ಕಬ್ಬನ್ ಪಾರ್ಕ್ ಪೊಲೀಸರಿಂದ ಸೈಯಾದ್ ಜಿಮ್ರಾನ್ ಎಂಬಾತನ ಬಂಧನ.
ಬಂಧಿತನಿಂದ 10 ಕೋಟಿ ಮೌಲ್ಯದ 9 ಹೈ ಎಂಡ್ ಕಾರಗಳು ವಶಕ್ಕೆ.
ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಆರೋಪಿ ಬಂಧನ
ಉದ್ಯಮಿಗಳನ್ನ ಪರಿಚಯ ಮಾಡಿಕೊಂಡು ಹೈ ಎಂಡ್ ಕಾರುಗಳನ್ನು ಪಡೆಯುತ್ತಿದ್ದ ಆರೋಪಿ.
ಕಾರುಗಳನ್ನ ಒಳ್ಳೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳುತ್ತಿದ್ದ ಆರೋಪಿ.
ಉದ್ಯಮಿಗಳು, ವ್ಯಾಪಾರಸ್ಥರ ಬಳಿ ಕಾರುಗಳನ್ನು ಪಡೆದು ವಂಚನೆ.
ಆಡಿ, ಬೆನ್ಜ್, ಮಹೀಂದ್ರ ಥಾರ್, ರೇಂಜ್ ರೋವರ್, ಇನೋವಾ ಸೇರಿ ದುಬಾರಿ ಬೆಲೆಯ ಕಾರುಗಳನ್ನ ಪಡೆದು ವಂಚನೆ.
ಉದ್ಯಮಿ ರಾಜು ಎಂಬಾತಾನ ರೇಂಜ್ ರೋವರ್ 18 ಲಕ್ಷಕ್ಕೆ ಖರೀದಿ.
ನಂತರ ಉಳಿದ ಹಣ ನೀಡದೆ ಸತಾಯಿಸುತ್ತಿದ್ದ ಆರೋಪಿ.
ಹಣ ನೀಡುವಂತೆ ಕೇಳಿದಕ್ಕೆ ಜೀವ ಬೆದರಿಕೆ ಹಾಕಿದ್ದ.
ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಉದ್ಯಮಿ ರಾಜು ದೂರು.
ಕಬ್ಬನ್ ಪಾರ್ಕ್ ಪೊಲೀಸರಿಂದ ಸೈಯ್ಯದ್ ಜಿಬ್ರಾನ್ ಬಂಧನ.
ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ನಗರದಲ್ಲಿ ವ್ಯವಸ್ಥಿತವಾಗಿ ಈ ತರ ಜಾಲದ ಬಗ್ಗೆ ಮಾಹಿತಿ ಬಂದಿತ್ತು.
ಕೆಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಚಾರಣೆ ನಡೆಸಿದ್ದಾರೆ.
ತುರ್ತು ಹಣ ಬೇಕಾದವರನ್ನ ಟಾರ್ಗೇಟ್ ಮಾಡಿ ವಂಚನೆ ಮಾಡಿದ್ದರು
ಇನಷ್ಟು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಬಂಧನ ಮಾಡಲಾಗುವುದು
ಹೊಟೇಲ್ ಗಳಲ್ಲಿ ಅವಧಿ ಮೀರಿ ಮತ್ತು ಸಿಸಿಟಿವಿ ಸರಿಯಾಗಿ ಅಳವಡಿಕೆ ಮಾಡದ ವಿಚಾರ
ಈಗಾಗಲೇ ಪಶ್ಚಿಮ ವಲಯದಲ್ಲಿ ಹೊಟೇಲ್, ಪಬ್ ಗಳ ವಿರುದ್ದ 27 ಪ್ರಕರಣಗಳು ದಾಖಲಾಗಿದ್ದೆ.
ಪೂರ್ವ ವಲಯದಲ್ಲಿ ಈಗಾಗಲೇ ಕಾರ್ಯಚಾರಣೆ ಶುರು ಮಾಡಲಾಗಿದ್ದೆ.
24 ಗಂಟೆಗಳ ಕಾಲ ಪೊಲೀಸರು ಹೊಟೇಲ್ ಗಳಿಗೆ ಭದ್ರತೆ ನೀಡುವುದುಕ್ಕೆ ಅಗುವುದಿಲ್ಲ
ಸಿಸಿಟಿವಿ ಇದ್ರೆ ನಾವು ಯಾರನ್ನ ಬೇಕಾದ್ರು ಬಂಧನ ಮಾಡಬಹುದು
ಅನಾಹುತ ಸಂಭವಿಸಿದಾಗ ಸಿಸಿಟಿವಿ ಬಹಳ ಮುಖ್ಯವಾಗುತ್ತದೆ.
ಈ ಹಿನ್ನಲೆ ನಾನು ನಮ್ಮ ಪೊಲೀಸರಿಗೆ ಪರಿಶೀಲನೆ ನಡೆಸಲು ಸೂಚಿಸಿದ್ದೆ
ಸಿಸಿಟಿವಿ ಸರಿಯಾದ ರೀತಿ ಅಳವಡಿಕೆ ಮಾಡದ ಹೊಟೇಲ್ ಗಳ ವಿರುದ್ದ FIR ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…