ಟಾಲಿವುಡ್ ನಟ ಚಿರಂಜೀವಿ ನಟನೆಯ ಆಚಾರ್ಯ ಚಿತ್ರದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ರೂಮರ್ ಟಾಲಿವುಡ್‌ನಲ್ಲಿ ಹರಿದಾಡಿತ್ತು. ಆದರೆ ಆ ಪಾತ್ರಕ್ಕೆ ಚಿರಂಜೀವಿ ಮಗ ರಾಮ್ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗ ಖಚಿತವಾಗಿದೆ. ಆದರೆ ಟಾಲಿವುಡ್‌ನಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಮಹೇಶ್ ಬಾಬು ಅವರ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಹೊಸ ಚಿತ್ರದಲ್ಲಿ ರಾಮ್ ಚರಣ್ ನಾಯಕರಾಗಿ ನಟಿಸಲಿದ್ದಾರೆ. ನಿರ್ದೇಶಕ ವಂಶಿ ಪೈದಿಪಳ್ಳಿ ಕಥೆಯೊಂದನ್ನು […]

ಕೊರೊನಾದಿಂದ ಚಿತ್ರೋದ್ಯಮ ಸ್ಥಗಿತಗೊಂಡಿದ್ದು, ನಟಿ ಕವಿತಾ ಗೌಡನಿಗೂ ಕೆಲವು ಚಾನ್ಸ್ ಮಿಸ್ ಆಗಿವೆ. ಕಳೆದ ವರ್ಷ ಗುಬ್ಬಿ ಮೇಲೆ ಬ್ರಹ್ಮಾಸ್ತç ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕವಿತಾ ಆ ನಂತರ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಎಲ್ಲಾ ಅಂದುಕೊAಡAತೆ ಆಗಿದ್ರೆ ಕವಿತಾ ಅವರ ಎರಡು ಚಿತ್ರಗಳು ಬಿಡುಗಡೆಯಾಗಬೇಕಿದ್ದವು. ಲಾಕ್‌ಡೌನ್‌ನಿಂದ ಅಪರೂಪದ ಅವಕಾಶ ಮೀಸ್ ಆಗಿದೆಯಂತೆ. ದಿಗಂತ ಅಭಿನಯದ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಸುಮಂತ್ ಶೈಲೆಂದ್ರ ಅಭಿನಯದ ಗೋವಿಂದ ಗೋವಿಂದ ಚಿತ್ರಗಳಲ್ಲಿ ಕವಿತಾ ನಟಿಸಿದ್ದು, ಎರಡು […]

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅವರನ್ನು ನೆನಪಿಸಿಕೊಂಡು ನಟ ಅರ್ಜುನ್ ಕಪೂರ್ ಭಾವಾನಾತ್ಮಕವಾಗಿ ಸಂತಾಪ ಸೂಚಿಸಿದ್ದಾರೆ. ೨೦೧೩ರಲ್ಲಿ ಔರಂಗಜೇಬ್ ಚಿತ್ರದಲ್ಲಿ ರಿಷಿ ಕಪೂರ್ ತನ್ನ ಭುಜ ಹಿಡಿದುಕೊಂಡೊ ನಗುತ್ತಿರುವ ಫೋಟೋ ಒಂದನ್ನು ಟ್ವೀಟ್ ಮಾಡಿರುವ ಅರ್ಜುನ್ ಕಪೂರ್. ರಿಷಿ ಕಪೂರ್ ಅವರೊಂದಿಗಿನ ಒಡನಾಟದ ಕುರಿತು ಭಾವನಾತ್ಮಕ ನೆನಪುಗಳನ್ನು ಮೆಲುಕು ಹಾಕಿದ್ದಾರೆ.”ಅವರು ನನ್ನ ತಂದೆ, ನನ್ನ ಸಹನಟ, ನಾನು ನೋಡುವ ಮತ್ತು ಮೆಚ್ಚುವಷ್ಟು ಬೆಳೆದ ಪ್ರತಿಭೆ… ಆದರೆ, ಎಲ್ಲರಿಂದ ಅವರನ್ನು […]

