ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿದ ಕಾಂಗ್ರೆಸ್ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆ ಈಗ ವಿವಾದಕ್ಕೀಡಾಗಿದೆ.ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕರೂ ಆಗಿರುವ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಪಕ್ಷ ಹೊಸಪೇಟೆಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ವೇಳೆ ಸಚಿವ ಆನಂದ ಸಿಂಗ್ ಮತ್ತು ಇತರರನ್ನು ಪಕ್ಷಾಂತರ ಮಾಡಿದ್ದಕ್ಕಾಗಿ ತೀವ್ರ ಟೀಕೆ ಮಾಡುತ್ತ, ʻವೇಶ್ಯೆಯರುʼ ಎಂಬ ಹೋಲಿಕೆ ಮಾಡಿದ್ದರು.ಆನಂದ್ ಸಿಂಗ್ ಅವರು 2019ರಲ್ಲಿ ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದರು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ, ಪಕ್ಷ ತ್ಯಜಿಸಿ ಬಿಜೆಪಿ ಸೇರಿದ 17 ಶಾಸಕರ ಪೈಕಿ ಆನಂದ್ ಸಿಂಗ್ ಕೂಡ ಒಬ್ಬರು.ಹೊಸಪೇಟೆ ಆನಂದ್ ಸಿಂಗ್ ಅವರ ಆಡುಂಬೊಲ. ಅಲ್ಲಿಯೇ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದು, “ನೀವು ಸ್ಪಷ್ಟ ಬಹುಮತ ನೀಡಿದ ಸಂದರ್ಭದಲ್ಲಿ ನಾವು ಮೈತ್ರಿ ಸರ್ಕಾರ ರಚನೆ ಮಾಡಿದ್ದೆವು. ನಾವು ಮಹಿಳೆಯೊಬ್ಬರನ್ನು ಆಕೆ ತನ್ನ ಆಹಾರಕ್ಕಾಗಿ ಶರೀರ ಮಾರಾಟ ಮಾಡಿದರೆ ಬೇರೆ ಬೇರೆ ಹೆಸರುಗಳಿಂದ ಆಕೆಯನ್ನು ಗುರುತಿಸುತ್ತೇವೆ. ವೇಶ್ಯೆ ಎಂದೂ ಹೇಳುತ್ತೇವೆ. ಶಾಸಕರು ತಮ್ಮನ್ನು ತಾವು ಮಾರಿಕೊಂಡವರನ್ನು ಏನೆಂದು ಕರೆಯಬೇಕು? ಅದನ್ನು ನಾವು ನಿಮಗೇ ಬಿಟ್ಟುಬಿಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಸ್ಥಳೀಯ ಶಾಸಕರಿಗೆ ಒಂದು ಪಾಠ ಕಲಿಸಿʼʼ ಎಂದು ಹೇಳಿದ್ದರು.
https://play.google.com/store/apps/details?id=com.speed.newskannada