ಕಾಂಗ್ರೆಸ್ನವರು ಪರೋಕ್ಷವಾಗಿ ಅಲ್ಖೈದಾ ಪರ ವಕಾಲತ್ತು ವಹಿಸುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.
ರವಿ ಛೇಡಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಲ್ಖೈದಾ ಸಂಘಟನೆ ಬಗ್ಗೆ ಸಹಾನುಭೂತಿ ತೋರುತ್ತಿದ್ದಾರೆ. ಹಿಜಾಬ್ ಪರ ವಕಾಲತ್ತು ವಹಿಸಿದವರೆಲ್ಲರು ಕಾಂಗ್ರೆಸ್ ಬೆಂಬಲಿಗರು. ಅಲ್ಖೈದಾ ಮತ್ತು ಕಾಂಗ್ರೆಸ್ ಒಂದೇ ಕಡೆ ಬ್ಯಾಟಿಂಗ್ ಮಾಡುತ್ತಿವೆ’ ಎಂದು ಕುಟುಕಿದರು.
‘ಹಿಜಾಬ್ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯುವುದು ಕಾಂಗ್ರೆಸ್ ಲೆಕ್ಕಾಚಾರವಾಗಿತ್ತು. ಪಂಚರಾಜ್ಯಗಳ ಚುನಾವಣೆಯಲ್ಲಿ ಅದು ಫಲ ನೀಡಲಿಲ್ಲ’ ಎಂದು ಕಟಕಿಯಾಡಿದರು.
‘ಧ್ವನಿವರ್ಧಕದ ಶಬ್ಧದ ಡೆಸಿಬಲ್ ಪ್ರಮಾಣ ಇಂತಿಷ್ಟು ಇರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಸೀದಿ, ದೇಗುಲ ಯಾವುದಕ್ಕೂ ಕೋರ್ಟ್ ರಿಯಾಯಿತಿ ನೀಡಿಲ್ಲ. ಈ ಬಗ್ಗೆ ತಕಾರರು ಇದ್ದರೆ ಸಿದ್ದರಾಮಯ್ಯ ಕೋರ್ಟ್ನಲ್ಲಿ ವಕಾಲತ್ತು ಹಾಕಲಿ’ ಎಂದರು.
‘ಕೋವಿಡ್, ರಷ್ಯಾ ಮತ್ತು ಉಕ್ರೇನ್ ಯುದ್ಧ ಆರಂಭದ ನಂತರ ಬೆಲೆ ಏರಿಕೆ ಕಾಡುತ್ತಿದೆ. ಬೆಲೆ ಏರಿಕೆಗೆ ಪ್ರಧಾನಿ ಮೋದಿ ಅವರನ್ನು ಹೊಣೆ ಮಾಡುವುದು ತಪ್ಪು’ ಎಂದು ಪ್ರತಿಕ್ರಿಯಿಸಿದರು.
‘ಭಗವದ್ಗೀತೆಯಲ್ಲಿ ಮನುಕುಲಕ್ಕೆ ವಿರುದ್ಧವಾದ ಅಂಶಗಳು ಇದ್ದರೆ ತೆಗೆದುಹಾಕಲಿ. ಅದೇ ರೀತಿ ಇತರ ಮತ ಗ್ರಂಥಗಳಲ್ಲಿ ಅಂಥ ಅಂಶಗಳಿದ್ದರೆ ಅವುಗಳನ್ನು ತೆಗೆದು ಹಾಕಬೇಕು’ ಎಂದು ಉತ್ತರಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada