ನವದೆಹಲಿ : ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಬಂಪರ್ ಆಫರ್ ನೀಡಿದ್ದು, ನೀವು ಹೀಗೆ ಮಾಡಿದರೆ ನೇರವಾಗಿ 6 ಸಾವಿರ ರೂ.ಗಳು ನಿಮ್ಮ ಖಾತೆಗೆ ಉಚಿತವಾಗಿ ಜಮಾ ಆಗಲಿದೆ. ಇಷ್ಟಕ್ಕೂ ಅದ್ಯಾಕೆ ಕೇಂದ್ರ ಸರ್ಕಾರ 6 ಸಾವಿರ ನೀಡುತ್ತೆ. ಈ ಹಣಕ್ಕಾಗಿ ನೀವು ಮಾಡಬೇಕಾಗಿದ್ದಾದ್ರು ಏನು.?
ಅಸಲಿಗೆ ಕೇಂದ್ರ ಸರ್ಕಾರ ಸ್ಪರ್ಧೆಯೊಂದನ್ನ ನಡೆಸುತ್ತಿದೆ.ಇದರಲ್ಲಿ ಭಾಗವಹಿಸಿ ವಿಜೇತರಾದರೇ ನೀವು ನಗದು ಬಹುಮಾನ ಪಡೆಯಬಹುದು. ವಿಷಯಕ್ಕೆ ಬರುವುದಾದ್ರೆ ಮೋದಿ ಸರ್ಕಾರ ವಿಶೇಷವಾಗಿ ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆಯನ್ನ ಇನ್ನಷ್ಟು ಸುಧಾರಿಸಲು ಹೊಸ ಯೋಜನೆಯನ್ನ ಜಾರಿಗೆ ತಂದಿದೆ. ಮಹಿಳೆಯರ ಸುರಕ್ಷತೆಗಾಗಿ ಇದನ್ನ ‘ ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ ‘ ಎಂದು ಕರೆಯಲಾಗುತ್ತದೆ. ಇದಕ್ಕಾಗಿ ಕೇಂದ್ರ ಗೃಹ ಇಲಾಖೆ ಯುನಿಕ್ ಪ್ಯಾನ್ ಇಂಡಿಯಾ ಸಿಂಗಲ್ ನಂಬರ್ ಬಿಡುಗಡೆ ಮಾಡಿದೆ. ತುರ್ತು ಸಂದರ್ಭಗಳಲ್ಲಿ 112ಗೆ ಕರೆ ಮಾಡಬಹುದು. ಈ ಸೇವೆಗಳಿಗೆ ಸಂಬಂಧಿಸಿದಂತೆ ಗೃಹ ಇಲಾಖೆ ಇತ್ತೀಚೆಗೆ ಮೈಗೂ ಜೊತೆ ಸ್ಪರ್ಧೆಯನ್ನ ಆಯೋಜಿಸುತ್ತಿದೆ ಎನ್ನಲಾಗಿದೆ.
ಇದಕ್ಕಾಗಿ ರೀಲ್ಗಳು ಅಥವಾ ಕಿರು ವೀಡಿಯೋ, ಲೋಗೋ ವಿನ್ಯಾಸ, ಜಂಗಲ್ ಕಂಪೋಸಿಂಗ್ ಇತ್ಯಾದಿಗಳನ್ನು ತಯಾರಿಸಲು ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಈ ಸ್ಪರ್ಧೆಯಲ್ಲಿ ನೀವು ಪಾಲ್ಟೋವನ್ನ ಗೆದ್ದರೆ, ನೀವು ರೂ.6000 ವರೆಗೆ ಉಚಿತ ಹಣವನ್ನ ಪಡೆಯಬಹುದು. ಅಂದ್ಹಾಗೆ, ಸ್ವರ್ಧೆ ವಿಜೇತರಿಗೆ 3000, 2ನೇ ಬಹುಮಾನವಾಗಿ 2000 ಸಾವಿರ ಮತ್ತು ಮೂರನೇ ವಿಜೇತರಿಗೆ 1000 ಲಭಿಸಲಿದೆ. ಇನ್ನು ಇಲ್ಲಿ ಕೆಲವು ನಿಯಮಗಳು ಕಡ್ಡಾಯವಾಗಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada