ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಹೈ ಅಲರ್ಟ್ ಆಗಿದೆ. ಮತಗಳ ವಿಭಜನೆಯಾಗುವ ಆತಂಕದಿಂದ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಚುನಾವಣಾ ವರ್ಷದಲ್ಲಿ ಒಂದಷ್ಟು ಮತಗಳು ಬಿಜೆಪಿ ಕಡೆ ವಾಲಬಹುದೆಂಬ ಭೀತಿ ಕಾಂಗ್ರೆಸ್ನಲ್ಲಿ ಶುರುವಾಗಿದೆ.
ಅಂಬರೀಶ್ ಅಭಿಮಾನಿಗಳು ಸುಮಲತಾರನ್ನ ಅನುಸರಿಸಬಹುದೆಂಬ ಭಯ ಕೂಡಾ ಉಂಟಾಗಿದೆ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ತಂತ್ರಗಾರಿಕೆ ಬದಲಿಸಲು ಚಿಂತನೆ ನಡೆಸಿದೆ. ಜೆಡಿಎಸ್ ಭದ್ರಕೋಟೆಯಾಗಿರೋ ಮಂಡ್ಯದಲ್ಲಿ 3 ರಿಂದ 4 ಕ್ಷೇತ್ರಗಳಲ್ಲಿ ಗೆಲ್ಲಲು ರಣತಂತ್ರ ಹೆಣೆಯುತ್ತಿದೆ. ಸದ್ಯಕ್ಕಿರೋ ಸ್ಟ್ರಾಟಜಿಯನ್ನ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್ಗೆ ಎದುರಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada