ಬೈಲಹೊಂಗಲ: ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಮೊಬ್ ಆಪರೇಷನ್ ತರಬೇತಿ . ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಗುವ ಗುಂಪು ಘರ್ಷನೆ, ಗಲಾಟೆ, ದಾಂದಲೇ ಅಂತಹ ಪರಿಸ್ಥಿತಿಗಳಲ್ಲಿ ಹೇಗೆ ನಿರ್ವಹಣೆ ಮಾಡಬೇಕು, ಪರಿಸ್ಥಿತಿ ಹೇಗೆ ಹತೋಟಿಗೆ ತರಬೇಕೆನ್ನುವ ಪ್ರಾತ್ತಕ್ಷತೆ ತರಬೇತಿಯನ್ನು ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಇಂದು ಭಾನುವಾರ ನೀಡಲಾಯಿತು.ಬೈಲಹೊಂಗಲ ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಈ ತರಬೇತಿ ನಡೆಯಿತು. ಉಪವಿಭಾಗದ ಪೊಲೀಸ್ ಸಿಬ್ಬಂದಿಗಳು ಶಿಸ್ತು, ಲಯ ಬದ್ಧ ತರಬೇತಿ ಪಡೆದುಕೊಂಡರು. ಉಪವಿಭಾಗ ಪೊಲೀಸ್ ಠಾಣೆ ಸಿಪಿಐ, ಪಿಎಸ್ಐ, ಎಸ್ಐ, ಹವಾಲ್ದಾರ, ಪೇದೆಗಳು ಭಾಗವಹಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada