ಕನ್ನಡದ ಅಲ್ಲು ಅರ್ಜುನ್ ಅಂತಾನೇ ಹೆಸರಾಗಿರೋ ಸ್ಯಾಂಡಲ್‌ವುಡ್ ನ ಉದಯೋನ್ಮುಖ ನಾಯಕ ನಟ ಅನೀಶ್ ಲಾಕ್‌ಡೌನ್ ಹಿನ್ನಲೆ ಹಸಿವಿನಿಂದ ಬಳಲುತ್ತಿರುವ ಎಷ್ಟೋ ಜೀವಗಳಿಗೆ ಆಸರೆಯಾಗಿದ್ದಾರೆ. ಹೌದು ಅನಿಶ್ ಅವರ ಕು ಟುಂಬದವರೆಲ್ಲ ಸೇರಿಕೊಂಡು ಅಡುಗೆ ತಯಾರಿಸಿ ಊಟ ಸಿಗದ ೧೦೦೦ ಜನರಿಗೆ ಊಟದ ಪ್ಯಾಕೆಟ್‌ಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಪ್ರತಿ ದಿನ ೧೦೦೦ ಜನರಿಗೆ ಅವರ ಕುಟುಂಬದವರಿAದ ಆಹಾರ ತಲುಪಿಸಲಾಗುತ್ತದೆ. ಈ ವರೆಗೂ ೨೫೦೦೦ ಜನರಿಗೆ ಊಟ ನೀಡಿದ್ದಾರೆ. ಕೊರೊನಾ […]

ದೆಹಲಿ: ಜನಪ್ರಿಯ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ತಾಯಿ ಸಯೀದಾ ಬೇಗಂ ಅನಾರೋಗ್ಯದಿಂದ ಬಳಲುತ್ತಿದ್ದು, ಜೈಪುರದ ಬೆನಿವಲ್ ಕಾಂತಾ ಕಾಲೋನಿಯಲ್ಲಿ ನಿನ್ನೆ ತಡ ರಾತ್ರಿಯಂದು ಮೃತಪಟ್ಟಿದ್ದಾರೆ. ವಿಧಿ ಆಟ ಅಂದ್ರೆ ಇದೇ ಅನ್ಸುತ್ತೆ, ತಾಯಿ ಅಂತ್ಯ ಕ್ರಿಯೆಗೂ ಬರಲಾರದ ಸ್ಥಿತಿಯಲ್ಲಿ ಬಾಲಿವುಡ್ ನಟ. ಹೌದು ಇರ್ಫಾನ್ ನ್ಯೂರೋ ಎಂಡೋಕ್ರೆöÊನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು, ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಭೀತಿಯಿಂದ ಲಾಕ್‌ಡೌನ್ ಹೇರಲಾಗಿದ್ದು, ವಿಮಾನವನ್ನು ರದ್ದುಗೊಳಿಸಿರುವುದರಿಂದ ಇರ್ಫಾನ್ ಖಾನ್ […]

ದೆಹಲಿ: ಇಡೀ ದೇಶವೇ ಕೊರೊನಾದಿಂದ ತತ್ತರಿಸಿದೆ.ಕೊರೊನಾ ವೈರಸ್ ಜಗತ್ತಿನಾದ್ಯಂತ ತೀವ್ರವಾಗಿ ಹರಡುತ್ತಿದೆ. ಹೀಗಾಗಿ ಹಲವು ಮಂದಿ ದೇವರ ಮೊರೆಹೋಗುತ್ತಿದ್ದಾರೆ. ಅದೇ ರೀತಿಯಾಗಿ ಬಾಲಿವುಡ್ ನಟಿ ಹಿನಾ ಖಾನ್ ಕೂಡಾ ಕೊರೊನಾ ನಿವಾರಣೆಗಾಗಿ ಅಲ್ಲಾನ ಮೊರೆ ಹೋಗಿದ್ದಾರೆ. ಕೊರೊನಾ ಪೀಡಿತರು ಆದಷ್ಟೂ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಎಲ್ಲರ ಯೋಗಕ್ಷೇಮಕ್ಕಾಗಿ ನಟಿ ಪ್ರಾರ್ಥನೆ ಮಾಡಿ, ಎಲ್ಲರಿಗೂ ರಂಜಾನ್ ಹಬ್ಬ ಶುಭ ತರಲಿ ಎಂದು ಪ್ರಾರ್ಥಿಸಿದ್ದಾರೆ.

