ಬೆಂಗಳೂರು: ಭಾನುವಾರ (ಜೂ.11) ರಿಂದ ಜಾರಿಯಾದ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ರಾಜ್ಯ ಸರ್ಕಾರ ಮತ್ತೊಂದು ಹೊಸ ಷರತ್ತು ವಿಧಿಸಿ ಗೊಂದಲಕ್ಕೆ ಎಡೆಮಾಡಿದೆ.ಉಚಿತವಾಗಿ ಪ್ರಯಾಣ ಬೆಳೆಸಲು ಬಯಸುವ ಮಹಿಳೆಯರು ಸ್ಟಿಕ್ಕರ್ ಇರುವ ಸಾಮಾನ್ಯ ಬಸ್ಗಳನ್ನು ಮಾತ್ರ ಏರಬೇಕು. ಇಲ್ಲದಿದ್ದರೆ ತಮ್ಮ ಹಣ ಕೊಟ್ಟು ಪ್ರಯಾಣಿಸಬೇಕು.
ಸಾರಿಗೆ ಸಚಿವ ರಾಮಲಿಂಗರೆಡ್ಡಿಇಂತದೊಂದು ಹೊಸ ಷರತ್ತು ವಿಧಿಸಿದ್ದಾರೆ. ಹೀಗಾಗಿ ಮಹಿಳೆಯರು ಸ್ಟಿಕ್ಕರ್ ಇರುವ ಬಸ್ಗಳಲ್ಲಿ ಮಾತ್ರ ಪ್ರಯಾಣಿಸಬಹುದಾಗಿದೆ.ಇನ್ನೂ ಸ್ಟಿಕ್ಕರ್ ಇರುವ ಅಂತರಾಜ್ಯ ಬಸ್ಗಳಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದ್ದು ಬಸ್ ರಾಜ್ಯದ ಗಡಿ ಗಾಟಿದಾಕ್ಷಣ ಹಣ ಕೊಟ್ಟು ಪ್ರಯಾಣಿಸಬೇಕು ಎಂದು ತಿಳಿಸಿದ್ದಾರೆ.
ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಕಾರ್ಯಗತವಾಗಿರುವ ಮೊದಲ ಯೋಜನೆ ಇದಾಗಿದ್ದು ಸರ್ಕಾರ ಅಧಿಕಾರಕ್ಕೆ ಬಂದ 1 ತಿಂಗಳೊಳಗೆ ʻಶಕ್ತಿʼ ಯೋಜನೆ ಜಾರಿಗೆ ತಂದಿರುವುದು ಗಮನಾರ್ಹ ಇಂದು ಬಾನುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಇನ್ನೂ ಮಧ್ಯಾಹ್ನ 1 ಗಂಟೆಯ ನಂತರ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದೆ.ಉಚಿತ ಪ್ರಯಾಣದ ಯೋಜನೆಯಿಂದ ಪ್ರತಿದಿನ 41.8 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಿದೆ.
https://play.google.com/store/apps/details?id=com.speed.newskannada