ಹೆಬ್ರಿ: ವಾಲಿಬಾಲ್ ಆಟಗಾರ ಆತ್ಮಹತ್ಯೆ !

 

ಹೆಬ್ರಿ, ಫೆ.1: ಪ್ರತಿಭಾವಂತ ವಾಲಿಬಾಲ್ ಆಟಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಹೆಬ್ರಿ ಕೆಳಪೇಟೆ ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.ಮೃತರನ್ನು ಕೆಳಪೇಟೆಯ ನಿವಾಸಿ ಪ್ರಶಾಂತ್ ಯಾನೆ ಪಚ್ಚು (30) ಎಂದು ಗುರುತಿಸಲಾಗಿದೆ.ವಾದ್ಯ ನುಡಿಸುವ ಕೆಲಸ ಮಾಡುತ್ತಿದ್ದ ಇವರು, ಉತ್ತಮ ವಾಲಿಬಾಲ್ ಆಟಗಾರ ಆಗಿ, ಹೆಬ್ರಿ ಎಪಿಟಿ ಹಾಗೂ ಎರ್ಲಪಾಡಿ ವಾಲಿಬಾಲ್ ತಂಡದಲ್ಲಿ ಆಡುತ್ತಿದ್ದರು.ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಾನಸಿಕವಾಗಿ ನೊಂದು ಚಿಕ್ಕಪ್ಪನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BOLLYWOOD:ಸಂಬಂಧಗಳಲ್ಲಿ ದಾಂಪತ್ಯ ದ್ರೋಹದ ಬಗ್ಗೆ ದೀಪಿಕಾ ಪಡುಕೋಣೆ;

Tue Feb 1 , 2022
ದೀಪಿಕಾ ಪಡುಕೋಣೆ ಪ್ರಸ್ತುತ ತನ್ನ ಮುಂಬರುವ ಚಿತ್ರ ಗೆಹ್ರೈಯಾನ್‌ನ ಪ್ರಚಾರದಲ್ಲಿ ನಿರತರಾಗಿದ್ದಾರೆ, ಇತ್ತೀಚೆಗೆ ಸುದ್ದಿ ಪೋರ್ಟಲ್‌ನೊಂದಿಗೆ ಮಾತನಾಡುವಾಗ ಸಂಬಂಧಗಳಲ್ಲಿನ ದಾಂಪತ್ಯ ದ್ರೋಹವನ್ನು ಹಂಚಿಕೊಂಡಿದ್ದಾರೆ. ಪಾಲುದಾರನಿಗೆ ಮೋಸ ಮಾಡುವುದು ತನಗೆ ಡೀಲ್ ಬ್ರೇಕರ್ ಆಗಿದ್ದರೂ, ಅಂತಹ ಸಂದರ್ಭಗಳಲ್ಲಿ ಹಲವಾರು ಅಂಶಗಳು ಕಾರ್ಯರೂಪಕ್ಕೆ ಬರುತ್ತವೆ ಎಂದು ನಟಿ ಹೇಳಿದರು. ಕರ್ಲಿ ಟೇಲ್ಸ್‌ನಿಂದ ದೀಪಿಕಾ ಉಲ್ಲೇಖಿಸಿದ್ದಾರೆ, “ಇದು ನನಗೆ ಡೀಲ್ ಬ್ರೇಕರ್ ಆಗಿದೆ. ‘ಓಹ್ ಇದು ನನಗೆ ಡೀಲ್ ಬ್ರೇಕರ್’ ಎಂದು ನೇರವಾದ ಉತ್ತರವನ್ನು […]

Advertisement

Wordpress Social Share Plugin powered by Ultimatelysocial