ನಜ್ಜನ್ ವಿತ್ ಸ್ಮಿತಾ ಎಂಬ ಟಾಕ್ ಶೋ ಮೂಲಕ ಗಾಯಕಿ ಸ್ಮಿತಾ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಮತ್ತು ಕೆರಿಯಲ್ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಈ ಕಾರ್ಯಕ್ರಮವು ವೇದಿಕೆಯಾಗಲಿದೆ.ಒಟಿಟಿ ಪ್ಲಾಟ್ಫಾರ್ಮ್ ಸೋನಿಲಿವ್ನಲ್ಲಿ ಪ್ರಸಾರವಾಗಲಿದ್ದಾರೆ. ಮೊದಲ ಅತಿಥಿಯಾಗಿ ಮೆಗಾಸ್ಟಾರ್ ಚಿರಂಜೀವಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಇದೀಗ ವೈರಲ್ ಆಗಿದೆ. ಈ ಪ್ರೋಮೋದಲ್ಲಿ ಕೆಲ ಅಭಿಮಾನಿಗಳು ತಮ್ಮ ಮೇಲೆ ಹೂವಿನ ಮಳೆಗರೆದರೆ, ಕೆಲವರು ಕೋಳಿ ಮೊಟ್ಟೆ ಎಸೆದಿದ್ದಾರೆ ಎಂದು ಚಿರಂಜೀವಿ ತನಗಾದ ಕಹಿ ಅನುಭವದ ಬಗ್ಗೆ ಕೂಡ ಮಾತಾಡಿದ್ದಾರೆ. ಚಿರಂಜೀವಿ ಮೇಲೆ ಮೊಟ್ಟೆ ಎಸೆದ ಬಗ್ಗೆ ಮಾತಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಚಿರಂಜೀವಿ ಮೇಲೆ ಯಾವಾಗ? ಯಾರು ಮೊಟ್ಟೆ ಎಸೆದಿದ್ರು ಗೊತ್ತಾ? 2008ರಲ್ಲಿ ಚಿರಂಜೀವಿ ರಾಜಕೀಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಆಂಧ್ರದಲ್ಲಿ ನಡೆದ ಪಾದಯಾತ್ರೆಯಲ್ಲಿ ನಟ ಚಿರಂಜೀವಿ ಭಾಗವಹಿಸಿದ್ರು. ಪಾದಯಾತ್ರೆಯಲ್ಲಿ ತೆರಳುತ್ತಿದ್ದ ವೇಳೆ ಕಿಡಿಗೇಡಿ ಚಿರಂಜೀವಿ ಮೇಲೆ ಮೊಟ್ಟೆ ಎಸೆದಿದ್ದಾನೆ. ಮೊಟ್ಟೆ ಮೆಗಾಸ್ಟಾರ್ ಮುಖದ ಮೇಲೆಯೇ ಬಿದ್ದಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada