ಎಕ್ಸ್‌ಪ್ರೆಸ್‌ ರೈಲಿಗೂ ಕಲ್ಲು ತೂರಾಟ.

ಬೆಂಗಳೂರು : ಚೆನೈ- ಬೆಂಗಳೂರು- ಮೈಸೂರು ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.ಶನಿವಾರ ಬೆಳಗ್ಗೆ ಘಟನೆ ನಡೆದಿದೆ. ಇದರ ಪರಿಣಾಮ ರೈಲಿನ ಸಿ4 ಹಾಗೂ ಸ5 ಬೋಗಿಯ ಆರು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಮತ್ತು ಇತರರಿಗೆ ಯಾವುದೇ ಗಾಯವಾಗಿಲ್ಲ.ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ರೈಲು (ಸಂಖ್ಯೆ 20607) ಕೆ.ಆರ್‌.ಪುರಂ ರೈಲ್ವೆ ನಿಲ್ದಾಣದಿಂದ ಬೆಂಗಳೂರು ಕಂಟೋನ್ಮೆಂಟ್‌ಗೆ ಹೊರಟಿತ್ತು. ಆಗ ಕಲ್ಲು ತೂರಾಟ ನಡೆದಿದೆ. ಒಡೆದಿರುವ ಗಾಜಿನ ರಿಪೇರಿಗೆ ಗಣನೀಯ ಹಣ ವೆಚ್ಚವಾಗಲಿದೆ. ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರ ಸಹಯೋಗದೊಂದಿಗೆ ನೈಋತ್ಯ ರೈಲ್ವೆ ಅಧಿಕಾರಿಗಳ ಗಸ್ತು ಪಡೆ ಸಂಚರಿಸಲಿದ್ದು, ಕಾವಲನ್ನು ಹೆಚ್ಚಿಸಲಿದೆ. ಈ ಹಿಂದೆಯೂ ವಂದೇ ಭಾರತ್‌ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಘಟನೆ ಸಂಬಂಧ ಆರ್ ಪಿ ಎಫ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.ಕಂಟೋನ್ಮೆಂಟ್ ಹಾಗೂ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಭಾನುವಾರದಿಂದ ಗಸ್ತು ತಿರುಗಲಿದ್ದಾರೆ. ವಂದೇ ಭಾರತ್ ರೈಲು ಬರುವ ಸಮಯದಲ್ಲಿ ಪ್ಯಾಟ್ರೋಲಿಂಗ್ ನಡೆಯಲಿದೆ. ಬೆಳಗ್ಗೆ 8.30 ರಿಂದ ರೈಲು ಹೋಗುವವರೆಗೆ ಟ್ಯಾನರಿ ರಸ್ತೆ ಬ್ರಿಡ್ಜ್, ಕಲ್ಲಪಲ್ಲಿ ಸ್ಮಶಾನ, ಜೀವನಹಳ್ಳಿ ಸೇರಿ ಹಲವೆಡೆ ಕಡೆ ಟ್ರ್ಯಾಕ್ ಪ್ಯಾಟ್ರೋಲಿಂಗ್ ನಡೆಯಲಿದೆ. ಕಲ್ಲು ತೂರಿದ ಕಿಡಿಗೇಡಿಗಳಿಗೆ ಪೊಲೀಸರ ಶೋಧ ನಡೆದಿದೆ. ಬೆಂಗಳೂರು ಸಿಟಿ, ಕೆಂಗೇರಿ, ಹೆಜ್ಜಾಲ, ಕಂಟೋನ್ಮೆಂಟ್ ನಿಂದ ಸಿಟಿ ಹೊರ ಭಾಗದಲ್ಲಿ ಕೂಡ ಟ್ರ್ಯಾಕ್ ಪ್ಯಾಟ್ರೋಲಿಂಗ್ ನಡೆಯಲಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಚಿತ್ರರಂಗಕ್ಕಿಂತಲೂ ಉತ್ತಮ ಎಂದ ನಟ ನಾಸೀರುದ್ದೀನ್ ಶಾ!

Sun Feb 26 , 2023
ಬೆಂಗಳೂರು: ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಚಿತ್ರರಂಗದ ಕಮರ್ಷಿಯಲ್‌ ಸಿನಿಮಾಗಳ ದೊಡ್ಡ ಶಕ್ತಿ ಎಂದರೆ ಸ್ವಂತಿಕೆ ಎನ್ನುತ್ತಾರೆ ನಟನಾಸೀರುದ್ದೀನ್ ಶಾ ̤ ಈ ಚಲನಚಿತ್ರೋದ್ಯಮಗಳು ಯಾವಾಗಲೂ ಏನಾದರೂ ಸೃಜನಶೀಲತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿವೆ. ಆ ಕಾರಣದಿಂದಾಗಿ ಸತತವಾಗಿ ಯಶಸ್ವಿಯಾಗಲು ಕಾರಣ ಎಂದು ಸಂದರ್ಶನವೊಂದರಲ್ಲಿ ಹೇಳಿದರು. ದಕ್ಷಿಣ ಭಾರತದ ಸಿನಿಮಾಗಳು ಬಹಳ ಇಮ್ಯಾಜಿನೇಟಿವ್‌ ದಕ್ಷಿಣದ ಚಲನಚಿತ್ರ ನಿರ್ದೇಶಕರು ತಮ್ಮ ಹಾಡಿನ ದೃಶ್ಯಗಳನ್ನು ಚಿತ್ರೀಕರಿಸುವ ವಿಧಾನದಲ್ಲಿಯೂ ಇಮ್ಯಾಜಿನೇಟಿವ್‌ ಆಗಿ, ಅವುಗಳನ್ನು ಭವ್ಯವಾಗಿ, ಅದ್ಭುತವಾಗಿ […]

Advertisement

Wordpress Social Share Plugin powered by Ultimatelysocial