ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ತೆರೆಕಂಡು ಮೂರು ದಿನಗಳಾಗಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. ಒಂದ್ಕಡೆ ಹೆಚ್ಚು ಕಲೆಕ್ಷನ್ ಮಾಡ್ತಿದ್ರೆ, ಮತ್ತೊಂದ್ಕಡೆ ರಾಬರ್ಟ್ ಸಿನಿಮಾ ಪೈರಸಿ ವಿಚಾರದಲ್ಲೂ ಹೆಚ್ಚು ಸುದ್ದಿಯಾಗ್ತಿದೆ. ರಾಬರ್ಟ್ ಸಿನಿಮಾ ಪೈರಸಿ ಮಾಡಿದ್ದ ಒಬ್ಬೊಬ್ಬರೇ ಸಿಲುಕಿ ಕೊಳ್ತಿದ್ದಾರೆ.
ಸದ್ಯ ಬೆಂಗಳೂರಿನ ಪ್ರಸನ್ನ ಥಿಯೇಟರ್ ನಲ್ಲಿ ವಿಶ್ವನಾಥ್ ಎಂಬಾತ, ರಾಬರ್ಟ್ ಸಿನಿಮಾ ಪೈರಸಿ ಕಾಪಿಯನ್ನು ಇಟ್ಕೊಂಡು, ಸಿನಿಮಾ ನೋಡಲು ಬರುವವರಿಂದ ಹಣ ಪಡೆದು ಅವರಿಗೆ, ಚಿತ್ರವನ್ನು ಶೇರ್ ಮಾಡುತ್ತಿದ್ದ.
ಈ ವೇಳೆ ಆರೋಪಿ ವಿಶ್ವನಾಥ್ ನನ್ನು ಚಿತ್ರತಂಡ ಗುರುತಿಸಿ, ಅವನನ್ನು ವಿಚಾರಿಸಿದ್ದಾರೆ.ಆಗ ವಿಶ್ವನಾಥ್ ಜೊತೆಗೆ ಇನ್ನೂ ಇಬ್ಬರು ವ್ಯಕ್ತಿಗಳು ಈ ಕೆಲಸದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.ಸದ್ಯ ಚಿತ್ರತಂಡ ಆರೋಪಿ ವಿಶ್ವನಾಥ್ ನನ್ನು ಮಾಗಡಿ ರೋಡ್ ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಏಫ್ ಐ ಆರ್ ಕೂಡ ದಾಖಲಾಗಿದೆ.
ಇದನ್ನೂ ಓದಿ: BESCOM ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