ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ದಾಸನಪುರದ ಕಾವೇರಿ ನದಿ ಬಳಿ ನಡೆದ ವಿಪತ್ತು, ಪ್ರವಾಹ ನಿರ್ವಹಣೆ ಕುರಿತು ಜಾಗೃತಿಗಾಗಿ ನಡೆದ ಅಣಕು ಪ್ರದರ್ಶನವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ವೀಕ್ಷಿಸಿದರು…ನಂತರ ಮಾತನಾಡಿ ವಿಪತ್ತು ಹಾಗೂ ಪ್ರವಾಸ ಸಂದರ್ಭದಲ್ಲಿ ಸಂತ್ರಸ್ತರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಇಲಾಖೆಗಳು ಸೇರಿ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿದೆ…ನದಿ ಪಾತ್ರಗಳಲ್ಲಿ ಉಂಟಾಗುವ ಪ್ರವಾಹ ಸಂದರ್ಭದಲ್ಲಿ ಸ್ಥಳೀಯರನ್ನು ರಕ್ಷಣೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಸಿಬ್ಬಂದಿಗಳು ಸಹ ಸಜ್ಜಾಗಿದ್ದಾರೆ… ಇದೇ ಸಂದರ್ಭ ತರಬೇತಿ ಪಡೆದ ಸಿಬ್ಬಂದಿಗಳು ಪ್ರತ್ಯಕ್ಷವಾಗಿ ವಿಪತ್ತು ನಿರ್ವಹಣಾ ಸಂಬಂಧ ಕಾವೇರಿ ನದಿಯಲ್ಲಿ ಅಣೋಕು ಪ್ರದರ್ಶನ ನೀಡಲಾಯಿತು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada