ಮೊದಲ ಪತ್ನಿ ಕಣ್ತಪ್ಪಿಸಿ ಮದುವೆ ಆಗಿದ್ದ ವ್ಯಕ್ತಿಯ ಎರಡನೇ ಪತ್ನಿ ಸೀಮಂತ ಕಾರ್ಯಕ್ರಮ.

ಮೊದಲ ಪತ್ನಿ ಕಣ್ತಪ್ಪಿಸಿ ಮದುವೆ ಆಗಿದ್ದ ವ್ಯಕ್ತಿಯ ಎರಡನೇ ಪತ್ನಿ ಸೀಮಂತ ಕಾರ್ಯಕ್ರಮದ ವೇಳೆ ಮಾರಾಮಾರಿ ನಡೆದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ಚಂದ್ರ ಲೇ ಔಟ್ ನ ತೇಜಸ್ ಎಂಬಾತ ಮೊದಲ ಪತ್ನಿ ಚೈತ್ರ ಕಣ್ತಪ್ಪಿಸಿ ಎರಡನೇ ಮದುವೆ ಆಗಿದ್ದನು. ಇಂದು ಎರಡನೇ ಪತ್ನಿ ಸೀಮಂತ ಕಾರ್ಯಕ್ರಮ ಬೆಂಗಳೂರಿನ ಚಂದ್ರ. ಲೇ ಔಟ್ ನಲ್ಲಿ ನಡೆಯುತ್ತಿತ್ತು. ಈ ವಿಚಾರ ಹೇಗೊ ಮೊದಲ ಪತ್ನಿಗೆ ತಿಳಿಯಿತು. ತೇಜಸ್ ನ ಎರಡನೇ ಪತ್ನಿ ಸೀಮಂತ ಕಾರ್ಯ ತಿಳಿದು ಮೊದಲ ಪತ್ನಿ ಚೈತ್ರ ಕುಟುಂಬ ಅಲ್ಲಿಗೆ ಹೋಗಿ ಪ್ರಶ್ನೆ ಮಾಡಿದ್ರು‌. ಈ ವೇಳೆ ಮಾತಿನ ಚಕಮಕಿ ನಡೆಯಿತು.ಮೊದಲ ಪತ್ನಿ ಹಾಗೂ ತಾಯಿ ಮೇಲೆ ತೇಜಸ್ ಕುಟುಂಬ ಮಾರಣಾಂತಿಕವಾಗಿ ಹಲ್ಲೆ ಮಾಡಿದೆ. ತೇಜಸ್ ಹಾಗೂ ಚೈತ್ರ 2018 ರಲ್ಲಿ ಮದುವೆ ಆಗಿದ್ದರು. ಮದುವೆ ನಂತರವು ತೇಜಸ್ ಬೇರೋಬ್ಬರ ಜೊತೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದನು.ಗಂಡನ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಈ ಹಿಂದೆ ತೇಜಸ್ ಪತ್ನಿ ಚೈತ್ರಳಿಗೆ ಹಲ್ಲೆ ಮಾಡಿದ್ದನು. ಡಿವೋರ್ಸ್ ಕೇಸ್ ಕೋರ್ಟ್ ನಲ್ಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗದ ‘ಅಪ್ಪಾಜಿ’ ಎಂದು ಪ್ರಖ್ಯಾತರು.

Thu Feb 9 , 2023
ಹುಣಸೂರು ಕೃಷ್ಣಮೂರ್ತಿಗಳು ‘ಸತ್ಯ ಹರಿಶ್ಚಂದ್ರ’ ಅಂತಹ ಶ್ರೇಷ್ಠ ಚಿತ್ರ ನಿರ್ದೇಶಿಸಿದವರು; ‘ಬಂಗಾರದ ಮನುಷ್ಯ’, ‘ಭೂತಯ್ಯನ ಮಗ ಅಯ್ಯು’ ಅಂತಹ ಚಿತ್ರಗಳಿಗೆ ಚಿತ್ರ ಸಾಹಿತ್ಯ ರಚಿಸಿದವರು; ‘ಬೊಂಬೆಯಾಟವಯ್ಯ’, ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’, ‘ಮಾನವ ಮೂಳೆ ಮಾಂಸದ ತಡಿಕೆ’, ‘ನಗು ನಗುತಾ ನಲಿ’ ಅಂತಹ ಹಲವಾರು ಶ್ರೇಷ್ಠ ಹಾಡುಗಳನ್ನು ಬರೆದವರು; ರಾಜ್ ಕುಮಾರ್, ಉದಯಕುಮಾರ್, ನರಸಿಂಹರಾಜು, ದ್ವಾರಕೀಶ್ ಅಂತಹ ಕಲಾವಿದರಿಂದ ಶ್ರೇಷ್ಠ ಮಟ್ಟದ ಅಭಿನಯ ಹೊರಹೊಮ್ಮಿಸಿದ ಧೀಮಂತ ದಿಗ್ದರ್ಶಕರು. ಕನ್ನಡ ಚಿತ್ರರಂಗದಲ್ಲಿ ಹುಣಸೂರು […]

Advertisement

Wordpress Social Share Plugin powered by Ultimatelysocial