ಮೈಸೂರು ಭಾಗದಲ್ಲಿ ಬಿಜೆಪಿ ಅಧಿಕಾರಕ್ಕೆ ತರೋದು ಬಿಜೆಪಿ ನಾಯಕರಿಗೆ ಸವಾಲಿನ ಕೆಲಸವಾಗಿದೆ. ಎರಡು ಭಾರಿ ರಾಜ್ಯ ಅಧಿಕಾರಕ್ಕೆ ಬಂದ್ರೂ ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಸಾಧ್ಯವಾಗಿಲ್ಲ. ಹಾಗಾಘಿ ಬೇರೆ ಪಕ್ಷದ ಸ್ಥಳೀಯ ನಾಯಕರಿಗೆ ಬಿಜೆಪಿ ಗಾಳ ಹಾಕ್ತಿದೆ. ಈಗಾಗಲೇ ಅಶ್ವಿನಿ, ಇಂಡುವಾಳು ಸಚ್ಚಿದಾನಂದ್ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜೊತೆಗೆ ಜಿಲ್ಲಾಉಸ್ತುವಾರಿಯಾಗಿ ಒಕ್ಕಲಿಗ ಸಮುದಾಯದವರಿಗೆ ಹೊಣೆ ಹೊರಿಸಲಾಗಿದೆ. ಇನ್ನು ಆ ಭಾಗದಿಂದ ಒಕ್ಕಲಿಗ ಸಮುದಾಯದ ನಾಯಕರೇ ಸ್ಪರ್ಧೆ ಮಾಡ್ತಾರಾ ಎನ್ನುವ ಅನುಮಾನ ಕೂಡ ಮೂಡ್ತಾ ಇದೆ ಯಾಕಂದ್ರೆ ಇಡೀ ರಾಜ್ಯವನ್ನೇ ಕೈವಶ ಮಾಡಿಕೊಳ್ಳೊದಕ್ಕೆ ಹೊರಟಿರುವ ಬಿಜೆಪಿಗೆ ಹಳೆ ಮೈಸೂರು ಭಾಗದಲ್ಲಿ ಗೆಲುವು ಸಾಧಿಸೋದು ಕಬ್ಬಿಣದ ಕಡಲೆಯಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:
https://play.google.com/store/apps/details?id=com.speed.newskannada
Please follow and like us: