ಜೆಪಿ ಸೇರಿದ ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿದ ಕಾಂಗ್ರೆಸ್‌ ನಾಯಕ.

ಕಾಂಗ್ರೆಸ್‌ ಪಕ್ಷ ಬಿಟ್ಟು ಬಿಜೆಪಿ ಸೇರಿದ ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಅವರ ಹೇಳಿಕೆ ಈಗ ವಿವಾದಕ್ಕೀಡಾಗಿದೆ.ಕರ್ನಾಟಕ ವಿಧಾನ ಪರಿಷತ್‌ ವಿಪಕ್ಷ ನಾಯಕರೂ ಆಗಿರುವ ಬಿ.ಕೆ.ಹರಿಪ್ರಸಾದ್‌, ಕಾಂಗ್ರೆಸ್‌ ಪಕ್ಷ ಹೊಸಪೇಟೆಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ವೇಳೆ ಸಚಿವ ಆನಂದ ಸಿಂಗ್‌ ಮತ್ತು ಇತರರನ್ನು ಪಕ್ಷಾಂತರ ಮಾಡಿದ್ದಕ್ಕಾಗಿ ತೀವ್ರ ಟೀಕೆ ಮಾಡುತ್ತ, ʻವೇಶ್ಯೆಯರುʼ ಎಂಬ ಹೋಲಿಕೆ ಮಾಡಿದ್ದರು.ಆನಂದ್‌ ಸಿಂಗ್‌ ಅವರು 2019ರಲ್ಲಿ ಕಾಂಗ್ರೆಸ್‌ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದರು. ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರ ಇದ್ದಾಗ, ಪಕ್ಷ ತ್ಯಜಿಸಿ ಬಿಜೆಪಿ ಸೇರಿದ 17 ಶಾಸಕರ ಪೈಕಿ ಆನಂದ್‌ ಸಿಂಗ್‌ ಕೂಡ ಒಬ್ಬರು.ಹೊಸಪೇಟೆ ಆನಂದ್‌ ಸಿಂಗ್‌ ಅವರ ಆಡುಂಬೊಲ. ಅಲ್ಲಿಯೇ ಹರಿಪ್ರಸಾದ್‌ ವಾಗ್ದಾಳಿ ನಡೆಸಿದ್ದು, “ನೀವು ಸ್ಪಷ್ಟ ಬಹುಮತ ನೀಡಿದ ಸಂದರ್ಭದಲ್ಲಿ ನಾವು ಮೈತ್ರಿ ಸರ್ಕಾರ ರಚನೆ ಮಾಡಿದ್ದೆವು. ನಾವು ಮಹಿಳೆಯೊಬ್ಬರನ್ನು ಆಕೆ ತನ್ನ ಆಹಾರಕ್ಕಾಗಿ ಶರೀರ ಮಾರಾಟ ಮಾಡಿದರೆ ಬೇರೆ ಬೇರೆ ಹೆಸರುಗಳಿಂದ ಆಕೆಯನ್ನು ಗುರುತಿಸುತ್ತೇವೆ. ವೇಶ್ಯೆ ಎಂದೂ ಹೇಳುತ್ತೇವೆ. ಶಾಸಕರು ತಮ್ಮನ್ನು ತಾವು ಮಾರಿಕೊಂಡವರನ್ನು ಏನೆಂದು ಕರೆಯಬೇಕು? ಅದನ್ನು ನಾವು ನಿಮಗೇ ಬಿಟ್ಟುಬಿಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಸ್ಥಳೀಯ ಶಾಸಕರಿಗೆ ಒಂದು ಪಾಠ ಕಲಿಸಿʼʼ ಎಂದು ಹೇಳಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BJPಯಿಂದ ಭಯದ ದೇಶದಲ್ಲಿ ವಾತಾವರಣ ಸೃಷ್ಟಿ.

Wed Jan 18 , 2023
ಶಿಮ್ಲಾ,ಜ.18- ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರ ಹಿಡಿರುವ ಹಿಮಾಚಲ ಪ್ರದೇಶಕ್ಕೆ ರಾಹುಲ್‍ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದೆ. ನಿನ್ನೆಯವರೆಗೂ ಪಂಜಾಬ್‍ನಲ್ಲಿ ಸಂಚರಿಸಿದ್ದ ಯಾತ್ರೆ ನಾಳೆ ಕಾಶ್ಮೀರ ಪ್ರವೇಶಿಸುವ ಮಾರ್ಗಸೂಚಿ ನಿಗದಿಯಾಗಿತ್ತು. ಹಿಮಾಚಲ ಪ್ರದೇಶ ಪಾದಯಾತ್ರೆಯ ನಕ್ಷೆಯಲ್ಲಿ ಇರಲಿಲ್ಲ. ಆದರೆ ಸ್ಥಳೀಯ ನಾಯಕರ ಒತ್ತಾಯದ ಮೇರೆಗೆ ರಾಹುಲ್‍ಗಾಂಧಿ ಮಾರ್ಗ ಬದಲಾವಣೆ ಮಾಡಿದ್ದಾರೆ. ಇಂದು ಬೆಳಗ್ಗೆ ಹಿಮಾಚಲಪ್ರದೇಶದ ಇಂದೋರಾ ವಿಧಾನಸಭಾ ಕ್ಷೇತ್ರದಲ್ಲಿ 24 ಕಿಲೋಮೀಟರ್ ದೂರ […]

Advertisement

Wordpress Social Share Plugin powered by Ultimatelysocial