ಕ್ರಾಂತಿ’ ಇದೇ ಜನವರಿ 26ಕ್ಕೆ ರಾಜ್ಯಾದ್ಯಾಂತ ರಿಲೀಸ್ ಆಗುತ್ತಿದೆ. ಹೀಗಾಗಿ ಅಭಿಮಾನಿಗಳೇ ವಿಭಿನ್ನವಾಗಿ ಪ್ರಚಾರ ಮಾಡುವುದಕ್ಕೆ ಅಖಾಡಕ್ಕೆ ಇಳಿದಿದ್ದಾರೆ. ಸದ್ಯ ಕೆಂಗೇರಿಯ ಬಿರಿಯಾನಿ ಹೊಟೇಲ್ ಒಂದಕ್ಕೊಂದು ಒಂದು ಬಿರಿಯಾನಿಯನ್ನು ಫ್ರೀಯಾಗಿ ನೀಡಲು ಮುಂದಾಗಿದೆ.ಒಂದಕ್ಕೆ ಒಂದು ಬಿರಿಯಾನಿ ಫ್ರೀಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ ಸಿನಿಮಾ ಪ್ರಚಾರಕ್ಕೆ ಅಭಿಮಾನಿಗಳೇ ಪ್ರಚಾರ ಮಾಡುತ್ತಿದ್ದಾರೆ. ಇನ್ನೊಂದು ಕಡೆ ತಮ್ಮದೇ ರೀತಿಯಲ್ಲಿ ಸಂಭ್ರಮಿಸಲು ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಅದರಲ್ಲೊಬ್ಬರು “ಬಿರಿಯಾನಿ ನಮ್ದು.. ಕ್ರಾಂತಿ ನಿಮ್ದು” ಅಂತಿದ್ದಾರೆ. ಬೆಂಗಳೂರಿನ ಕೆಂಗೇರಿ ಉಪನಗರ ಸಮೀಪವಿರೋ ತೂಗುದೀಪ ದೊನ್ನೆ ಬಿರಿಯಾನಿ ಮನೆ ಹೊಟೇಲ್ ಒಂದು ಬಿರಿಯಾನಿಗೆ ಇನ್ನೊಂದು ಬಿರಿಯನಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಳಂದೂರು ತಾಲ್ಲೂಕು ಕಚೇರಿ ಅವ್ಯವಸ್ಥೆ ವಿರುದ್ಧ KRS ಪಾರ್ಟಿ ಯಿಂದ ಪ್ರತಿಭಟನೆ..

Thu Jan 5 , 2023
ಯಳಂದೂರು.ತಾಲ್ಲೂಕು ಕಚೇರಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳಲ್ಲಿರುವ ಅವ್ಯವಸ್ಥೆಯನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು… ಪಟ್ಟಣದ ನಾಡಮೆಗಲಮ್ಮ ದೇವಸ್ಥಾನದ ಮುಂಭಾಗ ಜಮಾಹಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಒರಟು ಬಸ್ ನಿಲ್ದಾಣ, ಕೆ.ಕೆ. ರಸ್ತೆ, ಬಳೆ ಮಂಟಪ ರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು… ಇಲಾಖೆ ಹಾಗೂ ಬ್ರಷ್ಟಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು… ಪಕ್ಷದ ಜಿಲ್ಲಾಧ್ಯಕ್ಷ ಸಿ.ಎಲ್.ಶ್ರೀನಿವಾಸ ಮಾತನಾಡಿ […]

Advertisement

Wordpress Social Share Plugin powered by Ultimatelysocial