ದರ್ಶನ್ vs ಪುನೀತ್ ಫ್ಯಾನ್ ವಾರ್!

ಚಂದನವನದಲ್ಲಿ ಫ್ಯಾನ್ ವಾರ್ ಎಂಬುದು ಈ ಹಿಂದಿನಿಂದಲೂ ಸಹ ಇರುವ ಕೆಟ್ಟ ಹವ್ಯಾಸ. ತಮ್ಮ ನೆಚ್ಚಿನ ನಟನಿಗೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆಯವ ಅಭಿಮಾನಿಗಳು ತಮ್ಮ ನಟನಿಗೆ ಬೆಂಬಲ ಸೂಚಿಸುವುದು ಮಾತ್ರವಲ್ಲದೇ ಅದೇ ನಕಲಿ ಖಾತೆಗಳನ್ನು ಉಪಯೋಗಿಸಿಕೊಂಡು ಇತರೆ ನಟರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಹೀಯಾಳಿಸುವ ಕೆಟ್ಟ ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ.ಒಬ್ಬರನ್ನು ನೋಡಿ ಮತ್ತೊಬ್ಬರೂ ಸಹ ಈ ಕೆಟ್ಟ ಮಾರ್ಗವನ್ನು ಅನುಸರಿಸುತ್ತಿದ್ದು ಫ್ಯಾನ್ ವಾರ್ ಅತಿರೇಕ ತಲುಪಿದೆ. ಇನ್ನು ಈ ಫ್ಯಾನ್ ವಾರ್ ಕೇವಲ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾಗಿರದೇ ಹೊರಗೂ ಕೂಡ ಪಸರಿಸಿದೆ. ಬೇರೆ ನಟರ ಕಾರ್ಯಕ್ರಮಗಳಿಗೆ ಹೋಗಿ ತಮ್ಮ ನಟನಿಗೆ ಜೈಕಾರ ಕೂಗುವುದು, ಬೇರೆ ನಟರ ಚಿತ್ರಗಳ ಚಿತ್ರೀಕರಣದ ಸ್ಥಳಗಳಿಗೆ ಹೋಗಿ ಅಲ್ಲಿಯೂ ತಮ್ಮ ನಟನಿಗೆ ಜೈಕಾರ ಕೂಗುವ ಮೂಲಕ ಕ್ರೇಜ್ ತೋರಿಸಲು ಹೋಗಿ ಇತರೆ ನಟರ ಫ್ಯಾನ್ಸ್ ಕೆರಳಿದಂತಹ ಘಟನೆಗಳು ಈ ಹಿಂದೆ ನಡೆದಿವೆ.ಅದೇ ರೀತಿ ಸದ್ಯ ಹೊಸಪೇಟೆ ವಿಷಯವಾಗಿ ಫ್ಯಾನ್ ವಾರ್ ತಾರಕ್ಕೇರಿದ್ದು, ಭಾರೀ ಚರ್ಚಾಸ್ಪದ ವಿಷಯವಾಗಿದೆ. ನಟ ದರ್ಶನ್ ನಟನೆಯ ಕ್ರಾಂತಿ ಚಿತ್ರದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಹೊಸಪೇಟೆಗೆ ಬರುತ್ತೇವೆಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಲು ಆರಂಭಿಸಿದ ದರ್ಶನ್ ಅಭಿಮಾನಿಗಳು ಈ ಹಿಂದೆ ದರ್ಶನ್ ಅಪ್ಪು ಕುರಿತಾಗಿ ನೀಡಿದ್ದ ಹೇಳಿಕೆಯಿಂದ ಕೋಪಕ್ಕೀಡಾಗಿ ಕ್ರಾಂತಿ ಚಿತ್ರವನ್ನು ಹೊಸಪೇಟೆಯಲ್ಲಿ ಬ್ಯಾನ್ ಮಾಡುತ್ತೇವೆ ಎಂದಿದ್ದ ಅಪ್ಪು ಅಭಿಮಾನಿಗಳನ್ನು ಕಿಚಾಯಿಸಲು ಆರಂಭಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

 

 

 

Please follow and like us:

Leave a Reply

Your email address will not be published. Required fields are marked *

Next Post

ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಯಾಣಿಸುತ್ತಿದ್ದ ಕಾರು ಅಪಘಾತ!

Tue Dec 27 , 2022
ಪ್ರಧಾನಿ ಮೋದಿ ಸಹೋದರ ಪ್ರಹ್ಹಾದ್‌ ಮೋದಿ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತವಾಗಿದ್ದು, ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ ಎನ್ನಲಾಗಿದೆ. ಪ್ರಹ್ಹಾದ್‌ ಮೋದಿ ಅವರು ತಮ್ಮ ಪುತ್ರ ಹಾಗೂ ಸೊಸೆ ಜೊತೆಗೆ ಮರ್ಸಿಸೀಸ್‌ ಬೆಂಚ್‌ ಕಾರಿನಲ್ಲಿ ಮೈಸೂರಿನಿಂದ ಬಂಡೀಪುರ ಕಡೆಗೆ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.ಈ ವೇಳೆ ಮೈಸೂರು ಬಳಿಯ ಕಡಕೋಳ ಬಳಿ ಕಾರು ಅಪಘಾತವಾಗಿದ್ದು, ಘಟನೆಯಲ್ಲಿ ಪ್ರಹ್ಹಾದ್‌ ಮೋದಿ ಅವರ ಮಗ ಹಾಗೂ ಸೊಸೆಗೆ ಗಂಭಿರವಾದ ಗಾಯವಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ […]

Advertisement

Wordpress Social Share Plugin powered by Ultimatelysocial