ಬಿಜೆಪಿ ಟಿಕೇಟಗಾಗಿ ಆಕಾಂಕ್ಷಿಗಳ ಕಸರತ್ತು..!

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಕಾಂಕ್ಷಿಗಳ ಚಟುವಟಿಕೆ ಬಿರುಸಿನಿಂದ ಸಾಗಿದೆ. 2023 ರಲ್ಲಿ ಚುನಾವಣೆಯ ಟಿಕೇಟ್ ಆಕಾಂಕ್ಷಿಗಳು ಭಾರಿ ಲಾಬಿ ನಡೆಸಿದ್ದು ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿ ಮತದಾರರ ಮನವೊಲಿಸಲು ನಾನಾ ಕಸರತ್ತು ನಡೆಸಿದ್ದಾರೆ.. ಈ‌ಕುರಿತು ಒಂದು ಝಲಕ್ ಇಲ್ಲಿದೆ.ಚುನಾವಣೆ ಸನಿಹದಲ್ಲಿ‌ ಟೀಕೆಟ್ ಗಾಗಿ ಶಕ್ತಿ ಪ್ರದರ್ಶನ..ಶಹಾಪುರದಲ್ಲಿ ಬಿಜೆಪಿ ಟೀಕೇಟ್ ಗಾಗಿ ಭಾರಿ ಲಾಬಿ..ಕೈ ಕೋಟೆಯಲ್ಲಿ ಕಮಲ‌ ಅರಳಿಸಲು ಭಾರಿ ಕಸರತ್ತು..ವಾಒ 1: .ಎಸ್ 2023 ರ ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೆನು ತಿಂಗಳುಗಳಷ್ಟೇ ಬಾಕಿ ಉಳಿದಿವೆ. ಕೇವಲ ಮೂರು ತಿಂಗಳು ಬಾಕಿ ಇರುವ ಹೊತ್ತಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಟೀಕೆಟ್ ಆಕಾಂಕ್ಷಿಗಳ ಪಟ್ಟಿ ಜೋರಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರ ಕೈ ಕೋಟೆಯಲ್ಲಿ ಕಮಲ ಅರಳಿಸಲು ಕೆಸರಿ ಪಡೆ ಸಜ್ಜಾಗಿದೆ. ಮತದಾರ‌ ಮನವೊಲಿಸಲು ಬಿಜೆಪಿ ಟಿಕೇಟ್ ಆಕಾಂಕ್ಷಿ ಡಾ.ಚಂದ್ರಶೇಖರ್ ಸುಭೇದಾರ್ ತಮ್ಮ ತಂದೆ ದಿವಂಗತ ಅಚ್ಚಪ್ಪಗೌಡ ಸುಬೇದಾರ್ ರೂರಲ್ ಮತ್ತು ಅರ್ಬನ್ ಟ್ರಸ್ಟ್ ನ 5ನೇ ವಾರ್ಷಿಕೋತ್ಸವ ಹಿನ್ನಲೆ ಶಹಾಪುರದಲ್ಲಿ ಸಿ.ಪಿ.ಎಸ್ ಶಾಲಾ‌ ಮೈದಾನದಲ್ಲಿ ಬೃಹತ್ ಆರೋಗ್ಯ ಶಿಬಿರ ಎರ್ಪಡೆಸಿದ್ದರು,ವಾಒ 2 ಇನ್ನು ಕಾರ್ಯಕ್ರಮದಲ್ಲಿ ಮುನ್ನ ಗೋಮಾತೆ ರಾಯಚೂರು ಸಂಸದ ರಾಜ ಅಮರೇಶ್ ನಾಯಕ ಪೂಜೆ ಮಾಡುವ ಮೂಲಕ‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..ಬಳಿಕ ನಡೆದಾಡುವ ದೇವರು ದಿವಂಗತ ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪೂಜ್ಯರಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಇನ್ನು ಸ್ವತಂತ್ರ್ಯಸೇನಾನಿ‌ ದಿ.ಅಚ್ಚಪ್ಪಗೌಡ ಸುಬೇದಾರ ಅವರ ಭಾವಚಿತ್ರಕ್ಕೂ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ‌ಸಲ್ಲಿಸಿದ್ರು.. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ರಾಯಚೂರು ಸಂಸದ ರಾಜಾಮರೇಶ್ ನಾಯಕ್, ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮ ಬಿಜೆಪಿ‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಗಳಾಗಿವೆ, ವಾಹನ ದಟ್ಟಣೆಯಿಂದ ಅಪಘಾತಗಳಾಗಿದ್ದು ಸಾಕಷ್ಟು ಸಾವುನೋವುಗಳಾಗಿವೆ ಹೀಗಾಗಿ ಕೇಂದ್ರ ಸಚಿವ ನಿತಿನ್ ಗಡ್ಕರೆ ಅವರೊಂದಿಗೆ ಚರ್ಚಿಸಿ ಶಹಾಪುರ ರಿಂಗ್ ರಸ್ತೆ ಬಗ್ಗೆ ಪ್ರಸ್ತಾಪಮಾಡಲಾಗಿದ್ದು ರಿಂಗ್ ರಸ್ತೆಗೆ ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ಸಾಧನೆಯಬಗ್ಗೆ ತೆರದಿಟ್ಟರು..ವಾಒ 3 : . ಒಟ್ನಲ್ಲಿ ಚುನಾವಣೆ ಹೊತ್ತಿನಲ್ಲಿ ಟಿಕೇಟ್ ಆಕಾಂಕ್ಷಿಗಳು ಒಂದಲ್ಲಾ ಒಂದು ರೀತಿ ಕಸರತ್ತು ಮಾಡುವ ಮೂಲಕ ಮತದಾರರನ್ನು ಓಲೈಸುವ ಕೆಲಸಕ್ಕೆ ಮುಂದಾಗಿದ್ದು ಹೈ ಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎನ್ನುವುದು ಕಾದು ನೋಡಬೇಕಿದೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2023ರಲ್ಲಿ ಪ್ರಭಾಸ್‌ರದ್ದೇ ಹವಾ ಅಂತಿದ್ದಾರೆ 'ಡಾರ್ಲಿಂಗ್‌' ಫ್ಯಾನ್ಸ್‌

