ಜನಾರ್ದನ ರೆಡ್ಡಿ ರಾಜಕೀಯ ರೀ ಎಂಟ್ರಿಗೆ ಭರ್ಜರಿ ತಯಾರಿ.!

ಒಂದು ಕಾಲದಲ್ಲಿ ರಾಜ್ಯ ರಾಜಕೀಯದಲ್ಲಿ ಜನಾರ್ಧನ ರೆಡ್ಡಿ ಅವರದ್ದು ದೊಡ್ಡ ಹೆಸರು. ಮುಖ್ಯಮಂತ್ರಿಯನ್ನೇ ಬದಲಿಸಬಹುದಾದಷ್ಟು ಶಕ್ತಿಯನ್ನು ಜನಾರ್ಧನ ರೆಡ್ಡಿ ಹೊಂದಿದ್ದರು. ಆದರೆ ಯಾವಾಗ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಜೈಲಿಗೆ ಹೋದರೋ ಅವರ ರಾಜಕೀಯ ಪ್ರಾಬಲ್ಯವೂ ತೀವ್ರವಾಗಿ ಕುಸಿಯಿತು.ಅದರಲ್ಲೂ ಜನಾರ್ದನ ರೆಡ್ಡಿ ಅವರ ರಾಜಕೀಯ ಶಕ್ತಿ ಕೇಂದ್ರ ಬಳ್ಳಾರಿಗೆ ಕಾಲಿಡದಂತೆ ನ್ಯಾಯಾಲಯ ನಿರ್ಬಂಧ ಹೇರಿದ್ದ ಕಾರಣ ಪ್ರಾಬಲ್ಯ ಸಂಪೂರ್ಣವಾಗಿ ಕುಸಿಯುವಂತೆ ಮಾಡಿತು. ಇದೀಗ ಜನಾರ್ಧನ ರೆಡ್ಡಿ ಅವರು ಒಂದೊಂದೇ ಸಿಕ್ಕುಗಳನ್ನು ಬಿಡಿಸಿಕೊಂಡು ಹೊರಬರುತ್ತಿದ್ದಾರೆ. ಹೀಗಾಗಿ ಅವರ ರಾಜಕೀಯ ಮರು ಪ್ರವೇಶಕ್ಕೆ ಸಿದ್ಧತೆಗಳೂ ಸಹ ನಡೆಯುತ್ತಿವೆ.ಜನಾರ್ಧನ ರೆಡ್ಡಿ ಅವರ ಆಪ್ತ ಸ್ನೇಹಿತ ಶ್ರೀರಾಮುಲು, ನವದೆಹಲಿಗೆ ತೆರಳಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಜನಾರ್ಧನ ರೆಡ್ಡಿ ಅವರನ್ನು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಸಚಿವ ಆನಂದ್ ಸಿಂಗ್ ಮತ್ತೆ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಲು ಜನಾರ್ಧನ ರೆಡ್ಡಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವುದು ಸೂಕ್ತ ಎಂದು ಶ್ರೀರಾಮುಲು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನವೇ ಜನಾರ್ಧನ ರೆಡ್ಡಿ ಅವರ ರಾಜಕೀಯ ರೀ ಎಂಟ್ರಿ ಅದ್ದೂರಿಯಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ v/s ಕೇಸರಿ ಶಾಲು : ಅಂತಿಮ ನಿರ್ಣಯ ಘೋಷಿಸಿದ ಸರ್ಕಾರ

Sat Feb 5 , 2022
ಬೆಂಗಳೂರು: ಕಳೆದೆರಡು ತಿಂಗಳಿಂದ ರಾಜ್ಯದಲ್ಲಿ ಹಿಜಾಬ್ ಗದ್ದಲ ಶುರುವಾಗಿದೆ. ಉಡುಪಿಯ ಕಾಲೇಜೊಂದರಲ್ಲಿ ಶುರುವಾದ ಈ ಸಮವಸ್ತ್ರದ ಕಿರಿಕ್ ಸದ್ಯ ರಾಜ್ಯ ವ್ಯಾಪಿಸಿದ್ದುವ ಭಾರಿ ಚರ್ಚೆಗೆ ಕಾರಣವಾಗಿತ್ತು.ಇತ್ತಿಚೆಗೆ ಹಿಜಾಬ್ ಧಾರಿಗಳಿಗೆ ಕಾಲೇಜಿನಲ್ಲಿ ಅವಕಾಶ ನೀಡುವುದಾದರೆ ನಾವು ಕೇಸರಿ ಶಾಲು ಹಾಕಿರುತ್ತೇವೆ ಎಂದು ವಿದ್ಯಾರ್ಥಿ ವಿದ್ಯಾರ್ತಿಗಳ ಮಧ್ಯೆಯೇ ವೈಮನಸ್ಸು ಬೆಳೆದಿತ್ತು.ಸದ್ಯ ಈ ಎಲ್ಲ ಗದ್ದಲ ಗಲಾಟೆಗೆ ಫುಲ್ ಸ್ಟಾಫ್ ಇಟ್ಟ ರಾಜ್ಯ ಸರ್ಕಾರ ಕರ್ನಾಟಕದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿಯೂ ಸಮವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ […]

Advertisement

Wordpress Social Share Plugin powered by Ultimatelysocial