ವರನಟ ಡಾ. ರಾಜ್​ಕುಮಾರ್​ ಹುಟ್ಟುಹಬ್ಬದಂದು ಬೆಂಗಳೂರು ಸಿಟಿ ಪೊಲೀಸರು ಟ್ವಿಟ್ಟರ್​​ನಲ್ಲಿ ವಿಶೇಷವಾಗಿ ಮನವಿ ಮಾಡಿದ್ದಾರೆ. ಕೊರೋನಾ ವೈರಸ್​​ ಹಿನ್ನಲೆ ಎಚ್ಚರಿಕೆಯಿಂದ ಇರುವಂತೆ ಹಾಡಿನ ಮೂಲಕ ಸಂದೇಶ ನೀಡಿದ್ದಾರೆ. 1976ರಲ್ಲಿ ‘ಪ್ರೇಮದ ಕಾಣಿಕೆ’ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ‘ಬಾನಿಗೊಂದು ಎಲ್ಲೆ ಎಲ್ಲಿದೆ’ ಹಾಡು ಇಂದಿಗೂ ಹೆಚ್ಚು ಜನಪ್ರಿಯವಾಗಿದೆ. ಇದೀಗ ಕೊರೋನಾ ಮಹಾಮಾರಿಯ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ಸಿಟಿ ಪೊಲೀಸರು ಈ ಹಾಡನ್ನು ಬಳಸಿಕೊಂಡು ಎಚ್ಚರಿಕೆಯ ಘಂಟೆ ಸಾರಿದ್ದಾರೆ. ಕೊರೋನಾವೆಂಬ […]

ಕನ್ನಡ ಸಿನಿಮಾಗಳ ಮೇರು ನಟ,ಕನ್ನಡ ಅಭಿಮಾನಿಗಳ ಆರಾಧ್ಯ ದೈವ,ನಟ ಸೌರ್ವಭೌಮ ದಿವಂಗತ ನಟ  ಡಾ.ರಾಜ್ ಕುಮಾರ್ ಅವರ 92ನೇ ಹುಟ್ಟು ಹಬ್ಬ ಇಂದು.. ಪ್ರತೀ ವರ್ಷ ಕಂಠೀರವ ಸ್ಟುಡಿಯೋದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದರು.ಆದರೆ ಕರೋನ ಲಾಕ್ ಡೌನ್ ಹಿನ್ನೆಲೆ ಕಡಿಮೆ ಪ್ರಮಾಣದಲ್ಲಿ ಅಭಿಮಾನಿಗಳು ಈ ಬಾರಿ ಸೇರಿದ್ರು..ಕುಟುಂಬಸ್ಥರೆಲ್ಲರೂ ಸೇರಿ ಜನ್ಮ ದಿನವನ್ನು ಆಚರಿಸುತ್ತಿದ್ರು..ಈ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿನ ತಂದೆ ರಾಜ್ ಕುಮಾರ್ […]

ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾ, ಅವರ ಕೆಲಸವನ್ನು ಹುರಿದುಂಬಿಸುತ್ತಾ ಬಂದಿರುವ ಗ್ಲೋಬಲ್ ಐಕಾನ್ ಪ್ರಿಯಾಂಕ ಚೋಪ್ರಾ ಈಗ ೧೦,೦೦೦ ಆರೋಗ್ಯ ಕಾರ್ಯಕರ್ತರಿಗೆ ಪಾದರಕ್ಷೆ ನೀಡುವ ಮೂಲಕ ಮತ್ತೆ ಅವರನ್ನು ಬೆಂಬಲಿಸುತ್ತಿದ್ದಾರೆ. ಹರಿಯಾಣ, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಆರೋಗ್ಯ ಕಾರ್ಯಕರ್ತರಿಗೆ ಶೂಸ್‌ಗಳನ್ನ ದೇಣಿಗೆಯಾಗಿ ನೀಡಿದ್ದಾರೆ. ಒಟ್ಟು ೧೦,೦೦೦ ಜೋಡಿ ಪಾದರಕ್ಷೆಯನ್ನು ನೀಡಿದ್ದು, ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. […]

ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಅಭಿಮಾನಿಗಳೆಲ್ಲ ತಮ್ಮ ನೆಚ್ಚಿನ ನಟನಂತೆ ಸಮಾಜ ಕಾರ್ಯಗಳಲ್ಲಿ ತೊಡಗಿಕೊಂಡು ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಆದ್ರೆ, ಸ್ಯಾಂಡಲ್‌ವುಡ್‌ಲ್ಲಿ ಬಾಸ್ ಆಗಿ ಅಬ್ಬರಿಸುವ ಚಾಲೆಜಿಂಗ್ ಸ್ಟಾರ್ ಅಭಿಮಾನಿಗಳು ಪ್ರಾಣಿಗಳಿಗೆ ತರಕಾರಿ, ಬ್ರೇಡ್ ವಿತರಣೆ ಮಾಡುತ್ತಿದ್ದಾರೆ. ಹೌದು ದರ್ಶನ ಅವರು ಪ್ರಾಣಿಪ್ರಿಯರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಅವರಂತೆ ಗಜೇಂದ್ರಗಡದ ಚಿನ್ನದ ಕಳಸ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದವರು ಸೇರಿಕೊಂಡು ಪ್ರಾಣಿಗಳಿಗೆ ಹಾಗೂ ಬಡವರಿಗೆ ಆಹಾರ ವಿತರಿಸುವ […]

ಮಹಾಮಾರಿ ಕರೋನ ದಿಂದ ರಾಜ್ಯದಾದ್ಯಂತ ಲಾಕ್ ಡೌನ್ ಆಗಿ ಎಲ್ಲರಿಗೂ ಒಂದೊಂದು ಸಮಸ್ಯೆ ಇದ್ದರೆ ಕೆಲವರಿಗೆ ಮಾತ್ರ ಒಂದು ಹೊತ್ತಿನ ತುತ್ತು ಊಟಕ್ಕೂ ಸಂಕಷ್ಟ ಎದುರಾಗಿದೆ. ಇಂತಹ ಪರಿಸ್ಥಿತಿ ನಡುವೆಯೂ ಕನ್ನಡ ಚಿತ್ರ ರಂಗದ ಕೆಲವು ನಟರು ಹಾಗೂ ಅವರ ಅಭಿಮಾನಿಗಳಿಂದ ಸಹಾಯ ಮಾಡುತ್ತಿದ್ದು, ಅದೇ ರೀತಿ ಗಣಿನಾಡು ಬಳ್ಳಾರಿಯಲ್ಲಿ ಕೂಡ ಬಡ ಜನರ ಊಟದ ಸೇವೆಗಾಗಿ ಸತತ ೨೫ ದಿನಗಳಿಂದ ಪೊಗರು ಚಿತ್ರ ನಟ ಧ್ರುವ ಸರ್ಜಾ ಅವರ […]

ನಟಿ ರಾಧಿಕಾ ಪಂಡಿತ್ ಮತ್ತು ಯಶ್ ಪುತ್ರಿ ಆಯಿರಾ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ರಾಕಿಂಗ್ ದಂಪತಿ ಮಗಳ ಮುದ್ದು ಫೋಟೋವನ್ನು ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ ಹರಿದು ಬರುತ್ತೆ. ಸದ್ಯ ರಾಧಿಕಾ ಪಂಡಿತ್ ಮಗಳ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ಪುತ್ರಿಯ ಜೊತೆ ಮಾತನಾಡುತ್ತಿದ್ದಾರೆ. ರಾಧಿಕಾ ಮತ್ತು ಯಶ್ ಫೋಟೋವನ್ನು ಇಟ್ಟು ಅಪ್ಪ ಮತ್ತು […]

ತನಗೆ ಹೆಸರು, ಹಣ ತಂದುಕೊಟ್ಟಿದ್ದ ಬಣ್ಣದಲೋಕವನ್ನು ಬಿಟ್ಟು ರಾಜಕೀಯದಲ್ಲಿ ಸಾಧನೆ ಮಾಡಲು ಹೋಗಿ ಚಿರಂಜೀವಿ ಸೋತದ್ದು ಗೊತ್ತೇ ಇದೆ. ಇದಾದ ಹಲವು ವರ್ಷಗಳ ಗ್ಯಾಪ್ ನಂತರ ಮತ್ತೆ ಬಣ್ಣ ಹಚ್ಚಿರುವ ಮೆಗಾಸ್ಟಾರ್ ಚಿರಂಜೀವಿ “ಸೈರಾ ನರಸಿಂಹ ರೆಡ್ಡಿ” ಮೂಲಕ, ಗಾಂಧಿ ಜಯಂತಿಯ ದಿನದಂದು ತೆರೆಯಲ್ಲಿ ಆರ್ಭಟಿಸಲಿದ್ದಾರೆ. ವಿಚಾರ ಅದಲ್ಲ, ಇಲ್ಲಿ ಎರಡು ವಿಚಾರವಿದೆ. ಒಂದು, ಈ ಚಿತ್ರ ಕನ್ನಡ ಸಹಿತ ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವುದು. ಇನ್ನೊಂದು, ಈ ಚಿತ್ರವನ್ನು […]

Advertisement

Wordpress Social Share Plugin powered by Ultimatelysocial