ಚಾಮರಾಜನಗರ ತಾಲ್ಲೂಕಿನ ಗೂಳಿಪುರ ಗ್ರಾಮದ ವೀರಶೈವ ಬಡಾವಣೆಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತಿ ವತಿಯಿಂದ ಬೋರ್ವೆಲ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ವಿದ್ಯುತ್ ಹರಿಸಲು ಕಂಬವಿಲ್ಲದೆ ದೂರದಿಂದ ಲೈನ್ ಎಳೆದಿದ್ದಾರೆಈ ಲೈನ್ಗಳು ಮನೆಗಳ ಮೇಲೆ ಹಾದು ಹೋಗಿರುವುದರಿಂದ ವಾಸದ ಮನೆಯವರು ಭಯಪಟ್ಟು ಓಡಾಡುವ ಪರಿಸ್ಥಿತಿ ಉಂಟಾಗಿದೆಇದೇ ರಸ್ತೆಯ ಮೂಲಕ ಶಾಲೆಗೆ ಮಕ್ಕಳು ಸಾರ್ವಜನಿಕರು ದಿನನಿತ್ಯ ಭಯದ ವಾತಾವರಣದಲ್ಲಿ ಓಡಾಡುತ್ತಿದ್ದಾರೆಕಂಬವಿಲ್ಲದೆ ಲೈನ್ ಗಳನ್ನು ಮನೆಯ ಗೋಡೆಗೆ ಹೇಳದಿರುವುದರಿಂದ ಅನಾಹುತಗಳು ಸಂಭವಿಸಿದರೆ ನೇರ ಗ್ರಾಮಪಂಚಾಯತಿ ರವರೆ ಹೊಣೆ ಆಗಿರುತ್ತಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದರುಗ್ರಾಮ ಪಂಚಾಯತಿಗೆ ಅರ್ಜಿ ಕೊಟ್ಟು ಒಂದು ವರ್ಷ ಕಳೆದಿದೆ ಆದರೂ ಸಹ ಅಧಿಕಾರಿಗಳು ತಲೆಕೆಡಿಸಿ ಕೊಳ್ಳುತ್ತಿಲ್ಲ ತಕ್ಷಣ ಗ್ರಾಮ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಚಸ್ಕಂ ಅಧಿಕಾರಿಗಳು ಗಮನ ಹರಿಸಿ, ಸಾರ್ವಜನಿಕರ ಕುಡಿಯುವ ನೀರಿನ ವಿದ್ಯುತ್ ಸಂಪರ್ಕಕ್ಕೆ ಕಂಬ ಹಾಕಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
https://play.google.com/store/apps/details?id=com.speed.newskannada