ಸಿದ್ದರಾಮಯ್ಯ ಅವರದ್ದು ಎಲ್ಲದರಲ್ಲೂ ರಾಜಕಾರಣ:ಸಿಎಂ ಬೊಮ್ಮಾಯಿ‌!

 

ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ಸಿದ್ದರಾಮಯ್ಯ ಅವರದ್ದು ಎಲ್ಲದರಲ್ಲೂ ರಾಜಕಾರಣ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರಚನೆ, ಪರಿಷ್ಕರಣೆ ಹೊಸದೇನಲ್ಲ. ಈಗ ಎದ್ದಿರುವ ಆಕ್ಷೇಪಣೆಗಳಲ್ಲಿ ಅವರ ಕಾಲದಲ್ಲಾದ ಆಕ್ಷೇಪಣೆಗಳೂ ಸೇರಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಿಡಿಮಿಡಿಗೊಂಡರು.

ಆರ್​.ಟಿ. ನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅವರ ಆಡಳಿತಾವಧಿಯಲ್ಲಿ ವ್ಯಕ್ತವಾದ ಆಕ್ಷೇಪಣೆಗಳನ್ನು ಪರಿಗಣಿಸಿ ಪರಿಷ್ಕೃತ ಪಠ್ಯಪುಸ್ತಕಗಳನ್ನು ರದ್ದುಪಡಿಸಿದರೆ? ಎಂದು ಕೇಳಿದ ಅವರು ಪರಿಷ್ಕರಣೆಯಲ್ಲಿ ಬದಲಾವಣೆ ಮಾಡಲು ಸರ್ಕಾರ ಸಿದ್ಧವಿದೆ, ಮುಕ್ತ ಮನಸ್ಸು ಹೊಂದಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿರುವೆ. ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಬೊಮ್ಮಾಯಿ‌ ಕಿಡಿಕಾರಿದರು.

ಗಾಬರಿ ಅನಗತ್ಯ:ಕರೊನಾ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮವಹಿಸಿದ್ದು, ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಜನರು ಗಾಬರಿಗೊಳ್ಳುವುದು ಬೇಡ. ಪರಿಸ್ಥಿತಿ ಅವಲೋಕಿಸಿ ಇಲಾಖಾವಾರು ಚರ್ಚೆ ನಡೆಸಿ ವರದಿ ಸಲ್ಲಿಸಲು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿರುವೆ. ಈ ವರದಿ ಬಂದ ನಂತರ ಮುಂದಿನ ಒಂದೆರಡು ದಿನಗಳಲ್ಲಿ ಸಭೆ ಸೇರಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರಣ್ ಜೋಹರ್ ಬರ್ತ್ ಡೇ ಪಾರ್ಟಿ: 50-55 ಅತಿಥಿಗಳಿಗೆ ಕೊರೊನಾ ವೈರಸ್ ಸೋಂಕು

Mon Jun 6 , 2022
  ಮುಂಬಯಿ:ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿ ಕೊರೊನಾ ವೈರಸ್ ಸೂಪರ್ ಸ್ಪ್ರೆಡರ್ ಈವೆಂಟ್ ಆಗಿದೆ ಎನ್ನಲಾಗಿದೆ. ಬಾಲಿವುಡ್ ಹಂಗಾಮ ವರದಿ ಮಾಡಿರುವ ಪ್ರಕಾರ, ಕರಣ್ ಜೋಹರ್ ಅವರ ಬರ್ತ್‌ಡೇ ಪಾರ್ಟಿಯಿಂದಾಗಿ 50-55 ಅತಿಥಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಬಾಲಿವುಡ್‌ ಸ್ಟಾರ್‌ ನಿರ್ದೇಶಕ ಕರಣ್ ಜೋಹರ್ ಇತ್ತೀಚೆಗೆ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಜನ್ಮದಿನದ ಪಾರ್ಟಿಗೆ ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌ ಹಾಗೂ ಕಾಲಿವುಡ್ ತಾರೆಗಳ ದಂಡೇ ನೆರದಿತ್ತು. ಸಿನಿಮಾರಂಗದ […]

Advertisement

Wordpress Social Share Plugin powered by Ultimatelysocial