HOROSCOPE:ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ;

ಮೇಷ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಇತರರಲ್ಲಿ ಅನಗತ್ಯ ಸ್ಪರ್ಧೆ ಮಾಡದಿರಿ. ಅನಿರೀಕ್ಷಿತ ಧನಾಗಮ. ಉದ್ಯೋಗ ವ್ಯವಹಾರಗಳಲ್ಲಿ ಘರ್ಷಣೆಯಿಂದ ಮುನ್ನಡೆ ಸಂಭವಿಸೀತು. ಧಾರ್ಮಿಕ ಕಾರ್ಯಗಳ ನೇತೃತ್ವ.

ವೃಷಭ: ಉತ್ತಮ ಆರೋಗ್ಯ ಸದಾ ಸಂಚಾರಶೀಲತೆ ಬಹುಜನ ಸಂಪರ್ಕ.

ಹಲವು ವಿಧದಲ್ಲಿ ಧನ ಲಾಭ. ದೂರದ ವ್ಯವಹಾರಗಳಲ್ಲಿ ಅನ್ಯರ ಸಹಾಯದಿಂದ ಪ್ರಗತಿ. ಸಾಂಸಾರಿಕ ಸುಖದಲ್ಲಿ ಹೆಚ್ಚಿದ ತೃಪ್ತಿ. ಗುರುಹಿರಿಯರ ಮಾರ್ಗದರ್ಶನ.

ಮಿಥುನ: ಮಾತಾಪಿತೃಗಳಿಂದಲೂ ಹಿರಿಯರಿಂದಲೂ ಸುಖ ಸಿದ್ಧಿ. ಎಲ್ಲರಿಗೂ ಪ್ರೀತಿ ಪಾತ್ರ. ಆರೋಗ್ಯ ಉತ್ತಮ. ವಿದೇಶ ಮೂಲದಿಂದ ಧನಾಗಮ. ಸ್ಫುಟವಾದ ವಿದ್ಯೆ ಸ್ಪಷ್ಟತೆಯಿಂದ ಕೂಡಿದ ಜ್ಞಾನ ಸಂಪಾದನೆ. ಧಾರ್ಮಿಕ ಸ್ಥಳಗಳಿಗೆ ಭೇಟಿ.

ಕರ್ಕ: ದೈಹಿಕವಾಗಿಯೂ ಮಾನಸಿಕವಾಗಿಯೂ ಸುದೃಢ ಆರೋಗ್ಯ. ಉತ್ಸಾಹಶೀಲತೆ. ಭೂಮಿ ಆಸ್ತಿ ವಿಚಾರದಿಂದ ಧನ ಲಾಭ. ಧಾರ್ಮಿಕ ವಿಚಾರಗಳಿಂದಲೂ ಸರಕಾರೀ ವ್ಯವಹಾರಗಳಿಂದ ತೃಪ್ತಿ. ಹಿರಿಯರ ಆರೋಗ್ಯ ಗಮನಿಸಿ.

ಸಿಂಹ: ಅಧ್ಯಯನದಲ್ಲಿ ಆಸಕ್ತಿ. ಉತ್ತಮ ವಾಕ್‌ಚತುರತೆ ಸರ್ವಜನರ ಮಾನ್ಯತೆ. ಆರೋಗ್ಯ ಗಮನಿಸಿ. ಜವಾಬ್ದಾರಿಯುತ ಕೆಲಸ ಕಾರ್ಯದಿಂದ ಧನಾಗಮ. ಕೆಲವೊಮ್ಮೆ ಕುಕೃತ್ಯ ಮಾಡುವ ಸಂಭವ ಎದುರಾದೀತು. ಗುರುಹಿರಿಯರ ಸಹಾಯ.

ಕನ್ಯಾ: ಸುದೃಢ ಆರೋಗ್ಯ. ಬುದ್ಧಿವಂತಿಕೆ ವೃದ್ಧಿ. ಸುಪುಷ್ಟ ಕಾಂತಿಯುತ ಶರೀರ. ಪರರಿಗೆ ಆರ್ಥಿಕ ಸಹಾಯ ಮಾಡುವಾಗ ಎಚ್ಚರ ವಹಿಸುವುದರಿಂದ ಅನಾಹುತ ತಪ್ಪೀತು. ವ್ಯವಹಾರಗಳಲ್ಲಿ ಮಾನ್ಯತೆ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ.

ತುಲಾ: ಪರರ ಸಹಾಯದಿಂದ ಬಹು ಲಾಭ ಸಂಭವ. ದೂರದ ವ್ಯವಹಾರದಲ್ಲಿ ಹೆಚ್ಚಿನ ಧನ ಲಾಭ. ಪಾಲುದಾರರಿಂದ ಸಹಕಾರ ಪ್ರೋತ್ಸಾಹ. ಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ.

