ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಫೋನ್ ಮಾಡಿ ಕೇಳಿದ್ದಾರೆ.

 

ಬೆಂಗಳೂರು: ಸಚಿವ ಈಶ್ವರಪ್ಪ ಅವರನ್ನು ಬೈಕ್ ರ್ಯಾಲಿ ಮೂಲಕ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಏಕಿಲ್ಲ? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಫೋನ್ ಮಾಡಿ ಕೇಳಿದ್ದಾರೆ.ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ರಾಷ್ಟ್ರಧ್ವಜದ ಕುರಿತಾಗಿ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸುಮಾರು 15 ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಶಿವಮೊಗ್ಗದಲ್ಲಿ ಸೆಕ್ಷನ್ 144 ಅನ್ವಯ ಜಾರಿಯಲ್ಲಿದ್ದ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಎಸ್ಪಿ ಲಕ್ಷ್ಮಿ ಪ್ರಸಾದ್​ಗೆ ವಿಧಾನಸೌಧದಿಂದ ಕರೆ ಮಾಡಿದ ಡಿ.ಕೆ.ಶಿವಕುಮಾರ್ ಕೇವಲ ಕಾಂಗ್ರೆಸ್ ಕಾರ್ಯಕರ್ತರು ವಿರುದ್ಧ ಮಾತ್ರ ಎಫ್‌ಐಆರ್ ಏಕೆ? ಬಿಜೆಪಿ ಕಾರ್ಯಕರ್ತರ ವಿರುದ್ಧ ಏಕಿಲ್ಲ? ಎಂದು ಪ್ರಶ್ನಿಸಿದರು.ನಿನ್ನೆ ನಮ್ಮ 15 ಜನ ಹುಡುಗರ ಮೇಲೆ ಎಫ್‌ಐಆರ್ ಹಾಕಿದ್ದೀರಂತೆ. ಬಿಜೆಪಿ ಹುಡುಗರು ಕೂಡ ಈಶ್ವರಪ್ಪ ಅವರನ್ನು ಸ್ವಾಗತ ಮಾಡಿದ್ದಾರೆ. ಅವರ ಮೇಲೆ ಆಗಿಲ್ವಾ ಎಫ್‌ಐಆರ್? ಮಾಡುವುದಾದರೆ ಎರಡು ಕಡೆಯೂ ಆಗಬೇಕಲ್ವಾ? ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಸ್ ಪಿ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರಂತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

33ರ ಮಹಿಳೆಯ ಕೊಲೆ ಕೇಸ್​ಗೆ ಚಪ್ಪಲಿಯ ಸುಳಿವು. ಪಕ್ಕದ್ಮನೆಯಲ್ಲೇ ಇದ್ದ 25ರ ಯುವಕನ ಭಯಾನಕ ಕತೆಯಿಲ್ಲಿದೆ....

Sat Feb 19 , 2022
ಮುಂಬೈ: ಬಲವಂತದ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದಕ್ಕೆ 33 ವರ್ಷದ ಮಹಿಳೆಯನ್ನು ಕೊಂದು ಆಕೆಯ ಮನೆಯ ಸೋಫಾ ಕಮ್​ ಬೆಡ್​ನಲ್ಲಿ ತುಂಬಿಟ್ಟಿದ್ದ 25 ವರ್ಷದ ಯುವಕನನ್ನು ಮಹಾರಾಷ್ಟ್ರದ ದೊಂಬಿವಾಲಿಯಲ್ಲಿರುವ ಮಾಂಪಡ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ವಿಶಾಲ್​ ಘಾವತ್​ ಮತ್ತು ಕೊಲೆಯಾದ ಮಹಿಳೆಯನ್ನು ಸುಪ್ರಿಯಾ ಕಿಶೋರ್​ ಶಿಂಧೆ ಎಂದು ಗುರುತಿಸಲಾಗಿದೆ. ಫೆ. 15ರಂದು ದೊಂಬಿವಾಲಿಯ ಡೇವಿಡ್​ಗೌನ್​ ಏರಿಯಾದಲ್ಲಿರುವ ನಿವಾಸದಲ್ಲಿ ಸುಪ್ರಿಯಾ ಕೊಲೆಯಾಗಿತ್ತು. ಸೋಫಾ ಕಮ್​ ಬೆಡ್​ನಲ್ಲಿ ತುಂಬಿಡಲಾಗಿದ್ದ ಆಕೆಯ ಮೃತದೇಹವನ್ನು ಪತಿ […]

Advertisement

Wordpress Social Share Plugin powered by Ultimatelysocial