ಬಹುತೇಕರು ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಬೇಕು!

ಬಹುತೇಕರ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಬೇಕು ಅನ್ನೊ ಧಾವಂತದಲ್ಲಿ ಹಲವಾರು ಸೌಂದರ್ಯವರ್ಧಕಗಳ ಮೊರೆ ಹೋಗುತ್ತಾರೆ. ಆದರೆ ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಸಾಕಷ್ಟು ಪದಾರ್ಥಗಳನ್ನು ಬಳಸಿಕೊಂಡು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಹೆಚ್ಚೇನೂ ವೆಚ್ಚವಾಗುವುದಿಲ್ಲ.ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುವ ಮೊಸರನ್ನು ಮುಖಕ್ಕೆ ಲೇಪಿಸಿ ಮೃದುವಾದ ತ್ವಚೆಯನ್ನು ಪಡೆದುಕೊಳ್ಳಬಹುದು. ಇದು ನಮ್ಮ ಚರ್ಮಕ್ಕೆ ಅಗತ್ಯವಾದ ಲ್ಯಾಕ್ಟಿಕ್ ಆಯಸಿಡ್ ನ್ನು ಹೊಂದಿದ್ದು, ತ್ವಚೆಗೆ ಬೇಕಾದ ಪೋಷಕಾಂಶ ಮತ್ತು ತೇವಾಂಶವನ್ನು ಒದಗಿಸುವಂತಹ ಜೀವಸತ್ವಗಳನ್ನು ನೀಡುತ್ತದೆ.ಗಟ್ಟಿಯಾದ ಮೊಸರನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ, ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆಯಲ್ಲಿನ ಡೆಡ್ ಸ್ಕಿನ್ ಗಳನ್ನು ಹೋಗಲಾಡಿಸುವಲ್ಲಿ ಸಹಾಯ ಮಾಡುತ್ತದೆ. ಇದರ ಜೊತೆಗೆ ಡ್ರೈ ಸ್ಕಿನ್ ಇರುವವರಿಗೆ ತೇವಾಂಶವನ್ನು ಹೆಚ್ಚಿಸಿ, ರಂಧ್ರಗಳನ್ನು ಬಿಗಿತಗೊಳಿಸುತ್ತದೆ. ಹೀಗೆ ಮಾಡುವುದರಿಂದ ಕಲೆಮುಕ್ತ ತ್ವಚೆಯ ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದಾದ ನೈಸರ್ಗಿಕ ವಿಧಾನವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನಾರ್ದನ ರೆಡ್ಡಿ ರಾಜಕೀಯ ರೀ ಎಂಟ್ರಿಗೆ ಭರ್ಜರಿ ತಯಾರಿ.!

Sat Feb 5 , 2022
ಒಂದು ಕಾಲದಲ್ಲಿ ರಾಜ್ಯ ರಾಜಕೀಯದಲ್ಲಿ ಜನಾರ್ಧನ ರೆಡ್ಡಿ ಅವರದ್ದು ದೊಡ್ಡ ಹೆಸರು. ಮುಖ್ಯಮಂತ್ರಿಯನ್ನೇ ಬದಲಿಸಬಹುದಾದಷ್ಟು ಶಕ್ತಿಯನ್ನು ಜನಾರ್ಧನ ರೆಡ್ಡಿ ಹೊಂದಿದ್ದರು. ಆದರೆ ಯಾವಾಗ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಜೈಲಿಗೆ ಹೋದರೋ ಅವರ ರಾಜಕೀಯ ಪ್ರಾಬಲ್ಯವೂ ತೀವ್ರವಾಗಿ ಕುಸಿಯಿತು.ಅದರಲ್ಲೂ ಜನಾರ್ದನ ರೆಡ್ಡಿ ಅವರ ರಾಜಕೀಯ ಶಕ್ತಿ ಕೇಂದ್ರ ಬಳ್ಳಾರಿಗೆ ಕಾಲಿಡದಂತೆ ನ್ಯಾಯಾಲಯ ನಿರ್ಬಂಧ ಹೇರಿದ್ದ ಕಾರಣ ಪ್ರಾಬಲ್ಯ ಸಂಪೂರ್ಣವಾಗಿ ಕುಸಿಯುವಂತೆ ಮಾಡಿತು. ಇದೀಗ ಜನಾರ್ಧನ ರೆಡ್ಡಿ ಅವರು ಒಂದೊಂದೇ […]

Advertisement

Wordpress Social Share Plugin powered by Ultimatelysocial