ಗರ್ಭಿಣಿ ಮಹಿಳೆ ಸಾವು ಅನಾಥವಾದ ಮಗು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನೆ ಕುಕನೂರು ಪಟ್ಟಣದ ಜಗಜೀವನರಾಂ ಕಾಲೋನಿಯ ನಿವಾಸಿಯಾದ ಹನುಮಂತಪ್ಪ ಘಾಟಿ ಇವರ ಮಗಳು ದಿ.ಉಮಾ ಗಂಡ ದುರಗೇಶ ಛಲವಾದಿ ಎಂಬ ಮಹಿಳೆಯು ಹೆರಿಗೆ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದನ್ನು ಖಂಡಿಸಿ ಕುಕನೂರ ತಾಲೂಕಿನ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನೆ ನಡೆಸಿದರು ದಾರಿಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ ವಿರುದ್ದ ಘೊಷಣೆ ಕೂಗಿದರು ಕುಕನೂರು ಪಟ್ಟಣದಲ್ಲಿ 2018-2019ರಲ್ಲೆ 10 ಕೋಟಿ ವೆಚ್ಚದಲ್ಲಿ ಮಹಿಳಾ ಮತ್ತು ಮಕ್ಕಳ ಹಾಸ್ಪಿಟಲ್ ಸಿದ್ದವಾಗಿದ್ದು 5 ವರ್ಷಗಳೆ ಕಳೆದರು ಹಾಸ್ಪಿಟಲ್ ಉದ್ಘಾಟನೆ ಆಗದಿರುವುದು ಖಂಡನೀಯವಾಗಿದೆ. ಕುಕನೂರಿನ ಸಮೂದಾಯ ಆಸ್ಪತ್ರೆಯಲ್ಲಿ ವೈದ್ಯರು ಕೊರತೆ ವೈಯಕ್ತಿಕ ಸಾಮಾಗ್ರಿಗಳು ಇಲ್ಲದೆ ತಾಲೂಕಿನ ಜನತೆ ಪರದಾಡುವಂತಾಗಿದೆ. ಮತ್ತು ಆಂಬುಲೆನ್ಸ್ ಸೇವೆಯಂತು ಬಡವರ ಕೈಗೆ ನೀಲಕದ ಸೇವೆಯಾಗಿದೆ, ಈ ಪ್ರಕರಣವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರರವರ ಸ್ವಕ್ಷೇತ್ರದಲ್ಲಿ ನಡೆದಿದ್ದುಇದರ ನೇರ ಹೊಣೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಹಾಲಪ್ಪ ಆಚಾರ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಕುಕನೂರ ತಾಲೂಕಿನ ಮಹಿಳಾ ಘಟಕದ ವತಿಯಿಂದ ಆಗ್ರಹಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada