ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈಗೆ ಪಂದ್ಯ ಗೆಲ್ಲಿಸಿಕೊಟ್ಟ ಧೋನಿ!

 

ಮುಂಬೈ: ಪಂದ್ಯಗಳನ್ನು ಫಿನಿಶಿಂಗ್ ಮಾಡುವ ವಿಚಾರಕ್ಕೆ ಬಂದಾಗ ತಾನು ಈಗಲೂ ಅತ್ಯುತ್ತಮವಾಗಿದ್ದೇನೆ ಎಂದು ವಿಶ್ವ ಕ್ರಿಕೆಟ್‌ಗೆ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ನೆನಪಿಸಿದ್ದಾರೆ. 40ರ ವಯಸ್ಸಿನ ಧೋನಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕತ್ವವನ್ನು ತ್ಯಜಿಸಿದ ನಂತರ ಐಪಿಎಲ್ ನಲ್ಲಿ ಇದು ಅವರ ಕೊನೆಯ ಸೀಸನ್ ಆಗಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದರು.

ಆದರೆ ಮಾಜಿ ಭಾರತ ನಾಯಕ ಧೋನಿ ತನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂದು ತೋರಿಸಿಕೊಟ್ಟಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ಗುರುವಾರ ನಡೆದ ಐಪಿಎಲ್- 2022 ಪಂದ್ಯದಲ್ಲಿ, ಸಿಎಸ್ ಕೆ ಗೆಲುವಿಗೆ ಕೊನೆಯ ಓವರ್‌ನಲ್ಲಿ 17 ರನ್ ಅಗತ್ಯವಿತ್ತು. ಚೆನ್ನೈ ಕೊನೆಯ ಓವರ್ ನ ಮೊದಲ ಎಸೆತದಲ್ಲಿ ಡ್ವೈನ್ ಪ್ರಿಟೋರಿಯಸ್ ವಿಕೆಟನ್ನು ಕಳೆದುಕೊಂಡಿತು. ಡ್ವೇನ್ ಬ್ರಾವೋ ತಾನೆದುರಿಸಿದ ಮೊದಲ ಎಸೆತದಲ್ಲಿ ಒಂದು ರನ್ ಗಳಿಸಿ ಧೋನಿಗೆ ಸ್ಟ್ರೈಕ್‌ ನೀಡಿದರು. ಚೆನ್ನೈಗೆ ಅಂತಿಮ ನಾಲ್ಕು ಎಸೆತಗಳಲ್ಲಿ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು. ಈ ವೇಳೆ ಧೋನಿ ಅವರು ಒಂದು ಸಿಕ್ಸರ್ ಅನ್ನು ಸಿಡಿಸುವ ಮೂಲಕ ಮುಂಬೈ ಕೈಯಿಂದ ಗೆಲುವನ್ನು ಕಸಿಯುವ ಸೂಚನೆ ನೀಡಿದರು. ಮುಂದಿನ ಎಸೆತದಲ್ಲಿ ಒಂದು ಬೌಂಡರಿ, ನಂತರ ಎರಡು ರನ್ ಗಳಿಸಿದರು. ಚೆನ್ನೈ ಗೆಲುವಿಗೆ ಅಂತಿಮ ಎಸೆತದಲ್ಲಿ 4 ರನ್ ಅಗತ್ಯವಿದ್ದಾಗ ಬೌಂಡರಿ ಸಿಡಿಸಿದ ಧೋನಿ ತಾನೊಬ್ಬ ಶ್ರೇಷ್ಠ ಫಿನಿಶರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಧೋನಿ ಅವರು ಚೆನ್ನೈಯನ್ನು ಗೆಲುವಿನ ದಡ ಸೇರಿಸಿ ಮೈದಾನದಿಂದ ಹೊರನಡೆಯುತ್ತಿದ್ದಂತೆ ನಾಯಕ ರವೀಂದ್ರ ಜಡೇಜ ನೇತೃತ್ವದಲ್ಲಿ ಚೆನ್ನೈ ಸಹ ಆಟಗಾರರು ಭಾರತೀಯ ದಂತಕತೆಯನ್ನು ಅಭಿನಂದಿಸಲು ತೆರಳಿದರು. ಕೈ ಕುಲುಕುವ ಮೊದಲು ಜಡೇಜ ಧೋನಿಗೆ ತಲೆಬಾಗಿ ನಮಿಸಿದರು.

ಚೆನ್ನೈ ತಾನಾಡಿದ 7ನೇ ಪಂದ್ಯದಲ್ಲಿ 2ನೇ ಗೆಲುವು ದಾಖಲಿಸಿತು. ಮುಂಬೈ ಸತತ 7ನೇ ಪಂದ್ಯವನ್ನು ಸೋಲುವ ಮೂಲಕ ಸೋಲಿನ ಸರಪಳಿ ಮುಂದುವರಿಸಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿಸೆಂಬರ್ ವೇಳೆಗೆ ಆಥಿಯಾ ಹಾಗೂ ರಾಹುಲ್ ಮದುವೆ ಆಗುತ್ತಾರೆ?

Fri Apr 22 , 2022
  ಡಿಸೆಂಬರ್ ವೇಳೆಗೆ ಆಥಿಯಾ ಹಾಗೂ ರಾಹುಲ್ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ರಾಹುಲ್ ಕರ್ನಾಟಕದವರು. ಸುನೀಲ್ ಶೆಟ್ಟಿ ಮೂಲ ಮಂಗಳೂರು. ಈ ಕಾರಣಕ್ಕೆ ದಕ್ಷಿಣ ಭಾರತದ ಶೈಲಿಯಲ್ಲೇ ಮದುವೆ ನಡೆಯಲಿದೆ ಎನ್ನಲಾಗಿದೆ.ಬಾಲಿವುಡ್​ ನಟಿ ಆಥಿಯಾ ಶೆಟ್ಟಿ (Athiya Shetty)ಹಾಗೂ ಟೀಂ ಇಂಡಿಯಾ ಆಟಗಾರ ಕೆ.ಎಲ್​.ರಾಹುಲ್​ (KL Rahul) ಇಬ್ಬರೂ ರಿಲೇಶನ್​ಶಿಪ್​ನಲ್ಲಿದ್ದು ಕೆಲವು ವರ್ಷಗಳು ಕಳೆದಿವೆ. ಇಬ್ಬರೂ ಸಾಕಷ್ಟು ಬಾರಿ ಸುತ್ತಾಟ ನಡೆಸಿದ್ದಾರೆ. ಈ ವಿಚಾರದಲ್ಲಿ ಅವರು ಮುಚ್ಚುಮರೆ ಮಾಡುತ್ತಿಲ್ಲ. ಐಪಿಎಲ್​ನಲ್ಲಿ ಲಖನೌ ತಂಡವನ್ನು […]

Advertisement

Wordpress Social Share Plugin powered by Ultimatelysocial