ದೆಹಲಿಯಲ್ಲಿ ಯಾವ ವರಿಷ್ಠರನ್ನೂ ಭೇಟಿ ಮಾಡಿಲ್ಲ : ಆರಗ ಜ್ಞಾನೇಂದ್ರ!

ಬೆಂಗಳೂರು : ‘ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಬೆಳಗ್ಗೆ ಹೇಳಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ.ರಾತ್ರಿ ಹೋಗಿ ಈಗ ಬಂದಿದ್ದೇನೆ.

ನಿನ್ನೆ ನಾನು ಹೋಗುವಾಗ ಸಿಎಂ ಕೂಡಾ ದೆಹಲಿಯಲ್ಲೇ ಇದ್ದರು, ಅವರನ್ನೂ ಭೇಟಿ ಮಾಡಿದ್ದೇನೆ ಎಂದರು.

ಬೆಳಗ್ಗೆ 8 ಗಂಟೆಗೆ ಒಬ್ಬರನ್ನು ಭೇಟಿ ಮಾಡಬೇಕಿತ್ತು,ಯಾವ ವರಿಷ್ಠರನ್ನೂ ಭೇಟಿ ಮಾಡಿಲ್ಲ.ಪ್ರಹ್ಲಾದ್ ಜೋಷಿ ಅವರನ್ನು ಎಲ್ಲಿ ಭೇಟಿ ಮಾಡಿದ್ದೇನೆ? ನಾನು ಅಲ್ಲಿ ಹೋದಾಗ ಅವರು ಈ ಕಡೆ ಬಂದಿದ್ದಾರೆ ಎಂದರು.

ಸಂಪುಟ ವಿಚಾರದಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ವೇಳೆ ಗೃಹ ಸಚಿವರು ತುರ್ತಾಗಿ ದೆಹಲಿಗೆ ತೆರಳಿದ್ದು ಭಾರೀ ಕುತೂಹಲ ಮೂಡಿಸಿತ್ತು ಮಾತ್ರವಲ್ಲದೆ ಅವರ ಖಾತೆಯೂ ಬದಲಾಗಲಿದೆ ಎನ್ನುವ ಕುರಿತು ಚರ್ಚೆಗಳು ನಡೆದಿದ್ದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

'ಶಿವ' ಶಿವಾ.. 'ಪದ್ಮಾವತಿ' Troll ಮಾಡ್ತಿದ್ಯಂತೆ ಕಾಣದ 'ಕೈ'? ತಾವೇ ಖುದ್ದು ಸಾಕ್ಷಿ ಕೊಟ್ರು ರಮ್ಯಾ!

Thu May 12 , 2022
  ಬೆಂಗಳೂರು: ಮೋಹಕ ತಾರೆ, ಸ್ಯಾಂಡಲ್‌ವುಡ್ ಕ್ವೀನ್ (Sandalwood Queen) ರಮ್ಯಾ (Ramya) ಮತ್ತೆ ಸಿನಿಮಾಕ್ಕೆ (Cinema) ಬರ್ತಾರೆ ಅಂತ ಅಭಿಮಾನಿಗಳು (Fans) ಕಾಯುತ್ತಿದ್ದಾರೆ. ಆದ್ರೆ ‘ಪದ್ಮಾವತಿ’ ಮಾತ್ರ ಇತ್ತ ಸಿನಿಮಾಗಳೂ ಬೇಡ, ಅತ್ತ ರಾಜಕೀಯವೂ (Politics) ಬೇಡ ಅಂತ ಸುಮ್ಮನೆ ಇದ್ದಾರೆ. ಈ ಮಧ್ಯೆ ಅವ್ರು ಸಿನಿಮಾಗೆ ಬರ್ತಾರೆ ಅನ್ನೋ ಸುದ್ದಿಯೂ ಹರಿದಾಡ್ತಿತ್ತು. ಇದೀಗ ರಮ್ಯಾ ತಮ್ಮ ಸಿನಿಮಾಗಳಿಂದ ಅಲ್ಲದೇ, ಬೇರೆ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಅದು ಕೆಪಿಸಿಸಿ (KPCC) […]

Advertisement

Wordpress Social Share Plugin powered by Ultimatelysocial