ಡಿಕೆಶಿ ಅಣ್ಣಾ, ನೀವೇನ್​ ಯೋಚ್ನೆ ಮಾಡ್ಬೇಡಿ ನಿಮ್ಮ ಪಾದಯಾತ್ರೆ ವ್ಯರ್ಥ ಆಗೋಕ್ಕೆ ಬಿಡಲ್ಲ.

ಬೆಂಗಳೂರು: ಯಡಿಯೂರಪ್ಪ ಲಾಸ್ಟ್​ ಬೆಂಚ್​ನಲ್ಲಿದ್ರೂ ಹುಲಿನೇ, ಮುಂದಿನ ಬೆಂಚ್​ನಲ್ಲಿದ್ರು ಹುಲೀನೇ. 2008, 2018 ರಲ್ಲಿ ಯಡಿಯೂರಪ್ಪ ಅವರಿಂದಾಗಿಯೇ ಅಧಿಕಾರ ಹಿಡಿದ್ವಿ. ಮುಂದೆಯೂ ಯಡಿಯೂರಪ್ಪ ನೇತೃತ್ವದಲ್ಲೇ ಅಧಿಕಾರಕ್ಕೆ ಬರ್ತೀವಿ… ಡಿಕೆಶಿ ಅಣ್ಣ ಯೋಚನೆ ಮಾಡ್ಬೇಡಿ, ನಿಮ್ಮ ಪಾದಯಾತ್ರೆ ವ್ಯರ್ಥ ಆಗೋಕ್ಕೆ ಬಿಡಲ್ಲ…

 

ಹೀಗಂತ ಹೇಳಿದ್ದು ಬಿಜೆಪಿಯ ರಾಜೂಗೌಡ.

ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್​ ಮೇಲಿನ ಚರ್ಚೆ ವೇಳೆ ಮಾತನಾಡಿದ ರಾಜೂಗೌಡ, ಯಡಿಯೂರಪ್ಪ ನಮ್ಮ ಗುರುಗಳು. ಅವರ ಹೆಸರ ಮೇಲೆ ನಾವು ಅಧಿಕಾರಕ್ಕೆ ಬಂದಿರೋದು. ಡಿಕೆಶಿ ಅಣ್ಣ ನಿಮ್ಮ ಪಾದಯಾತ್ರೆ ವ್ಯರ್ಥ ಆಗೋಕ್ಕೆ ಬಿಡಲ್ಲ. ಈ ಬಜೆಟ್​ನಲ್ಲಿ 1 ಸಾವಿರ ಕೋಟಿ ಕೊಟ್ಟಿದ್ದೀವಿ. ಮುಂದೆ ನಾವೇ ಮತ್ತೆ ಅಧಿಕಾರಕ್ಕೆ ಬರ್ತೀವಿ. ಯಡಿಯೂರಪ್ಪರ ಆರ್ಶೀವಾದದಿಂದ ನಾನೇ ನೀರಾವರಿ ಮಂತ್ರಿ ಆಗಿ ನಿಮ್ಮ ಎಲ್ಲ ಕೆಲಸ ಮಾಡಿಕೊಡ್ತೀನಿ. ಬೆಂಗಳೂರಿಂದ ಉಲ್ಟಾ ಪಾದಯಾತ್ರೆ ಮಾಡಿ ಜನರಿಗೆ ಸರ್ಕಾರ ಅನುದಾನ ಇಟ್ಟಿರೋದನ್ನು ತಿಳಿಸಿ ಅಣ್ಣಾ. ನೀವು ಗೋವಾಕ್ಕೆ ಫ್ಲೈಟ್​ ಹತ್ತಿದಾಗ 18 ಸೀಟ್​ ತೋರಿಸ್ತಿತ್ತು. ಅಲ್ಲಿ ಇಳಿತ್ತಿದ್ದಂಗೆ 12 ಸೀಟಿಗೆ ಬಂತು ಎಂದು ತಮ್ಮದೇ ಶೈಲಿಯಲ್ಲಿ ಕಾಲೆಳೆದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೇಮ್ಸ್ ಟೈಟಲ್ ನನ್ನದಾಗಿತ್ತು: ಡಾರ್ಲಿಂಗ್ ಕೃಷ್ಣ

Wed Mar 16 , 2022
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು, ಈ ಟೈಟಲ್ ಹಿಂದಿನ ಕತೆಯನ್ನು ನಟ ಡಾರ್ಲಿಂಗ್ ಕೃಷ್ಣ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಜೇಮ್ಸ್ ಎಂಬ ಟೈಟಲ್ ಮೊದಲು ನನ್ನದಾಗಿತ್ತು. ನಾನು ನನ್ನ ನಿರ್ಮಾಣ ಸಂಸ್ಥೆಯಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದೆ ಎಂಬ ಕುತೂಹಲಕಾರೀ ವಿಚಾರವನ್ನು ಕೃಷ್ಣ ಬಹಿರಂಗಪಡಿಸಿದ್ದಾರೆ. ‘ಈ ಸಿನಿಮಾ ಟೈಟಲ್ ನಾನು ಮತ್ತು ಚೇತನ್ (ಜೇಮ್ಸ್ ನಿರ್ದೇಶಕ) ರಿಜಿಸ್ಟರ್ ಮಾಡಿಕೊಂಡು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆವು. ಆದರೆ […]

Advertisement

Wordpress Social Share Plugin powered by Ultimatelysocial