ಕಲರ್ಸ್ ಕನ್ನಡವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.ಈ ಧಾರಾವಾಹಿಯಲ್ಲಿ ಕೀರ್ತಿ ಪಾತ್ರ ಎಲ್ಲರ ಗಮನ ಸೆಳೆದಿದೆ. (ಫೋಟೋ ಕೃಪೆ: ಇನ್ಸ್ಟಾಗ್ರಾಂ)ಧಾರಾವಾಹಿಯಲ್ಲಿ ನಾಯಕ ವೈಷ್ಣವ್ನನ್ನು ಕೀರ್ತಿ ಪ್ರೀತಿ ಮಾಡ್ತಾ ಇರ್ತಾಳೆ. ಆದ್ರೆ ಇದ್ದಕ್ಕಿದ್ದ ಹಾಗೇ, ನನಗೆ ವೈಷ್ಣವ್ ಬೇಡ ಎಂದಿದ್ದಾಳೆ, ಧಾರಾವಾಹಿ ತಿರುವು ಪಡೆಯುತ್ತಿದೆ. (ಫೋಟೋ ಕೃಪೆ: ಇನ್ಸ್ಟಾಗ್ರಾಂ)ಕೀರ್ತಿ ಅವರ ನಿಜವಾದ ಹೆಸರು ತನ್ವಿ ರಾವ್. ಭಾಗ್ಯಲಕ್ಷ್ಮಿ ಧಾರಾವಾಹಿಗೂ ಮುಂಚೆ ಹಲವು ಧಾರಾವಾಹಿಗಳಲ್ಲಿ ತನ್ವಿ ಅವರು ನಟಿಸಿದ್ದಾರೆ.
ಈ ಧಾರಾವಾಹಿಯಲ್ಲಿ ನೆಗೆಟಿವ್ ಶೆಡ್ನಲ್ಲಿ ಕಾಣಿಸಿಕೊಂಡಿದ್ದಾರೆ. (ಫೋಟೋ ಕೃಪೆ: ಇನ್ಸ್ಟಾಗ್ರಾಂ)ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿದ್ದ ರಾಧೆಶ್ಯಾಮ ಧಾರಾವಾಹಿಯಲ್ಲಿ ತನ್ವಿ ಅವರು ನಾಯಕಿ ಆಗಿ ಅಭಿನಯಿಸಿದ್ದರು. ಆ ಧಾರಾವಾಹಿ ಮೂಲಕವೂ ಹೆಸರು ಮಾಡಿದ್ರು. (ಫೋಟೋ ಕೃಪೆ: ಇನ್ಸ್ಟಾಗ್ರಾಂ)ಉದಯ ಟಿವಿಯಲ್ಲಿ ಪ್ರಸಾರವಾಗ್ತಿದ್ದ ಆಕೃತಿ ಧಾರಾವಾಹಿಯಲ್ಲೂ ತನ್ವಿ ರಾವ್ ಅವರು ನಟಿಸಿದ್ದರು. ಅಲ್ಲೂ ಸಹ ಅಭಿಮಾನಿಗಳನ್ನು ಗಳಿಸಿದ್ರು. (ಫೋಟೋ ಕೃಪೆ: ಇನ್ಸ್ಟಾಗ್ರಾಂತನ್ವಿ ಅವರು ಭರತನಾಟ್ಯ ಮಾಡೋದ್ರಲ್ಲೂ ಪ್ರವೀಣರು. ಆಗಾಗ ತಮ್ಮ ನೃತ್ಯದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಾ ಇರ್ತಾರೆ. (ಫೋಟೋ ಕೃಪೆ: ಇನ್ಸ್ಟಾಗ್ರಾಂ)ಕನ್ನಡಲ್ಲದೇ ತನ್ವಿ ಅವರು ತಮಿಳು ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಜಮೆಲ ಎನ್ನುವ ಮುಸ್ಲಿಂ ಪಾತ್ರ ಮಾಡ್ತಿದ್ದು, ಗಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. (ಫೋಟೋ ಕೃಪೆ: ಇನ್ಸ್ಟಾಗ್ರಾಂ)ರಂಗಭೂಮಿಯಲ್ಲಿ ಸಕ್ರಿಯವಾಗಿರುವ ತನ್ವಿ ಅವರು ಆಗಾಗ ನಾಟಕಗಳನ್ನು ಮಾಡ್ತಾ ಇರ್ತಾರೆ. ಇನ್ನು ಒಳ್ಳೆ ಒಳ್ಳೆ ಪಾತ್ರಗಳನ್ನು ಮಾಡುವ ಆಸೆ ಹೊಂದಿದ್ದಾರೆ. (ಫೋಟೋ ಕೃಪೆ: ಇನ್ಸ್ಟಾಗ್ರಾಂ)
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada