ಸಿಲಿಂಡರ್ ಸ್ಪೋಟಗೊಂಡು ಅವಘಡ ಸಂಭವಿಸಿ 24-25 ಜನ ಗಾಯಗೊಂಡಿದ್ದರು!

 

ಶಹಾಪುರ: ಕಳೆದ ಫೆ.25 ರಂದು ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನಲ್ಲಿ ಸೀಮಂತ ಕಾರ್ಯಕ್ರಮವೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು ಅವಘಡ ಸಂಭವಿಸಿ 24-25 ಜನ ಗಾಯಗೊಂಡಿದ್ದರು, ಈಗಾಗಲೇ 14 ಜನ ಗಾಯಾಳುಗಳು ಅಸುನೀಗಿದ್ದಾರೆ.ರವಿವಾರ ಮತ್ತೋರ್ವ ಗಾಯಾಳು ಚಂದ್ರಶೇಖರ ಕಲ್ಲಪ್ಪ ಮಲಗೊಂಡ (45) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ.ಈ ದುರ್ಘಟನೆಯಿಂದ ಇಡಿ ದೋರನಹಳ್ಳಿ ಗ್ರಾಮ ದುಖಃದ ಮಡುವಿನಿಂದ 10 ದಿನ ಕಳೆದರೂ ಹೊರ ಬರಲಾಗುತ್ತಿಲ್ಲ. ಗಾಯಾಳುಗಳಲ್ಲಿ ನಿತ್ಯ ಒಬ್ಬರು, ಇಬ್ಬರು ಅಸುನೀಗುತ್ತಿದ್ದಾರೆ. ಅಲ್ಲದೆ ಸೀಮಂತ ಕಾರ್ಯಕ್ರಮಕ್ಕಾಗಿ ಸಮುದಾಯ ಅದೇ ಕುಟುಂಬದ ಸಂಬಂಧಿಕರೇ ಭಾಗವಹಿಸಿದ್ದು, ಒಂದೇ ಸಮುದಾಯದ ರಕ್ತ ಸಂಬಂಧಿಕರೇ ಸಾವನ್ನಪ್ಪುತ್ತಿದ್ದು ನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ಕುಟುಂಬದ ಸ್ಥಿತಿ ದೇವರಿಗೆ ಪ್ರೀತಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವಾಲಯದ 'ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯ ಆರ್ಥಿಕತೆ'

Mon Mar 7 , 2022
ದೆಹಲಿ: ಪ್ರಧಾನಿ ನರೇಂದ್ರ ಮೋದಿ( Prime Minister Narendra Modi )ಅವರು ಮಾರ್ಚ್ 8 ರಂದು(ನಾಳೆ) ಹಣಕಾಸು ಸಚಿವಾಲಯದ ‘ಬೆಳವಣಿಗೆ ಮತ್ತು ಮಹತ್ವಾಕಾಂಕ್ಷೆಯ ಆರ್ಥಿಕತೆ’ ಶೀರ್ಷಿಕೆಯ ವೆಬ್‌ನಾರ್‌ನ ಉದ್ಘಾಟನಾ ಅಧಿವೇಶನದಲ್ಲಿ ವಿಶೇಷ ಭಾಷಣ ಮಾಡಲಿದ್ದಾರೆ.ಬಜೆಟ್ ಘೋಷಣೆಗಳ ಸಮರ್ಥ ಮತ್ತು ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗುವಂತೆ, ಭಾರತ ಸರ್ಕಾರವು ವಿವಿಧ ಪ್ರಮುಖ ವಲಯಗಳಲ್ಲಿ ವೆಬ್‌ನಾರ್‌ಗಳ ಸರಣಿಯನ್ನು ನಡೆಸುತ್ತಿದೆ.ಸಾರ್ವಜನಿಕ ಮತ್ತು ಖಾಸಗಿ ವಲಯಗಳು, ಶೈಕ್ಷಣಿಕ ಮತ್ತು ಉದ್ಯಮದ ತಜ್ಞರೊಂದಿಗೆ ಬುದ್ದಿಮತ್ತೆ ಮಾಡುವುದು ಮತ್ತು ವಿವಿಧ […]

Advertisement

Wordpress Social Share Plugin powered by Ultimatelysocial