ಬೆಳಗಿನ ಆಯಾಸಕ್ಕೆ ಮನೆ ʼಮದ್ದುʼ

ಬೆಳಗಿನ ಆಯಾಸಕ್ಕೆ ಮನೆ ʼಮದ್ದುʼ

ಬೆಳಿಗ್ಗೆ ಎದ್ದ ತಕ್ಷಣ ಆಯಾಸ, ಆಲಸ್ಯ ಎನ್ನುವವರು ಅನೇಕ ಮಂದಿ. ಇದಕ್ಕೆ ಅನೇಕ ಕಾರಣಗಳಿವೆ. ದೀರ್ಘ ಕಾಲದ ಅಸ್ವಸ್ಥತೆ, ನಿದ್ರಾಹೀನತೆ, ಕಳಪೆ ಆಹಾರ, ಥೈರಾಯ್ಡ್, ಅನಿಯಮಿತ ದಿನಚರಿಗಳು, ದೇಹದಲ್ಲಿ ಅತಿಯಾದ ಆಮ್ಲ ಇರುವುದು ಮುಖ್ಯ ಕಾರಣ.

ಬಿಡುವಿಲ್ಲದ ಕೆಲಸದಿಂದಾಗಿ ಎಲ್ಲರಿಗೂ ಸುಸ್ತಾಗೋದು ಕಾಮನ್.

ಆದ್ರೆ ರಾತ್ರಿ ಸುಖಕರ ನಿದ್ದೆ ಬಂದಿದ್ದರೂ ಕೆಲವೊಬ್ಬರಿಗೆ ಬೆಳಿಗ್ಗೆ ಆಯಾಸ ಕಾಣಿಸಿಕೊಳ್ಳುತ್ತದೆ. ಅಂತವರು ತಮ್ಮ ದಿನಚರಿಯಲ್ಲಿ ಹಾಗೂ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಲ್ಲಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೆ ಆಯಾಸ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸಾಕಷ್ಟು ನೀರು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬಿಸಿ ನೀರನ್ನು ಬಾಟಲಿಗೆ ಹಾಕಿ ಕೈಕಾಲುಗಳಿಗೆ ಶಾಖ ಕೊಟ್ಟಕೊಳ್ಳಬಹುದು.

ಸುಸ್ತಾದಾಗ ಚಾಕೋಲೇಟ್ ತಿನ್ನಿ. ಚಾಕೋಲೇಟ್ ತಕ್ಷಣ ಆಯಾಸವನ್ನು ಕಡಿಮೆ ಮಾಡುತ್ತದೆ. ಕೋಕೋದಲ್ಲಿ ಆಯಾಸ ಕಡಿಮೆ ಮಾಡುವ ಶಕ್ತಿ ಇದೆ.

ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಹಾಗೂ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬೇಗ ಮಲಗಿ ಬೇಗ ಏಳುವುದನ್ನು ರೂಢಿಸಿಕೊಳ್ಳಿ.

ಎದ್ದ ತಕ್ಷಣ ತಣ್ಣೀರಿನಲ್ಲಿ ಸ್ನಾನ ಮಾಡಿ. ಇದು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ. ಜೊತೆಗೆ ರಕ್ತಸಂಚಾರ ಸುಲಭವಾಗುವಂತೆ ಮಾಡುತ್ತದೆ.

ಮುಂಜಾನೆ ಬೇಗ ಎದ್ದು ಮನೆಯಲ್ಲಿ ವ್ಯಾಯಾಮ ಮಾಡಿ. ಇದರಿಂದ ಆಯಾಸ ಕಡಿಮೆಯಾಗಿ ಹಿತವೆನಿಸುತ್ತದೆ.

ಬೆಳಿಗ್ಗೆ ಬಿಸಿ ಬಿಸಿ ಟೀ ಕುಡಿಯಿರಿ. ತುಳಸಿ ಅಥವಾ ಪುದೀನಾ ಟೀ ಸೇವನೆ ಮಾಡುವುದು ಒಳ್ಳೆಯದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತಾಂತರ ನಿಷೇಧ ಕಾಯಿದೆ : ವೀರೇಂದ್ರ ಹೆಗ್ಗಡೆಯವರ ಹೆಸರನ್ನು ಎಳೆದು ತಂದ ಡಿಕೆಶಿ

Wed Dec 22 , 2021
ಬೆಂಗಳೂರು, ಡಿ 22: ಬಲವಂತದ ಮತಾಂತರ ತಡೆ ಮಸೂದೆಯನ್ನು ರಾಜ್ಯ ಸರಕಾರ ತರಾತುರಿಯಲ್ಲಿ ಮಂಗಳವಾರ (ಡಿ 21) ಮಂಡಿಸಿದೆ. ನಿರೀಕ್ಷೆಯಂತೆ ವಿರೋಧ ಪಕ್ಷಗಳು ಇದಕ್ಕೆ ಭಾರೀ ವಿರೋಧವನ್ನು ವ್ಯಕ್ತ ಪಡಿಸಿದೆ, ಇದೊಂದು ಅಸವಿಂಧಾನಿಕ ನಡೆ ಎಂದು ಟೀಕಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಶಾಸಕರಿಗೆ ನೀಡಲಾಗುವ ಮಸೂದೆಯ ಪ್ರತಿಯನ್ನು ಹರಿದು ಹಾಕಿದ್ದಾರೆ. “ಬೇರೆ ನೂತನ ಶಾಸಕರಾದರೆ ಒಪ್ಪಿಕೊಳ್ಳಬಹುದಾಗಿತ್ತು, ಹಿರಿಯವರಾದ ನೀವೇ ಈ ರೀತಿ […]

Advertisement

Wordpress Social Share Plugin powered by Ultimatelysocial