ಅಮಲಾ ಪೌಲ್ ದಕ್ಷಿಣ ಭಾರತದ ಬಹು ಭಾಷಾ ಜನಪ್ರಿಯ ನಟಿ. ಆಕೆ ನಾಯಕ ನಟ ಸುದೀಪ್‌ ರ ‘ಹೆಬ್ಬುಲಿ’ ಚಿತ್ರದ ಮೂಲಕ ಕನ್ನಡದಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಈ ಚಿತ್ರದ ಬಳಿಕ ಆಕೆಗೆ ಚಂದನವನದಲ್ಲಿ ಅವಕಾಶಗಳು ಲಭಿಸಲಿಲ್ಲ. ಈಗ ಆಕೆ ಮಲಯಾಳ, ತಮಿಳು ಮತ್ತು ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.  ಲಾಕ್‌ಡೌನ್‌ ಪರಿಣಾಮ ಕೇರಳದಲ್ಲಿ ಅಮ್ಮನೊಟ್ಟಿಗೆ ಕಾಲ ದೂಡುತ್ತಿದ್ದಾರೆ. ಈ ಅವಧಿಯಲ್ಲಿ ಆಕೆ ಮಹಿಳೆಯ ಬದುಕಿನಲ್ಲಿ ಪುರುಷನ ಪಾತ್ರದ ಬಗ್ಗೆ ಇನ್‌ಸ್ಟ್ರಾಗ್ರಾಮ್‌ನಲ್ಲಿ […]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಿಯಿಸಿರೋ ರಾಬರ್ಟ್ ಚಿತ್ರ ಈಗಾಗಲೇ ಸದ್ದು ಮಾಡ್ತಿದೆ. ರಾಬರ್ಟ್ ಚಿತ್ರತಂಡ ಇಂದು ವಿಶ್ವ ಕಾರ್ಮಿಕರ ದಿನಾಚರಣೆ ಹಿನ್ನೆಲೆ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಮಾಡೋ ಮೂಲಕ ದುಡಿಮೆಯೇ ದೇವರು ಅಂತ ನಂಬಿರೋ ಕಾರ್ಮಿಕರಿಗೆ ಅರ್ಪಿಸಿದ್ದಾರೆ.. ರಾಬರ್ಟ್ ಫಿಲ್ಮನ ಮೇಕಿಂಗ್ ವಿಡಿಯೋದಲ್ಲಿ ಸಿನಿಮಾ ಶೂಟಿಂಗನಲ್ಲಿ ಕ್ಯಾಮೆರಾ ಹಿಂದೆ ಕೆಲಸ ಮಾಡಿದ ಕಾರ್ಮಿಕರ ಶ್ರಮ ಹೇಗಿರುತ್ತೆ ಅಂತ ತಿಳಿಸಿಕೊಟ್ಟಿದ್ದಾರೆ… ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾ ಬಗ್ಗೆ  ತಮ್ಮ […]

ಇಂದು ಬೆಳಿಗ್ಗೆ ವಿಧಿವಶರಾಗಿದ್ದ ನಟ ರಿಷಿ ಕಪೂರ್ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಮುಂಬೈನ ಚಂದನ್ ವಾಡಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು. ರಿಷಿ ಕಪೂರ್ ಅವರ ಮಗ ರಣಬೀರ್ ಕಪೂರ್, ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಇನ್ನು ಅಂತ್ಯಕ್ರಿಯೆಯಲ್ಲಿ ರಿಷಿ ಕಪೂರ್ ಪತ್ನಿ ನೀತೂ ಸಿಂಗ್ ಕಪೂರ್, ಪುತ್ರ ರಣಬೀರ್ ಕಪೂರ್, ಸಹೋದರ ರಣಧೀರ್ ಕಪೂರ್, ಕರಿನಾ ಕಪೂರ್, ಸೈಫ್ ಅಲಿಖಾನ್, ಅನಿಲ್ ಅಂಬಾನಿ, ಅಯಾನ್ ಮುರ‍್ಜಿ, ಅಲಿಯಾ ಭಟ್, ಅಭಿಷೇಕ್ ಬಚ್ಚನ್ […]

ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ದಂಪತಿಯ ಪುತ್ರನ ಹೇಗಿದ್ದಾನೆಂಬ ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ರಾಧಿಕಾ ಮತ್ತು ಯಶ್ ದಂಪತಿ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪುತ್ರನ ಫೋಟೋ ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.ನಿನ್ನೆಯೇ ರಾಧಿಕಾ ತಮ್ಮ ಪುತ್ರನ ಫೋಟೋ ರಿವೀಲ್ ಮಾಡುವುದಾಗಿ ಹೇಳಿದ್ದರು. ಅದರಂತೆ ಇಂದು ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಮುದ್ದು ಮಗನ ಫೋಟೋ ಹಂಚಿಕೊಂಡಿದ್ದು ನಿಮ್ಮ ಆಶೀರ್ವಾದ, ಹಾರೈಕೆ ಈ ನಮ್ಮ ಮುದ್ದು […]

ರಿಷಿ ಕಪೂರ್ ಎಂತಹ ಅದ್ಬುತ ನಟ. ಅವರಿಗೆ ಜೋಡಿಯಾಗಿ ನೀತು ಕಪೂರ್ ನಟಿಸಿದರೆ ಅಂದಿನ ಕಾಲಕ್ಕೆ ಆ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿತ್ತು. ಇವರಿಬ್ಬರ ಕಾಂಬಿನೇಷನ್ ಸಿನಿಮಾಗಳನ್ನು ನೋಡಿದ ಪ್ರೇಕ್ಷಕರು ಇವರು ಗೋಲ್ಡನ್ ಕಪಲ್ಸ್ ಎನ್ನುತ್ತಿದ್ದರು. ಅಷ್ಟೊಂದು ಜನಪ್ರಿಯತೆ ಹೊಂದಿದ್ದರು ಈ ಇಬ್ಬರು ತಾರೆಯರು. ರಿಷಿ ಕಪೂರ -ನೀತು ಕಪೂರ್ ಅವರ ಲವ್‌ಸ್ಟೋರಿಯು ಸಹಿತ ಸಿನಿಮಾ ತರಾನೆ ಇದೆ. ನೀತು ರೀಷಿ ಕಪೂರ್ ಜೊತೆ ೧೯೭೫ರ ವೇಳೆಗೆ ಸುಮಾರು ೧೫ […]

ಕೊರೋನಾ ಮಹಾಮಾರಿಯಿಂದ ಇಡೀ ದೇಶವೇ ಲಾಕ್​ಡೌನ್​ನಲ್ಲಿದೆ. ಇದರಿಂದ ಅನೇಕ ಜನರು ಶುಭ ಕಾರ್ಯಕ್ರಮಗಳನ್ನು ಮುಂದಿಡಿದ್ದಾರೆ, ಹಲವು ಮದುವೆಗಳು ರದ್ದಾಗಿವೆ. ಇದರ ನಡುವೆ ಹಿಂದಿ ಬಿಗ್ ಬಾಸ್ ಖ್ಯಾತಿ ಅಶುತೋಷ್ ಕೌಶಿಕ್ ಸರಳ ಮದುವೆಯಾಗುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ. ಹೊಸ ಜೀವನದ ಕನಸು ಕಾಣುತ್ತಿದ್ದಂತೆ ಇತ್ತ ಕೊರೋನಾ ಕಾಟದಿಂದ ಲಾಕ್​ಡೌನ್ ಘೋಷಣೆಯಾಯಿತು.ಆದರೆ ವಿವಾಹವನ್ನು ಕುಟುಂಬ ವರ್ಗದವರು ನಿರ್ಧರಿಸಿದ್ದರಿಂದ ದಿನಾಂಕವನ್ನು ಮುಂದೂಡಲು ಇಷ್ಟವಿರಲಿಲ್ಲ. ಹಾಗಾಗಿ ತಮ್ಮ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಳ್ಳದೆ, ಹಿರಿಯರ ಸಮ್ಮುಖದಲ್ಲಿ […]

ಲಾಕ್ ಡೌನ್ ನಡುವೆ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ.ಇಂದು ಜೂನಿಯರ್ ರಾಕಿಭಾಯ್ ದರ್ಶನವಾಗಲಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ದಂಪತಿಯ ಎರಡನೆ ಪುತ್ರ ಹೇಗಿದ್ದಾನೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಇದುವರೆಗೂ ಯಶ್ ದಂಪತಿ ಪುತ್ರನ ಫೋಟೋವನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ. ಆದರೀಗ ಅಭಿಮಾನಿಗಳಿಗೆ ಮುದ್ದಿನ ಮಗನನ್ನು ದರ್ಶನ ಮಾಡಿಸಲು ಸಜ್ಜಾಗಿದ್ದಾರೆ.ಇಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವುದಾಗಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮಗಳ […]

Advertisement

Wordpress Social Share Plugin powered by Ultimatelysocial