ಗರ್ಭಿಣಿ ಮಹಿಳೆ ಸಾವು ಅನಾಥವಾದ ಮಗು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನೆ

ಗರ್ಭಿಣಿ ಮಹಿಳೆ ಸಾವು ಅನಾಥವಾದ ಮಗು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನೆ ಕುಕನೂರು ಪಟ್ಟಣದ ಜಗಜೀವನರಾಂ ಕಾಲೋನಿಯ ನಿವಾಸಿಯಾದ ಹನುಮಂತಪ್ಪ ಘಾಟಿ ಇವರ ಮಗಳು ದಿ.ಉಮಾ ಗಂಡ ದುರಗೇಶ ಛಲವಾದಿ ಎಂಬ ಮಹಿಳೆಯು ಹೆರಿಗೆ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದನ್ನು ಖಂಡಿಸಿ ಕುಕನೂರ ತಾಲೂಕಿನ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನೆ ನಡೆಸಿದರು ದಾರಿಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ ವಿರುದ್ದ ಘೊಷಣೆ ಕೂಗಿದರು ಕುಕನೂರು ಪಟ್ಟಣದಲ್ಲಿ 2018-2019ರಲ್ಲೆ 10 ಕೋಟಿ ವೆಚ್ಚದಲ್ಲಿ ಮಹಿಳಾ ಮತ್ತು ಮಕ್ಕಳ ಹಾಸ್ಪಿಟಲ್ ಸಿದ್ದವಾಗಿದ್ದು 5 ವರ್ಷಗಳೆ ಕಳೆದರು ಹಾಸ್ಪಿಟಲ್ ಉದ್ಘಾಟನೆ ಆಗದಿರುವುದು ಖಂಡನೀಯವಾಗಿದೆ. ಕುಕನೂರಿನ ಸಮೂದಾಯ ಆಸ್ಪತ್ರೆಯಲ್ಲಿ ವೈದ್ಯರು ಕೊರತೆ ವೈಯಕ್ತಿಕ ಸಾಮಾಗ್ರಿಗಳು ಇಲ್ಲದೆ ತಾಲೂಕಿನ ಜನತೆ ಪರದಾಡುವಂತಾಗಿದೆ. ಮತ್ತು ಆಂಬುಲೆನ್ಸ್ ಸೇವೆಯಂತು ಬಡವರ ಕೈಗೆ ನೀಲಕದ ಸೇವೆಯಾಗಿದೆ, ಈ ಪ್ರಕರಣವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರರವರ ಸ್ವಕ್ಷೇತ್ರದಲ್ಲಿ ನಡೆದಿದ್ದುಇದರ ನೇರ ಹೊಣೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಹಾಲಪ್ಪ ಆಚಾರ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಕುಕನೂರ ತಾಲೂಕಿನ ಮಹಿಳಾ ಘಟಕದ ವತಿಯಿಂದ ಆಗ್ರಹಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾನಮತ್ತ ಸ್ವಾಮಿಗೆ ಕಾಳಮೋಕ್ಷ.

Sat Dec 31 , 2022
ಹುಬ್ಬಳ್ಳಿಯ ಗೋಕುಲ ಗ್ರಾಮದ ಅಯ್ತಪ್ಪ ಸ್ವಾಮಿ ದೇವಾಲಯದಲ್ಲಿ ಕಪಾಳಮೋಕ್ಷ. ಗೋಕುಲದ ಮೋಹನ ಗುರುಸ್ವಾಮಿಯಿಂದ ಕಪಾಳಮೋಕ್ಷ. ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ ವ್ಯಕ್ತಿಯಿಂದ ವೃತ ಭಂಗ. ಕಠಿಣ ವೃತ ಪಾಲಿಸುವ ಬದಲು ಕುಡಿದು ಸನ್ನಿದಾನಕ್ಕೆ ಆಗಮಿಸಿದ್ದ ಮಾಲಾಧಾರಿ. ಆತನ ಬಾಯಿಂದ ಬರುತ್ತಿದ್ದ ಮದ್ಯದ ವಾಸನೆಯಿಂದ ಸಿಕ್ಕಿಬ್ಬಿದ್ದ ಮಾಲಾಧಾರಿ. ಕಪಾಳ ಮೋಕ್ಷ ಮಾಡಿ, ಸ್ಥಳದಲ್ಲೇ ಅಯ್ಯಪ್ಪ ಮಾಲೆ ತೆಗೆದ ಗುರುಸ್ವಾಮಿ. ಕಪ್ಪುಬಟ್ಟೆಯನ್ನೂ ತೆಗೆದು ಕಟ್ಟಿಹಾಕುವಂತೆ ಸೂಚಿಸಿದ ಗುರುಸ್ವಾಮಿ. ಘಟನೆಯಿಂದ ಮಾಲಾಧಾರಿಗಳಿಗೆ ಮುಜುಗರ.   […]

Advertisement

Wordpress Social Share Plugin powered by Ultimatelysocial