ಅಪ್ಪ-ಅಮ್ಮನಿಗೆ ಮನೆ ಗಿಫ್ಟ್​ ನೀಡಿದ ಧನುಷ್​!

ಕಾಲಿವುಡ್​​​ ನಟ ಧನುಷ್ ನಟನೆಯ ‘ವಾತಿ’ ಸಿನಿಮಾ ಬಿಡುಗಡೆಗೊಂದು ಅದ್ಭುತ ಪ್ರದರ್ಶನ ಕಾಣುತ್ತಿದೆ. ಫೆಬ್ರವರಿ 17 ರಂದು ಈ ಸಿನಿಮಾ ಬಿಡುಗಡೆಗೊಂಡಿದೆ. ರಿಲೀಸ್​ ಆದ 2ನೇ ದಿನದಲ್ಲಿ 11 ಕೋಟಿ ಕಲೆಕ್ಷನ್​ ಮಾಡಿದೆ. ಈ ಸಂತಸದೊಂದಿಗೆ ನಟ ಧನುಷ್ ತನ್ನ ತಂದೆ-ತಾಯಿಗೆ ಮನೆಯೊಂದನ್ನ ಗಿಫ್ಟ್​ ಆಗಿ ನೀಡಿದ್ದಾರೆ.

ಧನುಷ್ ಚೆನ್ನೈನಲ್ಲಿ ಈ ಮನೆಯನ್ನು ತನ್ನ ಪೋಷಕರಿಗಾಗಿ ಗಿಫ್ಟ್​ ನೀಡಿದ್ದಾರೆ. ಸಿನಿಮಾ ನಿರ್ದೇಶಕ ಮತ್ತು ಧನುಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸುಬ್ರಮಣ್ಯಂ ಶಿವ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ” ನನ್ನ ಕಿರಿಯ ಸಹೋದರ ಧನುಷ್ ಅವರ ಹೊಸ ಮನೆ ನನಗೆ ದೇವಸ್ಥಾನದ ಭಾವನೆಯನ್ನು ನೀಡುತ್ತದೆ” ಎಂದು ಬರೆದಿದ್ದಾರೆ.

ಧನುಷ್ ನಟನೆಯ ವಾತಿ ಸಿನಿಮಾ ಇದೀಗ ಥಿಯೇಟರ್​ನಲ್ಲಿ ಭರ್ಜರಿ ಸೌಂಡ್​ ಮಾಡುತ್ತಿದೆ. ಮೊದಲ ದಿನದಂದು ಈ ಸಿನಿಮಾ 9.70 ಕೋಟಿ ಕಲೆಕ್ಷನ್​ ಮಾಡಿದೆ. ಆದರೆ 2ನೇ ದಿನ 11 ಕೋಟಿ ಕಲೆಕ್ಷನ್​ ಮಾಡಿದೆ. ಸದ್ಯ ಬಿಡುಗಡೆಗೊಂಡು ಇಲ್ಲಿಯವರೆಗೆ 20 ಕೋಟಿಯಷ್ಟು ಕಲೆಕ್ಷನ್​​ ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದೆ.

ವಾತಿ ಸಿನಿಮಾವು ಶಿಕ್ಷಣ ಸಂಸ್ಥೆಯಗಳಲ್ಲಿ 3ನೇ ದರ್ಜೆಯ ಜೂನಿಯರ್​​ ಉಪನ್ಯಾಸಕರ ಸುತ್ತ ಸುತ್ತುವ ಕಥಾಹಂದರವನ್ನು ಹೊಂದಿದೆ. ಈ ಸಿನಿಮಾದಲ್ಲಿ ಧನುಷ್​​ ಸಂಸ್ಥೆಗಳ ವಿರುದ್ಧ ನಿಲ್ಲುತ್ತಾರೆ ಮತ್ತು ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ.

ಧನುಷ್ ಜೊತೆಗೆ ವಾತಿ ಸಿನಿಮಾದಲ್ಲಿ ಸಂಯುಕ್ತಾ ಮೆನನ್​ ನಟಿಸಿದ್ದಾರೆ. ಜೊತೆಗೆ ಭರಣಿ, ಪಿ. ಸಾಯಿ ಕುಮಾರ್​ ಸೇರಿದಂತೆ ಕೆಲವು ನಟರು ಈ ಸಿನಿಮಾದಲ್ಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ

Mon Feb 20 , 2023
ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ 15ಕ್ಕೂ ಹೆಚ್ಚು ಹಳ್ಳಿಗಳ ಜನರು ಹೆದ್ದಾರಿ ಬಂದ್ ಮಾಡಿದ್ದು ಕಾರಣವಾಗಿದೆ. ಹನಕೆರೆ ಸಮೀಪ ಅಂಡರ್‌ಪಾಸ್ ನಿರ್ಮಾಣದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೊಂದರೆ ಆಗಲಿದೆ ಎಂದಿದ್ದಾರೆ. ಇದಕ್ಕೆಲದಕ್ಕೂ ಕಾರಣ ಗ್ರಾಮದಿಂದ ಸುಮಾರು 200 ಮೀಟರ್ ದೂರದಲ್ಲಿ ಅಂಡರ್‌ಪಾಸ್ ನಿರ್ಮಾಣವಾಗುತ್ತಿರುವುದು. ಗ್ರಾಮದ ಹೊರವಲಯದಲ್ಲಿ ಅಂಡರ್‌ಪಾಸ್ ಇರುವುದರಿಂದ ಸರಗಳ್ಳತನ, ದರೋಡೆ ಪ್ರಕರಣಗಳು ನಡೆಯುವ ಬಗ್ಗೆ ಆತಂಕಗೊಂಡಿರುವ ಗ್ರಾಮಸ್ಥರು ಸಂಜೆ […]

Advertisement

Wordpress Social Share Plugin powered by Ultimatelysocial