ವೃಶ್ಚಿಕ: ಆರೋಗ್ಯ ಉತ್ತಮ. ನಿರೀಕ್ಷಿತ ಸ್ಥಾನ ಸುಖ. ಎಲ್ಲಾ ವಿಚಾರಗಳಲ್ಲಿ ಲಾಭದ ನಿರೀಕ್ಷೆ. ಪ್ರಸಿದ್ಧಿಗೆ ಪರಿಶ್ರಮ. ಆಸ್ತಿ ವಿಚಾರಗಳಿಂದ ಅನಿರೀಕ್ಷಿತ ಧನಾಗಮ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳಿಂದ ಸಂತೋಷ. ಗುರುಹಿರಿಯರಿಂದ ಸಹಕಾರ.

ಧನು: ಅಭಿವೃದ್ಧಿ ಆರೋಗ್ಯ. ಬುದ್ಧಿವಂತಿಕೆ ತಿಳುವಳಿಕೆಯಿಂದ ಕೂಡಿದ ಸ್ಥಿರ ಬುದ್ಧಿ ಪ್ರದರ್ಶನ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ. ಚರ್ಚೆಯಿಂದ ಧನ ಲಾಭ. ಉದ್ಯೋಗ ವ್ಯವಹಾರಗಳಿಂದ ಸಂಪತ್ತು ಸಂಗ್ರಹ. ಸಣ್ಣ ಪ್ರಯಾಣ.

ಮಕರ: ಶಾರೀರಿಕ ಸುಖ ವೃದ್ಧಿ. ಸುಂದರತೆಗೆ ಪ್ರಾದಾನ್ಯತೆ. ಚಂಚಲ ಮನಸ್ಥಿತಿ. ಗಣ್ಯ ವ್ಯಕ್ತಿಗಳ ಸಂಪರ್ಕ. ಧನ ವೃದ್ಧಿ. ಏಕಾಗ್ರತೆಯಿಂದ ಕೂಡಿದ ಉದ್ಯೋಗ ವ್ಯವಹಾರ. ಧಾರ್ಮಿಕ ಕಾರ್ಯಗಳಿಗೆ ಅಡಚಣೆ.

ಕುಂಭ: ಪರಿಶ್ರಮದಿಂದ ಆರೋಗ್ಯ ಸುದೃಢ. ದೀರ್ಘ‌ ಪ್ರಯಾಣ. ತಾಳ್ಮೆ ಸಹನೆ ಅಗತ್ಯ. ಉದ್ಯೋಗದಲ್ಲಿ ಅಕಸ್ಮಾತ್‌ ಧನ ವೃದ್ಧಿ. ವ್ಯವಹಾರ ನಿಮಿತ್ತ ಮಿತ್ರರೊಂದಿಗೆ ಪ್ರಯಾಣ ಸಂಭವ. ದೇವತಾ ಮಂತ್ರ ಅನುಷ್ಠಾನದಿಂದ ನೆಮ್ಮದಿ.

ಮೀನ: ಸರಿಯಾದ ಆಯಾಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ದೂರ ಪ್ರವಾಸದಿಂದ ವ್ಯರ್ಥ ಧನವ್ಯಯ ಸಂಭವ. ಸತ್ಕರ್ಮದಿಂದ ಜನಮನ್ನಣೆಯಿಂದ ಗೌರವದಿಂದ ಕೂಡಿದ ಧನಾಗಮ ಪ್ರಾಪ್ತಿ. ಅವಿವಾಹಿತರಿಗೆ ಕಂಕಣ ಭಾಗ್ಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Hubli road:ಅಭಿವೃದ್ಧಿಗೆ ಪುಷ್ಟಿ ನೀಡುವ 'ವರ್ತುಲ ರಸ್ತೆ'

Tue Dec 28 , 2021
ಹುಬ್ಬಳ್ಳಿ: ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕರ್ನಾಟಕದ ಮಹಾನಗರಗಳಲ್ಲಿ ಹುಬ್ಬಳ್ಳಿಯೂ ಒಂದು. ವಾಣಿಜ್ಯನಗರಿ ಖ್ಯಾತಿಯ ಈ ನಗರ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯೋದ್ಯಮ ಹಾಗೂ ವ್ಯಾಪಾರ-ವಹಿವಾಟಿನ ಕೇಂದ್ರವೂ ಹೌದು. ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ರೈಲ್ವೆ ಸಂಪರ್ಕ, ವಿಮಾನ ನಿಲ್ದಾಣ, ಆಸ್ಪತ್ರೆಗಳು, ಕೈಗಾರಿಕೋದ್ಯಮ ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹುಬ್ಬಳ್ಳಿ ಗಮನ ಸೆಳೆದಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುವ ನಗರವು ದಶದಿಕ್ಕುಗಳಿಗೂ ಸಂಪರ್ಕ ಕಲ್ಪಿಸಲಿದ್ದು, ಮೂರು ರಾಷ್ಟ್ರೀಯ ಹೆದ್ದಾರಿಗಳು […]

Advertisement

Wordpress Social Share Plugin powered by Ultimatelysocial