ಹೈದರಾಬಾದ್ : ರಾಜೇಶ್ವರಿ ಎಂಬಾಕೆ ಆಸ್ತಿಗಾಗಿ ತನ್ನ ಸಹೋದರಿಗೇ ಬೆಂಕಿ ಹಚ್ಚಿ ಕೊಂದಿದ್ದಾಳೆ. ಮೃತ ಮಹಿಳೆ ಹೆಸರು ವರಲಕ್ಷ್ಮೀ ಎಂದಾಗಿದ್ದು, ಆಕೆಗೆ 36ವರ್ಷ. ವರಲಕ್ಷ್ಮೀ ಎಂಬಾಕೆ ವಾಡಿಯಾರಾಮ್ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.ಆಕೆಯ ಪತಿ ಕೆಲವು ವರ್ಷಗಳ ಹಿಂದೆಯೇ ದೂರಾವಾಗಿದ್ದಾರೆ. ಈಕೆಗೆ ರಾಜೇಶ್ವರಿ ಎಂಬ ತಂಗಿ ಇದ್ದು, ಅವಳೂ ವಿಚ್ಛೇದಿತಳು. ಇವರಿಬ್ಬರೂ ಸ್ವಂತ ಅಕ್ಕ-ತಂಗಿಯರಾಗಿದ್ದು, ಕಾಮರೆಡ್ಡಿ ಜಿಲ್ಲೆಯಲ್ಲಿ ತವರು ಮನೆಯಿದೆ. ಈ ಸಹೋದರಿಯರ ಪಾಲಕರ ಬಳಿ 5 ಎಕರೆಗಳಷ್ಟು ಭೂಮಿಯಿದೆ. ಆ ಐದು ಎಕರೆ ಭೂಮಿ ಹಂಚಿಕೊಳ್ಳುವ ಸಂಬಂಧ ವರಲಕ್ಷ್ಮೀ ಮತ್ತು ರಾಜೇಶ್ವರಿ ಮಧ್ಯೆ ವಿದಾದ ಇತ್ತು ಅದು ಬೇರೆ ಹಂತಕ್ಕೆ ಹೋಗಿ ಸಹೋದರಿಯ ಕೊಲೆಯಾಗಿದೆ.ಸೋಮವಾರ ಸಂಜೆ ರಾಜೇಶ್ವರಿ ತನ್ನ ಸೋದರಿ ವರಲಕ್ಷ್ಮೀ ಮನೆಗೆ ಬಂದಿದ್ದಾಳೆ. ಜಮೀನು ವಿಚಾರ ಚರ್ಚಿಸುವ ಸಲುವಾಗಿಯೇ ಬಂದಿದ್ದರೂ, ಮಾತುಕತೆಯೆಂಬುದು ಬರುಬರುತ್ತ ಜಗಳಕ್ಕೆ ತಿರುಗಿದೆ. ಈ ರಾಜೇಶ್ವರಿಯಂತೂ ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದೇ ಬಂದಿದ್ದಳು. ಇಬ್ಬರೂ ಜಗಳವಾಡಿಕೊಂಡ ಬಳಿಕ ರಾಜೇಶ್ವರಿ ತನ್ನ ಅಕ್ಕನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada