ಗಾನಕೋಗಿಲೆ ಲತಾ ಮಂಗೇಶ್ಕರ್​ಗೆ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ ಪಾಕ್ ಗಾಯಕ

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್​​ ಫೆಬ್ರವರಿ 6ರಂದು ತಮ್ಮ ಅಭಿಮಾನಿಗಳನ್ನು ತೊರೆದು ಬಾರದ ಲೋಕಕ್ಕೆ ತೆರಳಿದರು. ಲತಾ ಮಂಗೇಶ್ಕರ್​ರ ಸಾವಿನ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಕೇವಲ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಕೂಡ ಅಭಿಮಾನಿಗಳು ಸಂತಾಪ ಸೂಚಿಸಿದ್ದರು.
ಲತಾ ಮಂಗೇಶ್ಕರ್​ ನಿಧನದ ಶೋಕ ಕೇವಲ ಭಾರತ ಮಾತ್ರವಲ್ಲದೇ ಗಡಿಯಾಚೆಗೂ ದಾಟಿದ್ದು ಪಾಕಿಸ್ತಾನ ಗಾಯಕ ಅತೀಫ್​ ಅಸ್ಲಾಂ ಕೂಡ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಗಿದೆ.‌ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತೀಫ್​​ ಲತಾ ಮಂಗೇಶ್ಕರ್​​ ಫೋಟೋದ ಹಿನ್ನೆಲೆಯಲ್ಲಿ ಏಕ್​ ಪ್ಯಾರ್​ ಕಾ ನಗ್ಮಾ ಹೈ ಹಾಡನ್ನು ಹಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಹಾಗೂ ನೆಟ್ಟಿಗರು ಅತಿಫ್​ ಅಸ್ಲಾಂರ ಈ ಹಾಡಿಗೆ ಫಿದಾ ಆಗಿದ್ದಾರೆ.

ಈ ವಿಡಿಯೋ ಕಮೆಂಟ್​ ಮಾಡಿದ ನೆಟ್ಟಿಗರೊಬ್ಬರು ಸಂಗೀತಕ್ಕೆ ಯಾವುದೇ ಎಲ್ಲೆಯಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು ಅತಿಫ್​ ಅಸ್ಲಾಂರಿಂದ ಅತ್ಯದ್ಭುತವಾದ ಅರ್ಪಣೆ ಎಂದಿದ್ದಾರೆ. ಇದೇ ರೀತಿ ಸಾಕಷ್ಟು ಮಂದಿ ಅತೀಫ್​ ಅಸ್ಲಾಂ ಲತಾ ಮಂಗೇಶ್ಕರ್​​ರಿಗೆ ಸಲ್ಲಿಸಿದ ಶ್ರದ್ಧಾಂಜಲಿಯನ್ನು ಹೊಗಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೈಬಿಟ್ಟ ನಂತರ ತಮ್ಮ ಮಾತಿನಿಂದ ಹಿಂದೆ ಸರಿದಿದ್ದಾರೆ ಎಂದು ವೃದ್ಧಿಮಾನ್ ಸಹಾ ಆರೋಪಿಸಿದ್ದಾರೆ.

Sun Feb 20 , 2022
  ಕೋಲ್ಕತ್ತಾ: ಏಕದಿನ ಕ್ರಿಕೆಟ್‌ನಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಮಾಜಿ ಆಟಗಾರರಿಗೆ ಮಾಹಿತಿ ನೀಡಲಾಗಿತ್ತು ಎಂದು ಹೇಳಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೇಳಿಕೆಗೆ ಸ್ವಲ್ಪ ಸಮಯದ ಹಿಂದೆ ಆಗಿನ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವ್ಯತಿರಿಕ್ತರಾಗಿದ್ದರು. ಇದೀಗ, ಭಾರತದ ಹಿರಿಯ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಗಂಗೂಲಿ ಅವರು ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ. ಬಿಸಿಸಿಐ ಮುಖ್ಯಸ್ಥರು ತಾವು ವ್ಯವಹಾರದ ಚುಕ್ಕಾಣಿ ಹಿಡಿದಿರುವವರೆಗೂ ತಂಡದಲ್ಲಿ ಸ್ಥಾನ […]

Advertisement

Wordpress Social Share Plugin powered by Ultimatelysocial