Mon Jan 9 , 2023
  ನಟ ಪ್ರಭಾಸ್ ಅವರಿಗೆ ಇಂದು (ಅ.23) ಹುಟ್ಟುಹಬ್ಬದ ಸಂಭ್ರಮ. ಆದರೆ ಈ ಬಾರಿ ಜನ್ಮದಿನವನ್ನು ಅವರು ಸೆಲೆಬ್ರೇಟ್ ಮಾಡಿಕೊಳ್ಳುತ್ತಿಲ್ಲ. ಕಾರಣ, ಈಚೆಗಷ್ಟೇ ಅವರ ದೊಡ್ಡಪ್ಪ, ಹಿರಿಯ ನಟ ಕೃಷ್ಣಂ ರಾಜು ಅವರು ನಿಧನರಾಗಿದ್ದರು. ಆ ದುಃಖದಿಂದ ಪ್ರಭಾಸ್ ಕುಟುಂಬ ಇನ್ನೂ ಹೊರಬಂದಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮ ಮುಗಿಲುಮುಟ್ಟಿದೆ. ಲಕ್ಷಾಂತರ ಅಭಿಮಾನಿಗಳು, ಸಿನಿಮಾ ತಾರೆಯರು ಪ್ರಭಾಸ್‌ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಈ ಮಧ್ಯೆ 2023ರಲ್ಲಿ ಪ್ರಭಾಸ್‌ರದ್ದೇ […]

Advertisement

Wordpress Social Share Plugin powered by Ultimatelysocial