ಬೆಂಗಳೂರು: ಆಗಷ್ಟೇ ಕೆಲಸ ಮುಗಿಸಿಕೊಂಡು ತರಕಾರಿ ಬ್ಯಾಗ್ (Vegetable Bag) ಸಮೇತ ಮನೆ ಕಡೆಗೆ ಹೊರಟಿದ್ದರು. ಮನೆಗೆ (Home) ಬರುವುದು ಮಗಳ (Daughter) ಕೈಗೆ ತರಕಾರಿ ಬ್ಯಾಗ್ ಕೊಟ್ಟು, ಅರ್ಜೆಂಟ್ ಕೆಲಸ ಇದೆ ಹೋಗಿ ಬರುತ್ತೇನೆ, ಮನೆ ಲಾಕ್ ಮಾಡಿಕೊಂಡು ಮಲಗಿ ಅಂತ ಹೇಳಿ ಹೋಗಿದ್ದರು.
ರಾತ್ರಿ 9ರ ಸುಮಾರಿಗೆ ಕೊಚ್ಚಿ ಕೊಂದ ದುಷ್ಕರ್ಮಿಗಳು!
ಕೊಲೆಯಾದ ದಿನೇಶ್ ಮಂಗನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಾರ್ಪೆಂಟರ್ ಜೊತೆಗೆ ಮನೆ ತೋರಿಸುವ ಬ್ರೋಕರ್ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕೆಲಸ ಮುಗಿಸಿ, ತರಕಾರಿ ತಗೊಂಡು ಮನೆಗೆ ಬಂದಿದ್ದ ದಿನೇಶ್, ಮನೆ ಮುಂದೆಯೇ ನಿಂತು ಹಾರ್ನ್ ಮಾಡಿ ಮಗಳನ್ನು ಕರೆದು ತರಕಾರಿ ಬ್ಯಾಗ್ ಕೊಟ್ಟಿದ್ದರು.
ಬಳಿಕ ಅರ್ಜೆಂಟ್ ಕೆಲಸ ಇಟೀಂಗಳಿಂದಲೂ ಸ್ಥಳ ಪರಿಶೀಲನೆ!ದೆ, ನಾನು ಬರೋದು ಸ್ವಲ್ಪ ತಡ ಆಗುತ್ತೆ, ಡೋರ್ ಲಾಕ್ ಮಾಡಿಕೊಂಡು ಮಲಗಿರಿ ಅಂತ ಹೇಳಿ ಹೋಗಿದ್ದರು. ಹೀಗೆ ಹೋದ 10 ನಿಮಿಷಕ್ಕೆ ದಿನೇಶ್ರನ್ನು ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದರು.ಶ್ವಾನದಳ, ಬೆರಳಚ್ಚು
ಬೆರಳಚ್ಚು ಹಾಗೂ ಶ್ವಾನದಳ ಪರಿಶೀಲನೆ ಮಾಡಿದ್ದು, ಆರೋಪಿಗಳಿಗಾಗಿ ಬಲೆಬೀಸಿ ಬಂಧಿಸಿದ್ದಾರೆ. ಕೊಲೆಗೂ ಮುನ್ನ ದಿನೇಶ್ಗೆ ಬಾಪೂಜಿನಗರ ನಿವಾಸಿ ಪೇಂಟರ್ ಅರುಣ್ ಎಂಬಾತ ನಾಲ್ಕೈದು ಬಾರಿ ಕರೆ ಮಾಡಿದ್ದು, ಘಟನೆ ಬಳಿಕ ಅರುಣ್ ಫೋನ್ ಸ್ವಿಚ್ ಆಫ್ ಆಗಿದ್ದು, ಮನೆ ಬಿಟ್ಟು ತೆರಳಿದ್ದ. ಕೊಲೆ ಹಿಂದೆ ಅರುಣ್ ಇದ್ದಾನ ಅನ್ನೋ ಶಂಕೆ ವ್ಯಕ್ತವಾಗಿತ್ತು, ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada