ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪಗೆ ಈ ಬಾರಿಯ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದ್ದು, ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಬೇಕಾ ಬೇಡವಾ ಎನ್ನುವ ಕುರಿತು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ.
ಚಿತ್ರದುರ್ಗದ ತಮ್ಮ ನಿವಾಸದ ಬಳಿ ಸಭೆ ನಡೆಸಿದ ಎಂ.ಚಂದ್ರಪ್ಪ, ಸಭೆಯಲ್ಲಿ ಕೇಕ್ ಕತ್ತರಿಸಿ ಬಿಎಸ್ ಯಡಯೂರಪ್ಪ ಬರ್ತಡೇ ಆಚರಣೆ ಮಾಡಿದ್ದಾರೆ. ಬಿಎಸ್ ವೈ ಬರ್ತಡೇ ನೆಪದಲ್ಲಿ ಈ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ನಿರಾಕರಣೆ ಭೀತಿ ಹಿನ್ನೆಲೆ ಸಭೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಸಭೆಯಲ್ಲಿ ಬೆಂಬಲಿಗರ ಅಭಿಪ್ರಾಯ ಕೇಳಿರುವ ಎಂ.ಚಂದ್ರಪ್ಪ, ಹೊಳಲ್ಕೆರೆ ಬಿಜೆಪಿ ಟಿಕೆಟ್ ಕೇಳುತ್ತಿರುವವರ ಬಗ್ಗೆ ಸಭೆಯಲ್ಲಿ ಕಿಡಿ ಕಾರಿದ್ದಾರೆ.ನಾವು ಅಧಿಕಾರಕ್ಕಾಗಿಯೇ ಬಂದವರು ಅಲ್ಲ. ನಿಮ್ಮ ಆಶೀರ್ವಾದ ಇದ್ದರೆ ಚುನಾವಣೆಯಲ್ಲಿ ಸ್ಪರ್ದಿಸುತ್ತೇನೆ.ಇಲ್ಲವಾದಲ್ಲಿ ಮನೆಯಲ್ಲಿ ಇರುತ್ತೇನೆ ಎದಿದ್ದಾರೆ.ಶಾಸಕನಾಗಿ ನಿಮಗೆ ನನ್ನ ಕೆಲಸ ತೃಪ್ತಿ ತಂದಿದ್ದರೆ ಚುನಾವಣೆಗೆ ಸ್ಪರ್ಧೆ ಮಾಡ್ತೇನೆ.ಇಲ್ಲವೆಂದರೆ ನಾನು ಚುನಾವಣೆಗೆ ಸ್ಪರ್ದಿಸಲ್ಲ ಎಂದಿರುವ ವೋಡಿಯೋ ವೈರಲ್ ಆಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada