ರಾಯಪುರ ಅಧಿವೇಶನ ಕಾಂಗ್ರೆಸ್‌ಗೆ ಹೊಸ ದಿಕ್ಕು ಡಿಕೆ ಶಿವಕುಮಾರ್‌.

 

ಛತ್ತೀಸ್‌ಗಡದ ರಾಯಪುರದಲ್ಲಿ ನಡೆದ ಅಧಿವೇಶನ ಕಾಂಗ್ರೆಸ್‌ಗೆ ಹೊಸ ದಿಕ್ಕು ಸಿಕ್ಕಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅಭಿಪ್ರಾಯಪಟ್ಟರು.ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ರಾಯಪುರ ಅಧಿವೇಶನ ಹೊಸ ದಿಕ್ಕು ಕೊಡ್ತಾ ಇದೆ. ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಹೇಗೆ ಹೋಗಬೇಕು ಎಂದು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.2024 ರ ಚುನಾವಣೆಗೆ ಹೇಗೆ ತಯಾರಿ ಆಗಬೇಕು? ಭಾರತ ಜೋಡೋ ವೇಳೆ ತೆಗೆದುಕೊಂಡ ತೀರ್ಮಾನ ಅನುಷ್ಠಾನ ಮಾಡುವುದು, ಈ ವಿಚಾರಗಳು ರಾಯಪುರದ ಅಧಿವೇಶದಲ್ಲಿ ಚರ್ಚೆ ಆಗಿವೆ ಎಂದು ಮಾಹಿತಿ ನೀಡಿದರು.ಕರ್ನಾಟಕದ ಚುನಾವಣೆಯ ಬಗ್ಗೆ ಚರ್ಚೆ ನಡೆದಿದ್ಯಾ? ಎಂಬ ಪ್ರಶ್ನೆಗೆ ಕರ್ನಾಟಕ ವಿಚಾರ ಚರ್ಚೆ ಆಗಿಲ್ಲ. ರಾಷ್ಟ್ರದದಲ್ಲಿ ಕಾಂಗ್ರೆಸ್ ನೀತಿ ಹೇಗಿರಬೇಕು ಅಂತ ಚರ್ಚೆಯಾಗಿದೆ. ಆದರೆ ಕರ್ನಾಟಕದ ಚುನಾವಣೆಗೆ ಹೈಕಮಾಂಡ್ ನಾಯರು ಪ್ರಚಾರಕ್ಕೆ ಬರ್ತಾರೆ. ಮೂರ್ನಾಲು ದಿನದಲ್ಲಿ ಯಾರು ಬರ್ತಾರೆ ಅಂತ ತಿಳಿಸುತ್ತೇವೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಆಡಳಿತ ಮಾಡುವುದು ನಾವು. ಹಾಗಾಗಿ ನಾವು ಹೆಚ್ಚು ಒತ್ತು ಪ್ರಚಾರಕ್ಕೆ ನೀಡಿದ್ದೇವೆ. ಮೋದಿ, ಅಮಿತ್ ಶಾ ಬಂದು ಆಡಳಿತ ಮಾಡಲ್ಲ. ಮೋದಿ, ಅಮಿತ್‌ ಶಾ ಪಂಚಾಯಿತಿ, ತಾಲೂಕು, ಜಿಲ್ಲೆ ಪ್ರಚಾರಕ್ಕೆ ಬಂದು ಹೋಗಲಿ ಎಂದು ತಿರುಗೇಟು ನೀಡಿದರು.ರಾಜ್ಯಕ್ಕೆ ಬಿಜೆಪಿಯ ನಾಯಕರ ನಿರಂತರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಬಲ್ ಇಂಜಿನ್ ಇದೆ, ಎಲ್ಲಿ ಬೇಕಾದ್ರು ಗಾಡಿ ಓಡಿಸಲಿ ಪದೇ ಪದೆ ಮೋದಿ ಅಮೀತ್ ಶಾ‌ ರಾಜ್ಯಕ್ಕೆ ಬರ್ತಾ ಇರೋದಕ್ಕೆ ಡಿಕೆಶಿ ವ್ಯಂಗ್ಯವಾಡಿದರು.ಇನ್ನು ರಾಯಪುರ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ್ದ ಡಿಕೆಶಿ, ಭಾರತದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳದ ರೀತಿಯಲ್ಲಿ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದ್ದು, ವಿರೋಧ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು, ಚಿದಂಬರಂ ಅವರನ್ನು ಬಿಜೆಪಿಯವರು ತಿಹಾರ್ ಜೈಲಿಗೆ ಹಾಕಿದ್ದರು. ತಾಯಿ ಸೋನಿಯಾ ಗಾಂಧಿ ಅವರು ಅಲ್ಲಿಗೆ ಬಂದು ನಮ್ಮನ್ನು ಭೇಟಿ ಮಾಡಿ ನಮಗೆ ಶಕ್ತಿ ತುಂಬಿದರು. ಇದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾವು ಸದಾ ಗಾಂಧಿ ಕುಟುಂಬಕ್ಕೆ ಚಿರಋಣಿಯಾಗಿರುತ್ತೇವೆ ಎಂದಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಮೂರೇ ತಿಂಗಳಲ್ಲಿ ₹6,000 ಏರಿಕೆ, ₹57,000 ದಾಟಿದ ಚಿನ್ನದ ದರ

Mon Feb 27 , 2023
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿರುವ ಚಿನ್ನದ ದರ ಶುಕ್ರವಾರ ಮತ್ತೆ ಏರಿಕೆ ಕಂಡಿದೆ. ಇತ್ತ ಬೆಳ್ಳಿ ಬೆಲೆಯೂ ಹೆಚ್ಚಳವಾಗಿದ್ದು ಮದುವೆ ಸೀಸನ್‌ನಲ್ಲಿ ಆಭರಣ ಪ್ರಿಯರ ಜೇಬು ಸುಡುವಂತೆ ಮಾಡಿದೆ. ದೃಢವಾದ ಜಾಗತಿಕ ದರಗಳ ಬೆಂಬಲದೊಂದಿಗೆ ಭಾರತೀಯ ಫ್ಯೂಚರ್‌ ಮಾರುಕಟ್ಟೆಗಳಲ್ಲಿ ಶುಕ್ರವಾರ ಚಿನ್ನದ ಬೆಲೆಗಳು ಮತ್ತೊನ್ನೆ ದಾಖಲೆಯ ಮಟ್ಟಕ್ಕೆ ತಲುಪಿವೆ. ಎಂಸಿಎಕ್ಸ್‌ನಲ್ಲಿ ಗೋಲ್ಡ್‌ ಫ್ಯೂಚರ್ಸ್ ದಿನದ ಗರಿಷ್ಠ ಮಟ್ಟದಲ್ಲಿ ಶೇ. 0.3ರಷ್ಟು ಏರಿಕೆ ಕಂಡು 10 ಗ್ರಾಂಗೆ 56,850 ರೂ.ಗೆ ಏರಿಕೆಯಾಗಿವೆ. […]

Advertisement

Wordpress Social Share Plugin powered by Ultimatelysocial