ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಕೆ
ರಾಜ್ಯದ ಅನೇಕ ಜಿಲ್ಲೆಯಲ್ಲಿ ಚಿರತೆ ಹಾವಳಿ ವಿಚಾರ.
ಮೈಸೂರಿನಲ್ಲಿ ಈಗಾಗಲೇ ಹಾವಳಿ ಕೊಟ್ಟಿದ್ದ ಚಿರತೆ ಸೆರೆ ಹಿಡಿಯಲಾಗಿದೆ.
ಈಗ ರಾಜ್ಯಕ್ಕೆ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ.
ಕಾಡು ಪ್ರಾಣಿ ಮಾನವ ಸಂಘರ್ಷ ನಿಲ್ಲಿಸಲು ಅಗತ್ಯ ಕ್ರಮಕ್ಕೆ ಸೂಚನೆ.
ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸೂಚಿಸಿದ್ದೇನೆ.
ಗ್ರಾಮಸ್ಥರ ಸಹಕಾರದಿಂದ ಮಾತ್ರ ಸಮಸ್ಯೆ ಬಗೆ ಹರಿಸಲು ಸಾಧ್ಯ.
ಜೊತೆಗೆ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇನೆ.
ಕಾಡಂಚಿನ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಇರುವ ಕಡೆ ಜನರ ವರ್ತನೆ ಹೇಗಿರಬೇಕು ಎಂಬ ಬಗ್ಗೆ ತಿಳಿಸುವ ಕೆಲಸ ಮಾಡುತ್ತಾರೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ರಾಜಕೀಯ ಸನ್ಯಾಸ್ತವ ಸ್ವೀಕಾರ ವಿಚಾರ.
ಅವರ ಮನಸ್ಸಿನಲ್ಲಿ ಇರುವ ಮಾತು ಹೊರಗೆ ಬಂದಿದೆ.
ನಾವೇನು ಸನ್ಯಾಸತ್ವದ ಮಾತು ಆಡಿರಲಿಲ್ಲ.
ಅವರೇ ಪದೇ ಪದೇ ಈ ಬಗ್ಗೆ ಮಾತನಾಡುತ್ತಿದ್ದಾರೆ.
ಮುಖವೇ ಮನಸ್ಸಿನ ಕನ್ನಡಿ ಎಂಬಂತೆ ಇದೂ ಸಹಃ ಆಗಿದೆ.
ಶಾದಿಭಾಗ್ಯ ಮಾಡಿದ್ದರಿಂದಲೇ ಸಿದ್ದರಾಮಯ್ಯಗೆ ದೌರ್ಭಾಗ್ಯ ಬಂತು.
ಈಗಲೂ ಮುಂದುವರೆಸಿದರೆ ಪಕ್ಷಕ್ಕೂ ದೌರ್ಭಾಗ್ಯ ಬರಲಿದೆ.
ಅದು ಬೇಕಿದ್ದರೆ ಅದೇ ಮಾತುಗಳನ್ನೇ ಆಡಿಕೊಳ್ಳಲಿ.
ಮುಸ್ಲಿಮರ ಜತೆ ಸೌಹಾರ್ದವಾಗಿರಿ ಎಂಬ ಹೇಳಿಕೆ ವಿಚಾರ.
ಮೋದಿ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಸಹಮತ.
ಪ್ರಧಾನಿ ಹೇಳಿಕೆಯನ್ನು ಮುಸ್ಲಿಂ ಓಲೈಕೆ ಅಂದುಕೊಳ್ಳಬೇಕಿಲ್ಲ.
ನಮ್ಮ ಕೆಲ ನಾಯಕರು ಮುಸ್ಲಿಂ ಮತ ಬೇಡ ಎಂದಿರುವುದು ವೈಯುಕ್ತಿಕ.
ಆಯಾ ಕ್ಷೇತ್ರದ ಪರಿಸ್ಥಿತಿಗೆ ಅನುಗುಣವಾಗಿ ಮಾತನಾಡಿದ್ದಾರೆ.
ದೇಶ ಮುನ್ನಡೆಸುವಾಗ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು.
ಮುಸ್ಲಿ ಸಮುದಾಯಕ್ಕೆ ಶಿಕ್ಷಣದ ಕೊರತೆ, ಬಡತನ ಇದೆ.
ಈ ನಿಟ್ಟಿನಲ್ಲಿ ಪ್ರಧಾನಿ ಹೇಳಿದ್ದಾರೆ.
ಬಿಜೆಪಿ ಟಿಕೆಟ್ ಘೋಷಣೆ ವಿಚಾರ.
ಚುನಾವಣೆ ಗೆಲ್ಲಲು ನಮ್ಮದು ವಿಭಿನ್ನ ತಂತ್ರಗಾರಿಕೆ.
ನಮ್ಮ ಕಾರ್ಯತಂತ್ರವನ್ನು ಕಾದುನೋಡಿ.
ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿ ಘೋಷಿಸಬಹುದು.
ಅವರು ಮಾಡಿದರು ಅಂತ ನಾವೂ ಅವರನ್ನೇ ಅನುಸರಿಸಬೇಕಿಲ್ಲ.
ಕಾಲ ಬಂದಾಗ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ
.
ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ.
https://play.google.com/store/apps/details?id=com.speed.newskannada